ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸಂಬoಧಿಸಿ ಒಗ್ಗಟ್ಟಿನಿಂದ ಹೋರಾಟ ನಡೆಸಲು ಯಲ್ಲಾಪುರ ಸರ್ಕಾರಿ ನೌಕರರು ಸಂಘ ನಿರ್ಧರಿಸಿದೆ.
ತಾಲೂಕ ಸರ್ಕಾರಿ ನೌಕರ ಭವನದಲ್ಲಿ ನಡೆದ ಸಂಘದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸಕೇರಿ ಸದಸ್ಯರ ಅಹವಾಲುಗಳನ್ನು ಆಲಿಸಿದರು. ಅದಾದ ನಂತರ ಸದಸ್ಯರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಭರವಸೆ ನೀಡಿದರು. ಮುಖ್ಯವಾಗಿ ನೌಕರರು ಎದುರಿಸುತ್ತಿರುವ ಎನ್ಪಿಎಸ್ ಸಮಸ್ಯೆ ಬಗೆಹರಿಸುವುದಕ್ಕಾಗಿ ಒಗ್ಗಟ್ಟಿನಿಂದ ಈ ಸಭೆಯಲ್ಲಿ ಹೋರಾಡಲು ನಿರ್ಧರಿಸಲಾಯಿತು.
ವಿವಿಧ ಇಲಾಖೆಯ ಪ್ರತಿನಿಧಿಗಳು ಬೇರೆ ಬೇರೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಸಂಘದ ಮಾಜಿ ಖಜಾಂಚಿ ಹಾಗೂ ಗೌರವಧ್ಯಕ್ಷ ಸುಭಾಷ ನಾಯಕ ಅವರು ಲೆಕ್ಕಪತ್ರಗಳನ್ನು ಮಂಡಿಸಿದರು. ಸಂಘದ ಕಾರ್ಯದರ್ಶಿಗಳಾದ ಶರಣಪ್ಪ ಗುಜನೂರ್ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು ಇಂದಿನ ಸಭೆಯ ತರವುಗಳನ್ನು ಓದಿ ದಡಿಕರಿಸಲಾಯಿತು ಸಂಘದ ಜಮಖರ್ಚುಗಳ ಮಂಡನೆ ಮಾಡಲಾಯಿತು.
ಸಂಘದ ಹಿರಿಯ ಉಪಾಧ್ಯಕ್ಷ ನಾರಾಯಣ ನಾಯಕ, ಉಪಾಧ್ಯಕ್ಷ ಮಂಜುನಾಥ್ ಅಗೇರ್, ರಾಜ್ಯ ಪರಿಷತ್ ಸದಸ್ಯೆ ರೇಷ್ಮಾ ಶೆಟ್, ಖಜಾಂಚಿ ವಿಶಾಲ್ ನಾಯಕ್ ಕಾರ್ಯದರ್ಶಿ ಶರಣಪ್ಪ ಗೋಜನೂರ್, ಸಂಘಟನಾ ಕಾರ್ಯದರ್ಶಿ ಅಕ್ಷತಾ ಕೊಟರ್ಕರ್ ಮತ್ತು ಶಿವಕುಮಾರ್, ಸಂಘದ ಕಾರ್ಯದರ್ಶಿ ಕೃಷ್ಣ ನಾಯ್ಕ, ಜಂಟಿ ಕಾರ್ಯದರ್ಶಿ ವಿಪಿ ಭಟ್ ಇತರರು ಹಾಜರಿದ್ದು ಸಲಹೆಗಳನ್ನು ನೀಡಿದರು.
ಕಾರ್ಯದರ್ಶಿ ಶರಣಪ್ಪ ಗುಜನೂರ್ ಸ್ವಾಗತಿಸಿದರು. ಕೋಶಾಧ್ಯಕ್ಷ ವಿಶಾಲ್ ನಾಯಕ್ ವಂದಿಸಿದರು




