ಅಂಕೋಲಾ: ಮನೆ ಮುಂದೆ ಬೆಂಕಿ ಹಾಕಿ ಚಳಿ ಕಾಸುತ್ತಿದ್ದ ಕೃಷ್ಣ ಸಿದ್ದಿ ಬೆಂಕಿಗೆ ಬಿದ್ದು ಸಾವನಪ್ಪಿದ್ದಾರೆ.
ಅಂಕೋಲಾ ಯಲ್ಲಾಪುರ ಗಡಿಭಾಗದ ಶೇವಕಾರಿನ ಕೃಷ್ಣ ಸಿದ್ದಿ (27) ಜನವರಿ 3ರ ರಾತ್ರಿ ಮನೆ ಮುಂದೆ ಬೆಂಕಿ ಹಾಕಿಕೊಂಡಿದ್ದರು. ರಾತ್ರಿ ಚಳಿ ಕಾಸುತ್ತಿದ್ದ ಅವರಿಗೆ ಮೂರ್ಚೆ ತಪ್ಪಿ ಬಿದ್ದಿದ್ದು, ಬಟ್ಟೆಗೆ ಬೆಂಕಿ ತಗುಲಿತ್ತು. ಇದರಿಂದ ಕೃಷ್ಣ ಸಿದ್ದಿ ಅವರ ಬೆನ್ನು, ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿತ್ತು.
ಮೈ ಸುಟ್ಟುಕೊಂಡಿದ್ದ ಕೃಷ್ಣ ಸಿದ್ದಿ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಎಷ್ಟು ಪ್ರಯತ್ನಿಸಿದರೂ ಕೃಷ್ಣ ಸಿದ್ದಿ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ.
ಜನವರಿ 13ರ ರಾತ್ರಿ ಅವರು ಸಾವನಪ್ಪಿದರು. ಅವರ ಶವವನ್ನು ಶೇವಕಾರಗೆ ತರಲಾಗುತ್ತಿದ್ದು, ಸಾವಿನ ಬಗ್ಗೆ ಅವರ ಬಾವ ನಾರಾಯಣ ಸಿದ್ದಿ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.




