6
  • Latest

ಭೂತ ಇಲ್ಲ.. ಪ್ರೇತವಿಲ್ಲ.. ಆದರೂ ಆ ಸ್ಮಶಾನದಲ್ಲಿ ನಿತ್ಯವೂ ಕೇಳುವುದು ಅಳುವ ಸದ್ದು!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Saturday, July 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಭೂತ ಇಲ್ಲ.. ಪ್ರೇತವಿಲ್ಲ.. ಆದರೂ ಆ ಸ್ಮಶಾನದಲ್ಲಿ ನಿತ್ಯವೂ ಕೇಳುವುದು ಅಳುವ ಸದ್ದು!

AchyutKumar by AchyutKumar
in ಸ್ಥಳೀಯ

ಅಂಕೋಲಾ: ರಾತ್ರಿ 12 ಗಂಟೆ ನಂತರ ಕೋಟೆವಾಡದ ಸ್ಮಶಾನದಿಂದ ಅಳವ ಸದ್ದು ಕೇಳಿ ಬರುತ್ತಿದ್ದು, ಅವರ್ಸಾದ ಮಹಿಳೆಯೊಬ್ಬರು `ಇದು ನನ್ನ ಗಂಡನ ಧ್ವನಿ’ ಎಂದು ದೃಢೀಕರಿಸಿದ್ದರು. ಆದರೆ, ಯಾರಿಗೂ ಆ ವೇಳೆ ಸಮಾಧಿ ಬಳಿ ಹೋಗುವ ಧೈರ್ಯವಾಗಿರಲಿಲ್ಲ. ಕೊನೆಗೂ ಪೊಲೀಸರು ಸ್ಮಶಾನ ಪ್ರವೇಶಿಸಿ ಆ ಧ್ವನಿ ರಹಸ್ಯವನ್ನು ಬಯಲಿಗೆಳೆದರು!

ಅವರ್ಸಾದ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಕೋಟೆವಾಡದಲ್ಲಿ ವಾಸವಾಗಿದ್ದರು. ಅಪಘಾತದಲ್ಲಿ ಆ ಮಹಿಳೆಯ ಪತಿ ಸಾವನಪ್ಪಿದ್ದು, ಕೋಟೆವಾಡದ ಕ್ರಿಶ್ಚಿಯನ್ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆದಿತ್ತು. ಹೀಗಾಗಿ `ಮಗುವನ್ನು ನೆನೆದು ಪತಿ ಅಳುತ್ತಿದ್ದಾರೆ’ ಎಂದು ಆ ಮಹಿಳೆ ಎಲ್ಲಾ ಕಡೆ ಹೇಳಿಕೊಂಡಿದ್ದರು. ಕೆಲವರಿಗೆ ಮಧ್ಯಾಹ್ನದ ವೇಳೆ ಸಹ ಅಳವು ಸದ್ದು ಕೇಳುತ್ತಿದ್ದು, ಅಳುವಿನ ರಹಸ್ಯ ಹುಡುಕಿ ಹೋದವರು ಯಾರು ಇರಲಿಲ್ಲ. ಹೀಗಾಗಿ ಅಳುವ ಸದ್ದು ಕೇಳಿದಾಗಲೆಲ್ಲ ಅನೇಕರು ಬೆಚ್ಚಿ ಬೀಳುತ್ತಿದ್ದರು.

ಭಾನುವಾರ ರಾತ್ರಿ ಅಂಕೋಲಾ ಉತ್ಸವ ಮುಗಿಸಿ ಮನೆಗೆ ಮರಳುತ್ತಿದ್ದವರಿಗೂ ಸ್ಮಶಾನದೊಳಗಿನ ಸದ್ದು ಕೇಳಿತು. ಪುರುಷ ಧ್ವನಿಯೊಂದು ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಖಚಿತಪಡಿಸಿಕೊಂಡ ಜನ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಮಶಾನಕ್ಕೆ ಹಾಕಿದ್ದ ಬೀಗ ತೆರವಾಗಿರುವುದು ಹಾಗೂ ಸ್ಮಶಾನದ ಅಂಚಿನಲ್ಲಿ ಬೈಕು ಅನಾಥ ಸ್ಥಿತಿಯಲ್ಲಿರುವ ವಿಷಯವನ್ನು ಮುಟ್ಟಿಸಿದರು. ಆದರೆ, ಸ್ಮಶಾನದ ಒಳಗೆ ಪ್ರವೇಶಿಸಲು ಅಲ್ಲಿನವರು ಸಹ ಧೈರ್ಯ ಮಾಡಲಿಲ್ಲ.

ಪೊಲೀಸರು ಸ್ಮಶಾನದ ಬಳಿ ಬಂದರು. ಆಗ, ಅವರ ಜೊತೆ ಒಂದಿಬ್ಬರು ಒಳಗೆ ಹೋದರು. ಕತ್ತಲೆಯಲ್ಲಿ ಬ್ಯಾಟ್ರಿ ಹೊಡೆದು ನೋಡಿದಾಗ ಅಲ್ಲಿನ ಸಮಾಧಿ ಮೇಲೆ ವ್ಯಕ್ತಿ ಕುಳಿತು ಮಾತನಾಡುತ್ತಿದ್ದ. ಸ್ಮಶಾನದ ಅಂಚಿನಲ್ಲಿದ್ದ ಬೈಕು ಸತೀಶ ನಾಯ್ಕರ ಹೆಸರು ತೋರಿಸುತ್ತಿತ್ತು. ಪೊಲೀಸರು ಆತನನ್ನು ವಿಚಾರಿಸಿದಾಗ `ನಾನೇರ ಹೊಸಗದ್ದೆಯ ಹರೀಶ ಗೌಡ’ ಎಂದಿದ್ದ. ಜೊತೆಗೆ `ಸಾವನಪ್ಪಿದ ನನ್ನ ಸ್ನೇಹಿತನ ಬಳಿ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದೇನೆ’ ಎಂದು ಆತ ಪೊಲೀಸರಿಗೆ ತಿಳಿಸಿದ್ದ.

`ಮತ್ತೊಮ್ಮೆ ಇಲ್ಲಿ ಕಾಣಿಸಿಕೊಂಡರೆ ಹುಷಾರು’ ಎಂದು ಪೊಲೀಸರು ಲಾಠಿ ತೋರಿಸಿದ ನಂತರ ಆತ `ತಪ್ಪಾಯ್ತು ಬುದ್ದಿ’ ಎನ್ನುತ್ತ ಸಮಾಧಿ ಮೇಲಿಂದ ಎದ್ದು ಸ್ಮಶಾನದಿಂದ ಹೊರ ಹೋದ. ಇನ್ನೂ `ಆ ಧ್ವನಿ ತನ್ನ ಗಂಡನದು’ ಎಂದು ಕನವರಿಸುತ್ತಿದ್ದ ಮಹಿಳೆ ಸಹ ನಿರಾಳರಾದರು!

ShareSendTweetShare
Previous Post

ಯಲ್ಲಾಪುರದಲ್ಲಿ ಶುರುವಾಗಲಿದೆ ಬ್ಯೂಟಿಷಿಯನ್ ಕೋರ್ಸ!

Next Post

ಸಂಸದರ ಮನೆಗೆ ನುಗ್ಗಿದ ರಣಬೇಟೆಗಾರ: ಕಾಗೇರಿ ಮನೆಯಲ್ಲಿ ಸಿಕ್ಕಿಲ್ಲ ಬೌ ಬೌ ಬಿರಿಯಾನಿ!

Next Post

ಸಂಸದರ ಮನೆಗೆ ನುಗ್ಗಿದ ರಣಬೇಟೆಗಾರ: ಕಾಗೇರಿ ಮನೆಯಲ್ಲಿ ಸಿಕ್ಕಿಲ್ಲ ಬೌ ಬೌ ಬಿರಿಯಾನಿ!

ರೈಲಿಗೆ ತಲೆಕೊಟ್ಟ ಯುವಕ: ಸಾವು

A student died after being attacked by a warden!

ವಿಷ ಕುಡಿದಾಗ ಬದುಕಿದವಳು ನೇಣಿಗೆ ಶರಣಾದಳು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.