ಅಂಕೋಲಾ: ಶಾಲಾ ಮಕ್ಕಳ ಮನರಂಜನಾ ಕಾರ್ಯಕ್ರಮ ನೋಡಲು ತೆರಳಿದ್ದ ವಿಘ್ನೇಶ್ವರ ಗೌಡ ಮರಳಿ ಮನೆಗೆ ಬರದೇ ರೈಲಿಗೆ ತಲೆಕೊಟ್ಟು ಸಾವನಪ್ಪಿದ್ದಾರೆ.
ಅಂಕೋಲಾ ಬೆಳಸೆ ಹಂದಿಗದ್ದೆಯ ವಿಘ್ನೇಶ್ವರ ಗೌಡ (29) ಕೂಲಿ ಕೆಲಸ ಮಾಡಿಕೊಂಡಿದ್ದರು. ಜನವರಿ 12ರ ರಾತ್ರಿ ಬೆಳಸೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕಾರ್ಯಕ್ರಮವಿರುವ ಬಗ್ಗೆ ಅರಿತ ಅವರು ಅಲ್ಲಿ ಹೋಗುವುದಾಗಿ ಹೊರಟಿದ್ದರು. ಕಾರ್ಯಕ್ರಮ ಮುಗಿದ ನಂತರ ಅವರು ಬೆಳಸೆ ಸೇತುವೆ ಕಡೆ ಹೋಗಿದ್ದು, ಮರುದಿನ ಶವವಾಗಿ ಪತ್ತೆಯಾಗಿದ್ದಾರೆ.
ಸೇತುವೆ ಬಳಿ ಕೊಂಕಣ ರೈಲು ಹಳಿಗೆ ಅಡ್ಡಲಾಗಿ ಅವರು ತಲೆ ಕೊಟ್ಟಿದ್ದು, ಚಲಿಸುವ ರೈಲಿಗೆ ಗುದ್ದಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಅವರ ಈ ಆತ್ಮಹತ್ಯೆಯ ನಿರ್ಧಾರಕ್ಕೆ ಕಾರಣ ಗೊತ್ತಾಗಲಿಲ್ಲ. ಜನವರಿ 13ರ ಬೆಳಗ್ಗೆ ಶವ ನೋಡಿದ ಅವರ ಸಹೋದರಿ ವಿನುತಾ ಗೌಡ ಪೊಲೀಸ್ ಪ್ರಕರಣ ದಾಖಲಿಸಿ, ಶವ ಪಡೆದರು.





