ಶಿರಸಿ: ಕಸ್ತೂರಬಾ ನಗರದ ಇಬ್ಬರು ಗಾಂಜಾ ಸೇದಿ ಸಿಕ್ಕಿ ಬಿದ್ದಿದ್ದಾರೆ. ಆ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಶೊರಸಿ ಕಸ್ತೂರಬಾ ನಗರದ ನಿಯಾಜ್ ಅಹಮ್ಮದ್ ದಾವುಲ್ ಸಾಬ್ ಕೊಳಗಿಬೀಸ್ ಹಾಗು ಜೀಶಾನೆ ಅಹಮ್ಮದ್ ಫಜಲ್ ಖಾಜಿ ಗಾಂಜಾ ನಶೆಯಲ್ಲಿದ್ದರು. ಮಣಜವಳ್ಳಿ ರಸ್ತೆ ಬಳಿ ಅಲೆದಾಡುತ್ತಿದ್ದ ಅವರನ್ನು ಪೊಲೀಸರು ತಡೆದರು. ಆ ಇಬ್ಬರನ್ನು ವಿಚಾರಣೆಗೆ ಒಳಪಡಿಸಿ ವೈದ್ಯರ ಬಳಿ ಕಳುಹಿಸಿದರು. ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಅವರು ಗಾಂಜಾ ಸೇವಿಸಿರುವುದು ದೃಢವಾಯಿತು. ಈ ಹಿನ್ನಲೆ ಪೊಲೀಸರು ಅವರಿಬ್ಬರನ್ನು ವಶಕ್ಕೆ ಪಡೆದರು.
ಈ ಪೈಕಿ ಜಿಶಾನ್ ಐದು ವರ್ಷಗಳ ಹಿಂದೆಯೂ ಗಾಂಜಾ ಸೇದಿ ಸಿಕ್ಕಿ ಬಿದ್ದಿದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದ. ಈ ಪ್ರಕರಣದ ಅಡಿಯೂ ವಿಚಾರಣೆ ಮುಂದುವರೆದಿದೆ.




