ಅಂಕೋಲಾ: ಕಳೆದ ಎರಡು ವರ್ಷಗಳಿಂದ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ನಿತ್ಯಾನಂದ ಕಿಂದಳಕರ್ ಅವರು ಹೃದಯಘಾತದಿಂದ ಸಾವನಪ್ಪಿದ್ದಾರೆ.
ಮಂಗಳವಾರ ಮಧ್ಯಾಹ್ನ 2 ಗಂಟೆ ಆಸುಪಾಸಿನಲ್ಲಿ ಹೃದಯಘಾತದಿಂದ ಅವರು ಕುಸಿದು ಬಿದ್ದರು. ಉಪಚರಿಸುವ ಮುನ್ನವೇ ಅವರು ಸಾವನಪ್ಪಿದರು. ನಿತ್ಯಾನಂದ ಅವರು ಕಾರವಾರದ ಕಿನ್ನರ ಗ್ರಾಮದವರು. ತೀರಾ ಇತ್ತಿಚಿನವರೆಗೂ ಅವರು ಆರೋಗ್ಯವಾಗಿಯೇ ಇದ್ದರು.
ನಿತ್ಯಾನಂದ ಅವರು ಸದಾ ಲವಲವಿಕೆಯಿಂದ ಕರ್ತವ್ಯ ನಿಭಾಯಿಸುತ್ತಿದ್ದರು. ಸೋಮವಾರ ಅಂಕೋಲಾ ಮಾರುಕಟ್ಟೆಯಲ್ಲಿ ಅವರು ಓಡಾಡಿಕೊಂಡಿದ್ದರು. ಅನೇಕರನ್ನು ಅವರು ಮಾತನಾಡಿಸಿದ್ದರು. ಆ ವೇಳೆಯಲ್ಲಿಯೂ ಯಾರಿಗೂ ಸಾವಿನ ಮುನ್ಸೂಚನೆ ಸಿಕ್ಕಿರಲಿಲ್ಲ. ಇದೀಗ ದಿಢೀರ್ ಹೃದಯ ಆಘಾತದಿಂದ ಅವರು ಕೊನೆ ಉಸಿರೆಳೆದಿದ್ದಾರೆ.




