ಶಿರಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಗೆ ಚಿರತೆ ನುಗ್ಗಿದೆ. ಆದರೆ, ಅಲ್ಲಿ ಸಾಕಿದ್ದ ನಾಯಿ ಚಿರತೆಯಿಂದ ತಪ್ಪಿಸಿಕೊಂಡಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಯಲ್ಲಿ `ಗ್ರೇಟ್ ಡೆನ್’ ತಳಿಯ ನಾಯಿ ಸಾಕಲಾಗಿದೆ. ಅದಕ್ಕೆ `ಜಾನಿ’ ಎಂದು ಹೆಸರಿಡಲಾಗಿದ್ದು, ಇಡೀ ಕುಟುಂಬದವರಿಗೆ ಆ ನಾಯಿ ಮೇಲೆ ವಿಶೇಷ ಅಕ್ಕರೆ. ಹೀಗಿರುವಾಗಿ ಕಾಗೇರಿ ಊರು ಪ್ರವೇಶಿಸಿದ ಚಿರತೆ ಆ ನಾಯಿಯ ಮೇಲೆ ಗುರಿ ಹಾಕಿದ್ದು, ಮಂಗಳವಾರ ನಸುಕಿನಲ್ಲಿ ಸಂಸದರ ಮನೆಗೆ ವನ್ಯಜೀವಿ ಪ್ರವೇಶಿಸಿದೆ.
ಚಿರತೆ ಬಂದಿದನ್ನು ಅರಿತ ನಾಯಿ ದೊಡ್ಡದಾಗಿ ಬೊಗಳಿದೆ. ನಾಯಿ ಬೊಗಳಿದ ಸದ್ದು ಕೇಳಿ ಮನೆ ಮಂದಿ ಲೈಟ್ ಉರುಸಿದ್ದು, ಆಗ ಚಿರತೆ ಅಲ್ಲಿಂದ ತೆರಳಿ ಕಾಡು ಸೇರಿದೆ. ಇದಕ್ಕೂ ಮುನ್ನ ಮನೆಯ ವಿವಿಧ ಕಡೆ ಚಿರತೆ ಓಡಾಡಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.





