ಚಲಿಸುತ್ತಿದ್ದ ಸ್ಕೂಟಿಗೆ ಎದುರಿನಿಂದ ಬಂದ ಬೈಕ್ ಗುದ್ದಿದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಆ ಬೈಕ್ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಕಾರವಾರ ಬಿಣಗಾ ಚರ್ಚ ಬಳಿ ವಿಟ್ಟಲ ಮುಂಡಾಸಿ ಅವರು ಜನವರಿ 22ರಂದು ಹಳಿಯಾಳದಿಂದ ದಾಂಡೇಲಿ ಕಡೆ ಓಡಿಸುತ್ತಿದ್ದ ಬೈಕ್ ಓಡಿಸುತ್ತಿದ್ದರು. ಇದೇ ವೇಳೆ
ದಾಂಡೇಲಿಯಿ0ದ ಹಳಿಯಾಳ ಕಡೆ ಸಮೀರ ನದಾಪ್ ಎಂಬಾತರು ಸ್ಕೂಟಿ ಓಡಿಸಿಕೊಂಡು ಹೊರಟಿದ್ದರು. ಕೆರವಾಡ ಗ್ರಾಮದ ಶ್ರೇಯಸ್ ಪೆಪರ್ ಮಿಲ್ ಬಳಿ ಸ್ಕೂಟಿಗೆ ಬೈಕು ಡಿಕ್ಕಿಯಾಯಿತು.
ಪರಿಣಾಮ ಸ್ಕೂಟಿಯಲ್ಲಿದ್ದ ಸಮೀರ ನದಾಪ್ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಬೈಕ್ ಸವಾರ ವಿಟ್ಠಲ ಮುಂಡಾಸಿ ಅವರಿಗೂ ಗಾಯವಾಯಿತು. ಈ ಅಪಘಾತದ ಬಗ್ಗೆ ದಾಂಡೇಲಿ ಅಲೈಡ್ ಏರಿಯಾದ ಕಟ್ಟಡ ಕಾರ್ಮಿಕ ಪರಶುರಾಮ ಬಾಳಕಿ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.




