ರಸ್ತೆ ಅಂಚಿನಲ್ಲಿ ಚಲಿಸುತ್ತಿದ್ದ ಪಾದಚಾರಿಗೆ ಲಾರಿಯೊಂದು ಗುದ್ದಿದೆ. ಪರಿಣಾಮ ಪಾದಚಾರಿಯ ದೇಹ ಚೂರು ಚೂರಾಗಿದೆ.
ಮುಂಡಗೋಡದ ಶಿವಾಜಿ ಸರ್ಕಲ್ ಬಳಿ ಫೆ 14ರ ಸಂಜೆ ಈ ಅವಘಡ ನಡೆದಿದೆ. ಎಂ ಸ್ಯಾಂಡ್ ತುಂಬಿಕೊoಡು ಹೊರಟಿದ್ದ ಲಾರಿ ಪಾದಚಾರಿಗೆ ಗುದ್ದಿದ್ದರಿಂದ ವ್ಯಕ್ತಿ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಅಪಘಾತದ ರಭಸಕ್ಕೆ ವ್ಯಕ್ತಿಯ ದೇಹ ಛಿದ್ರಗೊಂಡಿದೆ. ಸಾವನಪ್ಪಿದ ವ್ಯಕ್ತಿಯ ಬಗ್ಗೆ ಈವರೆಗೆ ಮಾಹಿತಿ ಸಿಕ್ಕಿಲ್ಲ.
ಸ್ಥಳದಲ್ಲಿ ಬಿದ್ದಿದ್ದ ದೇಹವನ್ನು ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು. ರಸ್ತೆ ಮೇಲೆ ಭಾರೀ ಪ್ರಮಾಣದ ರಕ್ತ ಬಿದ್ದಿದ್ದರಿಂದ ಜನ ಆತಂಕಕ್ಕೆ ಒಳಗಾದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




