ಮುಂಡಗೋಡ: ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ಶಿರಸಿಯಲ್ಲಿ ಪ್ರತಿಭಟನೆ ಬೆನ್ನಲ್ಲೆ ಮುಂಡಗೋಡಿನ ರೈತರು ಸಹ ರಸ್ತೆ ತಡೆ ನಡೆಸಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಗುರುವಾರ ರಾಜ್ಯ ರೈತ ಸಂಘದವರು ಮಳಗಿಯಲ್ಲಿ ಧರಣಿ ನಡೆಸಿದ್ದು, ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ತಡೆದು ಪರಿಹಾರಕ್ಕಾಗಿ ಪಟ್ಟು ಹಿಡಿದರು. `ಅತಿವೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಆದರೆ, ಈವರೆಗೂ ವಿಮಾ ಕಂಪನಿ ಪರಿಹಾರ ಜಮಾ ಮಾಡಿಲ್ಲ. ರೈತರ ಸಮಸ್ಯೆಯನ್ನು ಸಹ ಆಲಿಸಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶಹೊರಹಾಕಿದರು.
`ಕೂಡಲೇ ರೈತರ ಖಾತೆಗಳಿಗೆ ಪರಿಹಾರ ಜಮಾ ಮಾಡಬೇಕು. ಸರ್ಕಾರ ರೈತರ ಸಾಲಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು. ಅರಣ್ಯ ಅತಿಕ್ರಮಣದಾರರಿಗೆ ಸಹ ಬೆಳೆ ಪರಿಹಾರ ಸಿಗಬೇಕು. ಅತಿಕ್ರಮಣ ಭೂಮಿ ಜಿಪಿಎಸ್ ಪ್ರಕ್ರಿಯೆ ಲೋಪ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.




