ಪೆಟ್ರೋಲ್ ಹಾಕಿಸುವುದಕ್ಕಾಗಿ ಸಾಲಿನಲ್ಲಿ ನಿಂತಿದ್ದ ಮಂಜುನಾಥ ಹೊನ್ನಳ್ಳಿ ಎಂಬಾತರಿಗೆ ಇಬ್ಬರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಥಳಿಸಿದವರ ಹೆಸರು-ವಿಳಾಸ ಪತ್ತೆಯಾಗಿಲ್ಲ!
ಕಲಘಟಕಿ ಚಾಲಕ ಮಂಜುನಾಥ ಹೊನ್ನಳಿ ಜನವರಿ 16ರ ಸಂಜೆ ಯಲ್ಲಾಪುರದ ಹೊಸಳ್ಳಿ ಪೆಟ್ರೋಲ್ ಬಂಕಿಗೆ ಬಂದಿದ್ದರು. ಪಾಳಿ ಪ್ರಕಾರ ಅವರು ತಮ್ಮ ಬೈಕಿಗೆ ಪೆಟ್ರೋಲ್ ಹಾಕಿಸಲು ನಿಂತಿದ್ದರು. ಮುಂದಿದ್ದ ಬೈಕ್ ಸವಾರ ಪೆಟ್ರೋಲ್ ಹಾಕಿದ ನಂತರವೂ ಅಲ್ಲಿಯೇ ನಿಂತಿದ್ದು, ಬದಿಗೆ ಸರಿಯುವಂತೆ ಮಂಜುನಾಥ ಹೊನ್ನಳ್ಳಿ ಸೂಚಿಸಿದರು.
ಇದರಿಂದ ಸಿಟ್ಟಾದ ಆ ಬೈಕಿನ ಹಿಂದಿನ ಸವಾರ ಏಕಾಏಕಿ ಬೈಕಿನಿಂದ ಕೆಳಗೆ ಇಳಿದು ಮಂಜುನಾಥ ಹೊನ್ನಳ್ಳಿ ಅವರ ಬೈಕಿಗೆ ಕಾಲಿನಿಂದ ಒದ್ದರು. `ಏಕೆ ಒದೆಯುವೆ?’ ಎಂದು ಪ್ರಶ್ನಿಸಿದ್ದರಿಂದ ಬೈಕಿನ ಮೇಲೆ ಕೂತಿದ್ದ ಇನ್ನೊಬ್ಬರು ಆಗಮಿಸಿ ಅಂಗಿ ಹಿಡಿದು ಎಳೆದಾಡಿದರು. ಈ ಇಬ್ಬರು ಸೇರಿ ಮಂಜುನಾಥ ಹೊನ್ನಳ್ಳಿ ಅವರನ್ನು ಥಳಿಸಿದ್ದು, ಕೆನ್ನೆಗೂ ಬಾರಿಸಿದರು.
ಆ ಅಪರಿಚಿತರ ಓಡಿಸುತ್ತಿದ್ದ ಬೈಕ್ ನೋಂದಣಿ ಸಂಖ್ಯೆ ನೆನಪಿಸಿಕೊಂಡ ಮಂಜುನಾಥ ಹೊನ್ನಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪೊಲೀಸರು ಇದೀಗ ಆ ಬೈಕ್ ಸವಾರರ ಹುಡುಕಾಟ ನಡೆಸಿದ್ದಾರೆ.




