6
  • Latest

ಬೆಳೆ ವಿಮೆ | ವಿಮಾ ಕಂಪನಿ ಜೊತೆ ಹವಾಮಾನ ಇಲಾಖೆ ತಿಕ್ಕಾಟ: ಅಡಿಕೆ ಬೆಳೆಗಾರರಿಗೆ ಇನ್ನಷ್ಟು ಸಂಕಷ್ಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಬೆಳೆ ವಿಮೆ | ವಿಮಾ ಕಂಪನಿ ಜೊತೆ ಹವಾಮಾನ ಇಲಾಖೆ ತಿಕ್ಕಾಟ: ಅಡಿಕೆ ಬೆಳೆಗಾರರಿಗೆ ಇನ್ನಷ್ಟು ಸಂಕಷ್ಟ!

AchyutKumar by AchyutKumar
January 31, 2025
in ದೇಶ - ವಿದೇಶ
advt advt advt
ADVERTISEMENT

ಅಡಿಕೆ ಬೆಳೆಗಾರರನ್ನು ಒಳಗೊಂಡು ರೈತರು ಸಮಯಕ್ಕೆ ಸರಿಯಾಗಿ ವಿಮಾ ಕಂತು ಪಾವತಿಸಿದರೂ ವಿಮಾ ಕಂಪನಿ ಸಮಯಕ್ಕೆ ಸರಿಯಾಗಿ ಪರಿಹಾರವನ್ನು ಒದಗಿಸುತ್ತಿಲ್ಲ. `ಎರಡು ವಾರದೊಳಗೆ ವಿಮಾ ಪರಿಹಾರ ರೈತರ ಖಾತೆಗೆ ಜಮಾ ಆಗಲಿದೆ’ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದ್ದು, ಅವರು ಹೇಳಿದ ಸಮಯದೊಳಗೂ ಹಣ ಸಿಗುವ ಲಕ್ಷಣಗಳು ಕಾಣುತ್ತಿಲ್ಲ.

ಪ್ರಸಕ್ತ ಸಾಲಿನಲ್ಲಿ ಅತಿವೃಷ್ಠಿಯಿಂದ ಅಪಾರ ಪ್ರಮಾಣದಲ್ಲಿ ಫಸಲು ನಾಶವಾಗಿದೆ. ಅದಾಗಿಯೂ ರೈತರಿಗೆ ನ್ಯಾಯವಾಗಿ ದೊರೆಯಬೇಕಾದ ಬೆಳೆ ವಿಮಾ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ವಿಮಾ ಕಂಪನಿ ಸಹ ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ವಿತರಣೆ ಮಾಡದೇ ನುಣಚಿಕೊಳ್ಳುತ್ತಿದೆ. ಈ ಹಿನ್ನಲೆ ಎಲ್ಲಾ ಕಡೆ ರೈತರ ಆಕ್ರೋಶ ಹೆಚ್ಚಾಗಿದೆ.

ADVERTISEMENT
ADVERTISEMENT

ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ರೈತರು ಕೆಲ ದಿನದ ಹಿಂದೆ ಶಿರಸಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅದಾದ ನಂತರ ಮುಂಡಗೋಡದಲ್ಲಿಯೂ ಪ್ರತಿಭಟನೆ ನಡೆದಿದೆ. ಈ ವೇಳೆ ಅಧಿಕಾರಿಗಳು ಪರಿಹಾರ ಒದಗಿಸುವ ಭರವಸೆ ನೀಡಿದ್ದು, ನಂತರ ಆ ಭರವಸೆಯನ್ನು ಮರೆತಿದ್ದರು. ಹೀಗಾಗಿ ಇದೀಗ ಮತ್ತೆ ರೈತ ಸಂಘಟನೆಯವರು ಒಟ್ಟಾಗಿ ವಿಮಾ ಕಂಪನಿಗೆ ಆಕ್ರೋಶದ ಬಿಸಿ ಮುಟ್ಟಿಸಿದ್ದಾರೆ.

Advertisement. Scroll to continue reading.

ಕೃಷಿ, ತೋಟಗಾರಿಕೆ, ಕಂದಾಯ, ಹಸ್ಕಾಂ ಅರಣ್ಯ ಮತ್ತು ಕ್ಷೇಮಾ ವಿಮೆ ಕಂಪನಿಯ ಮುಖ್ಯಾಧಿಕಾರಿಗಳ ಜೊತೆ ಮುಂಡಗೋಡ ತಹಶೀಲ್ದಾರರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದ ರೈತರು `ಬೇರೆ ಬೇರೆ ಜಿಲ್ಲೆಯಲ್ಲಿ ವಿಮೆ ಪರಿಹಾರ ಕೊಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯವರಿಗೆ ಯಾಕೆ ಸಿಕ್ಕಿಲ್ಲ?’ ಎಂದು ಪ್ರಶ್ನಿಸಿದ್ದಾರೆ. `ಹವಾಮಾನ ಇಲಾಖೆ ಹಾಗೂ ವಿಮಾ ಕಂಪನಿ ನಡುವಿನ ಸಮಸ್ಯೆಯಿಂದ ವಿಮಾ ಪರಿಹಾರ ಒದಗಿಸಲು ತೊಂದರೆಯಾದ ಬಗ್ಗೆ ಸಭೆಯಲ್ಲಿದ್ದ ವಿಮಾ ಕಂಪನಿ ಅಧಿಕಾರಿ ಅಮರನಾಥ ರೆಡ್ಡಿ ಹೇಳಿದ್ದು, ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement. Scroll to continue reading.

`ಹವಾಮಾನ ಇಲಾಖೆ ನೀಡಿರುವ ವರದಿಯಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಇದರಿಂದ ವಿಮಾ ಪರಿಹಾರ ನೀಡಲು ವ್ಯತ್ಯಾಸವಾಗಿದೆ’ ಎಂದು ವಿಮಾ ಕಂಪನಿಯವರು ಹೇಳಿದ್ದು, ಇದಕ್ಕೆ ಸಮಜಾಯಿಶಿ ಕೊಡಲು ಹವಾಮಾನ ಇಲಾಖೆ ಅಧಿಕಾರಿಗಳು ಸಭೆಯಲ್ಲಿರಲಿಲ್ಲ. `ಮಳೆ ಮಾಪನ ಅಧಿಕಾರಿಗಳು ಸರಿಯಾಗಿ ವರದಿ ನೀಡಿದರೆ ರೈತರಿಗೆ ಹೆಚ್ಚಿನ ಮೊತ್ತದ ವಿಮೆ ನೀಡಬೇಕಾಗುತ್ತದೆ. ಹೀಗಾಗಿ ಉದ್ದೇಶಪೂರ್ವಕವಾಗಿ ವಿಮಾ ಕಂಪನಿ ಕಾಡಿಸುತ್ತಿದೆ’ ಎಂದು ರೈತರು ಅಸಮಧಾನಹೊರಹಾಕಿದರು. ಕೊನೆಗೆ `20 ದಿನಗಳ ಒಳಗೆ ರೈತರ ಖಾತೆಗೆ ಪರಿಹಾರ ಮೊತ್ತ ಜಮಾ ಆಗದೇ ಇದ್ದರೆ ಉಗ್ರ ಪ್ರತಿಭಟನೆ ಅನಿವಾರ್ಯ’ ಎಂದು ಮುಂಡಗೋಡದಲ್ಲಿ ನಡೆದ ಸಭೆಯಲ್ಲಿ ರೈತರು ಎಚ್ಚರಿಕೆ ನೀಡಿದ್ದಾರೆ.

 

ShareSendTweetShare
ADVERTISEMENT
Previous Post

ಮಾಗೋಡು ಆಲೆಮನೆ: ಪ್ರವೇಶ ಉಚಿತ.. ನೊರೆ ಬೆಲ್ಲದ ಸವಿ ಖಚಿತ!

Next Post

ಮಹಿಳೆ ನೋವಿಗೆ ಮಿಡಿದ ಮಾಜಿ ಶಾಸಕಿಯ ಮನ!

Next Post

ಮಹಿಳೆ ನೋವಿಗೆ ಮಿಡಿದ ಮಾಜಿ ಶಾಸಕಿಯ ಮನ!

ಹಿಟಾಚಿ ಕೆಲಸ: ಕಾಮಗಾರಿ ವೀಕ್ಷಣೆಗೆ ಜನವೋ ಜನ!

ಫ್ಲೈ ಓವರ್'ಗೆ ಗುದ್ದಿದ ಕಾರು: ಗುತ್ತಿಗೆದಾರನಿಂದ ದೂರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.