ಅಕ್ಕ-ಪಕ್ಕದ ಮನೆಯವರಲ್ಲಿ ಬೇಡಿ ಊಟ ಮಾಡಿಕೊಂಡು ಬದುಕಿದ್ದ ಗೀತಾ ಹರಿಕಂತ್ರ (45) ಅವರು ಗಜನಿ ಭೂಮಿಯ ಆಳಕ್ಕೆ ಸಿಲುಕಿ ಸಾವನಪ್ಪಿದ್ದಾರೆ.
ಅಂಕೋಲಾ ತಾಲೂಕಿನ ಕಣಗಿಲ್ ಗ್ರಾಮದ ಗೀತಾ ಹರಿಕಂತ್ರ ಅವರು ಮಾನಸಿಕ ರೋಗದಿಂದ ಬಳಲುತ್ತಿದ್ದರು. ಅಣ್ಣ ಚಂದ್ರಕಾAತ ಹರಿಕಂತ್ರ ಜೊತೆ ವಾಸವಾಗಿದ್ದ ಅವರು ಅಕ್ಕ-ಪಕ್ಕದ ಮನೆಯವರಲ್ಲಿ ಬೇಡಿ ಊಟ ಮಾಡಿ ಬದುಕುತ್ತಿದ್ದರು.
ಜನವರಿ 22ರಂದು ಸಂಜೆ ಊರಿನಲ್ಲಿ ತಿರುಗಾಟಕ್ಕೆ ಹೊರಟ ಗೀತಾ ಹರಿಕಂತ್ರ ರಾತ್ರಿ ವೇಳೆ ಹಡವ ಗ್ರಾಮದ ಗಜನಿ ಪ್ರದೇಶದ ಬಳಿ ಹೋಗಿದ್ದರು. ಕತ್ತಲಿನಲ್ಲಿ ಅಲ್ಲಿನ ನೀರಿನಲ್ಲಿ ಬಿದ್ದು ಅವರು ಸಾವನಪ್ಪದರು.
ಜನವರಿ 23ರಂದು ಅವರ ಶವ ಸಿಕ್ಕಿದೆ. ಗೀತಾ ಅವರನ್ನು ಗುರುತಿಸಿದ ವಿಠ್ಠಲ ಹರಿಕಂತ್ರ ಪೊಲೀಸ್ ದೂರು ನೀಡಿದ್ದು, ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





