6
  • Latest
This farmer's house is also a museum of antiques!

ಪುರಾತನ ಸಾಮಗ್ರಿಗಳ ಸಂಗ್ರಹಾಲಯವೂ ಹೌದು ಈ ಕೃಷಿಕನ ಮನೆ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಪುರಾತನ ಸಾಮಗ್ರಿಗಳ ಸಂಗ್ರಹಾಲಯವೂ ಹೌದು ಈ ಕೃಷಿಕನ ಮನೆ!

AchyutKumar by AchyutKumar
in ಲೇಖನ
This farmer's house is also a museum of antiques!

ಶಂಬುಮನೆಯ ಚಿದಾನಂದ ಹೆಗಡೆ ಅವರಿಗೆ ಬಾಲ್ಯದಿಂದಲೂ ಪೂರ್ವಜರು ಬಳಸುತ್ತಿದ್ದ ವಸ್ತುಗಳ ಮೇಲೆ ವಿಪರೀತ ವ್ಯಾಮೋಹ. ಹೀಗಾಗಿ ಬಗೆ ಬಗೆಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದು, ಅವರ ಮನೆ ಆವರಣವೂ ಇದೀಗ ಅಪರೂಪದ ಮ್ಯೂಜಿಯಂ ರೀತಿ ಕಾಣುತ್ತಿದೆ.

ADVERTISEMENT

ಕುಮಟಾ ತಾಲೂಕಿನ ಕಲ್ಲಬ್ಬೆ ಬಳಿ ಶಂಬುಮನೆ ಚಿದಾನಂದ ಹೆಗಡೆ ಎಂದರೆ ಎಲ್ಲರಿಗೂ ಚಿರಪರಿಚಿತ. ಪೂರ್ವಜರು ಬಳಸುತ್ತಿದ್ದ ಕೃಷಿ ಹಾಗೂ ಇತರ ದಿನಬಳಕೆ ಸಲಕರಣೆಗಳನ್ನು ಸಂಗ್ರಹಿಸುವ ಹವ್ಯಾಸದಿಂದಲೇ ಅವರು ಊರಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಹಳೆಯದನ್ನು ಸಂರಕ್ಷಿಸಿಡುವ ಅವರ ತಲೆ ಜಾನಪದ ವಿಶ್ವ ವಿದ್ಯಾಲಯದ ರೀತಿ ಕಾರ್ಯ ನಿರ್ವಹಿಸುತ್ತದೆ. ಪ್ರತಿ ವಸ್ತುವಿನ ಹಿನ್ನಲೆ, ಅದರ ಬಳಕೆ ಹಾಗೂ ಉಪಯೋಗದ ಬಗ್ಗೆ ಎಲ್ಲರಿಗೂ ಸವಿವರವಾಗಿ ಅವರು ಮಾಹಿತಿ ನೀಡುತ್ತಾರೆ.

ಶತಮಾನಕ್ಕಿಂತ ಹಳೆಯದಾದ ಟೈಪ್ ರೈಟರ್, ಕೈ ಪಿಯಾನೋ, ಉಂಗುರ, ವಾಚು, ಕೈಪಟ್ಟಿ ಸೇರಿ ನೂರಾರು ಬಗೆಯ ಕಲಾತ್ಮಕ ಸಾಮಗ್ರಿಗಳು ನೋಡುಗರ ಕುತೂಹಲ ಹೆಚ್ಚಿಸುತ್ತವೆ. ನೇಗಿಲು, ಪಟ್ಟ ಹೊಡೆಯುವ ಸಲಕರಣೆ, ಜಲಮಟ್ಟ, ಬೆತ್ತದ ಪಟ್ಟಿಗೆ, ಮೆಣಸು ಕೊಯ್ದೆ ಚೊಟ್ಟೆ, ಅಕ್ಕಿ ಮೂಡೆಯ ಕುತ್ತಿಗೆ, ಕೂಗಲ ಬಳ್ಳೆಯಿಂದ ನೇಯ್ದ ಪೆಟ್ಟಿಗೆ, ದಡೆಮುಟ್ಟಿ ವೈವಿಧ್ಯಮಯ ಒನಕೆಗಳು, ಹಳೆಯ ಕಾದಲ್ಲಿ ಬಳಸುತ್ತಿದ್ದ ಶ್ಯಾವಿಗೆ, ಚಕ್ಕಲಿ ಮಟ್ಟುಗಳು, ತೊಟ್ಟಿಲು, ಬಾವಿ ಗಡೆಗಡೆ, ಗಿಳಿಗುಟ್ಟಿ, ಕಲ್ಲಿ, ಕಡಗೋಲು, ಗದೆ, ಸಂದುಕಗಳು, ಕೈಹುತ್ತ, ಕರಿಮಣೆ ಕಡಗ, ತೋಳ ಕಡಗ, ಗುಗ್ಗೆ ಕಟ್ಟಿ, ಕಾಡಿಗೆ ಬುರುಡೆ ಹೀಗೆ ಅವರ ಬಳಿಯಿರುವ ಸಂಗ್ರಹಗಳ ಪಟ್ಟಿಯನ್ನು ಬರೆದು ಮುಗಿಸುವ ಹಾಗಿಲ್ಲ!

Advertisement. Scroll to continue reading.

ಪ್ರೌಢಶಾಲೆಗೆ ಹೋಗುವಾಗ ಚಿದಾನಂದ ಹೆಗಡೆ ನಾಣ್ಯ ಸಂಗ್ರಹದ ಹವ್ಯಾಸ ಬೆಳೆಸಿಕೊಂಡಿರು. ಕ್ರಮೇಣ ಅವರ ಆಸಕ್ತಿ ವಿವಿಧ ವಿದೇಶಿ ನೋಟುಗಳ ಕಡೆ ತಿರುಗಿತು. ಹೀಗಾಗಿ ಬೇರೆ ಬೇರೆ ದೇಶದ ನಾಣ್ಯ-ನೋಟುಗಳನ್ನು ಸಂಗ್ರಹಿಸಿದರು. ಪ್ರಸ್ತುತ 175ಕ್ಕೂ ಅಧಿಕ ದೇಶಗಳ ಖಜಾನೆ ಮಾಹಿತಿ ಅವರಲ್ಲಿದೆ. 60ಕ್ಕೂ ಹೆಚ್ಚು ದೇಶಗಳ ಅಂಚೆ ಚೀಟಿಯನ್ನು ಅವರು ಸಂಗ್ರಹಿಸಿದ್ದಾರೆ. ಅವರ ಈ ವಿಶೇಷ ಸಾಧನೆ ಗುರುತಿಸಿ ರಾಜ್ಯಮಟ್ಟದ ಸನ್ಮಾನಗಳು ಅರೆಸಿ ಬಂದಿವೆ. ಇದೇ ಉತ್ಸಾಹದಲ್ಲಿ ಚಿದಾನಂದ ಹೆಗಡೆ ಅವರು ತಮ್ಮಲ್ಲಿರುವ ಹಳೆಯ ಸಾಮಗ್ರಿಗಳನ್ನು ಬೇರೆ ಬೇರೆ ಕಡೆ ಕೊಂಡೊಯ್ದು ಪ್ರದರ್ಶನವನ್ನು ನೀಡುತ್ತಿದ್ದಾರೆ.

Advertisement. Scroll to continue reading.

ಚಿದಾನಂದ ಹೆಗಡೆ ಅವರು ಉತ್ತಮ ಕೃಷಿಕರು ಹೌದು. ಅವರು ಓದಿದ್ದು ಸ್ನಾತಕೋತರ ಪದವಿಯಾದರೂ ಪೂರ್ವಜರಿಂದ ಬಂದ 20 ಗುಂಟೆ ತೋಟದಲ್ಲಿ ವಿಭಿನ್ನ ಮಾದರಿಯ ಕೃಷಿ ಮಾಡಿದ್ದರೆ. ಅವರ ತೋಟದಲ್ಲಿ ಬೆಳೆದ ಒಂದು ಅಡಕೆ 18 ಗ್ರಾಂ ತೂಕದೊಂದಿಗೆ ದಾಖಲೆ ಪಟ್ಟಿ ಸೇರಿದೆ. ತೋಟಗಾರಿಕಾ ಇಲಾಖೆಯವರು ಸಹ ಅವರ ಮನೆಗೆ ದೌಡಾಯಿಸಿ ಅಧ್ಯಯನ ನಡೆಸುತ್ತಾರೆ. ಸರ್ಕಾರದಿಂದ ಅವರ ಬಳಿಯಿರುವ ಕೃಷಿ ಹಾಗೂ ಪಾರಂಪರಿಕ ಜಾನಪದ ಸಾಮಗ್ರಿಗಳ ದಾಖಲೀಕರಣ ಕಾರ್ಯವೂ ನಡೆದಿದೆ.

Previous Post

ಮದುವೆ ಊಟಕ್ಕೆ ಗರ್ಭಿಣಿ ಹಸು ಮಾಂಸ!

Next Post

ಪ್ರಪಂಚ ಪರ್ಯಟನೆಗೆ ಹೊರಟ ಕಡಲಾಮೆಗಳ ಸಾಲು!

Next Post

ಪ್ರಪಂಚ ಪರ್ಯಟನೆಗೆ ಹೊರಟ ಕಡಲಾಮೆಗಳ ಸಾಲು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ