ಶಿರಸಿ: ಕರಾವಳಿ ಕಾವಲು ಪಡೆಯ ರಾಘವೇಂದ್ರ ನಾಯ್ಕ ಅವರ ಹಲ್ಲು ಮುರಿದಿದೆ.
ಹೊನ್ನಾವರದ ಮಂಕಿಯ ರಾಘವೇಂದ್ರ ನಾಯ್ಕ ಅವರು ಕರಾವಳಿ ಕಾವಲು ಪಡೆಯ ಸಿಬ್ಬಂದಿ. ಜನವರಿ 13ರ ಸಂಜೆ ಅವರು ಶಿರಸಿ ಐದು ರಸ್ತೆ ಸರ್ಕಲ್ ಬಳಿ ಸ್ಕೂಟಿಯಲ್ಲಿ ಚಲಿಸುತ್ತಿದ್ದರು. ಈ ವೇಳೆ ಕಾನಗೋಡಿನ ಸಂತೋಷ ದೇಶಭಂಡಾರಿ ಅವರು ನಿಲೇಕೇಣಿಯಿಂದ ಐದು ರಸ್ತೆ ಸರ್ಕಲ್ ಕಡೆ ರಿಕ್ಷಾ ಓಡಿಸಿಕೊಂಡು ಬರುತ್ತಿದ್ದರು.
ಟಿವಿಎಸ್ ಶೋ ರೂಮಿನ ಎದುರು ಸಂತೋಷ ದೇಶಭಂಡಾರಿ ಅವರ ರಿಕ್ಷಾ ರಾಘವೇಂದ್ರ ನಾಯ್ಕ ಅವರ ಸ್ಕೂಟಿಗೆ ಡಿಕ್ಕಿಯಾಯಿತು. ಇದರಿಂದ ರಾಘವೇಂದ್ರ ನಾಯ್ಕ ಅವರ ಬಲಕಾಲಿಗೆ ಪೆಟ್ಟಾಯಿತು. ಮುಂದಿನ ಹಲ್ಲು ಮುರಿಯಿತು. ಆಸ್ಪತ್ರೆಗೆ ದಾಖಲಾದ ರಾಘವೇಂದ್ರ ನಾಯ್ಕ ಅವರು ಚಿಕಿತ್ಸೆ ಪಡೆದು ಬಿಡುಗಡೆಯಾದರು.
ಅದಾದ ನಂತರ ಕುಟುಂಬದವರ ಜೊತೆ ಚರ್ಚಿಸಿ ಅಪಘಾತಕ್ಕೆ ಕಾರಣರಾದ ಸಂತೋಷ ದೇಶಭಂಡಾರಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.




