6
  • Latest

ಪರಶಿವನ ಜಾತ್ರೆಗೆ ಯಾಣ ಸನ್ನಿದ್ಧ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪರಶಿವನ ಜಾತ್ರೆಗೆ ಯಾಣ ಸನ್ನಿದ್ಧ!

AchyutKumar by AchyutKumar
in ಸ್ಥಳೀಯ

ಶಿವರಾತ್ರಿ ಸಮೀಪಿಸುತ್ತಿದ್ದಂತೆ ಪರಶಿವನ ಕ್ಷೇತ್ರದಲ್ಲಿ ಜಾತ್ರಾ ಸಡಗರ ಮನೆ ಮಾಡಿದೆ. ಪ್ರಸಿದ್ಧ ಶಿವಕ್ಷೇತ್ರ ಯಾಣದಲ್ಲಿಯೂ ಶಿವರಾತ್ರಿ ಆಚರಣೆಗೆ ಬರದ ಸಿದ್ಧತೆ ನಡೆಯುತ್ತಿದೆ.

ADVERTISEMENT

ದಟ್ಟ ಅರಣ್ಯದಲ್ಲಿನ ಬೃಹತ್ ಕಲ್ಪಂಡೆ ನಡುವೆ ನೆಲೆಸಿರುವ ಶಿವ ಸನ್ನಿಧಿ ಅನೇಕರ ಪಾಲಿಗೆ ನೆಚ್ಚಿನ ತಾಣ. ಯಾಣದ ಶ್ರೀ ಭೈರವೇಶ್ವರ ದೇವಸ್ಥಾಕ್ಕೆ ಕಡಿದಾದ ಗುಡ್ಡದ ರಸ್ತೆ ಏರಿ ಹೋಗುವುದು ಅನಿವಾರ್ಯ. ಅದಾಗಿಯೂ ಈಚೆಗೆ ಯಾಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದ್ದು, ಇದಕ್ಕೆ ಕಡುಗಪ್ಪಿನ ಭೈರವೇಶ್ವರ ಹಾಗೂ ಮೋಹಿನಿ ಶಿಖರದ ಪೌರಾಣಿಕ ಹಿನ್ನಲೆ ಮುಖ್ಯ ಕಾರಣ.

ಇನ್ನೂ ಯಾಣಕ್ಕೆ ತೆರಳುವ ಎಲ್ಲಾ ರಸ್ತೆ ಮಾರ್ಗಗಳು ಬಹುತೇಕ ಚನ್ನಾಗಿವೆ. ಯಾಣದ ಸಮೀಪದವರೆಗೂ ವಾಹನಗಳು ಓಡಾಡುತ್ತವೆ. ಶಿರಸಿ-ಅಂಕೋಲಾ-ಕುಮಟಾ ಭಾಗದಿಂದಲೂ ಅನೇಕರು ಯಾಣಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ಫೆ 26ರ ಶಿವರಾತ್ರಿ ಪೂಜೆಗೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಯಾಣದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ನಿರ್ಮಿಸಲಾಗುತ್ತಿದೆ.

Advertisement. Scroll to continue reading.

ಶಿವರಾತ್ರಿ ಅಂಗವಾಗಿ ಫೆ 24ರಿಂದಲೇ ಯಾಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ನಿತ್ಯ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಶಿವರಾತ್ರಿಯ ದಿನ ಬೆಳಗ್ಗೆ 8ಗಂಟೆಯಿoದ ಸಂಜೆ 7.30ರವರೆಗೂ ಭಕ್ತರಿಗೆ ಯಾಣದಲ್ಲಿ ಪೂಜೆಗೆ ಅವಕಾಶ ನೀಡಲಾಗಿದೆ. ಆ ದಿನ ಎಷ್ಟೇ ಪ್ರಮಾಣದಲ್ಲಿ ಭಕ್ತರು ಬಂದರೂ ಶಿಖರದ ಗುಹೆಯಲ್ಲಿ ನೆಲೆಸಿರುವ ಭೈರವೇಶ್ವರ ದೇವರಿಗೆ ಪೂಜೆ ಸಲ್ಲಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ.

Advertisement. Scroll to continue reading.

ಇನ್ನೂ ಯಾಣದಲ್ಲಿ ಅಪಾರ ಪ್ರಮಾಣದಲ್ಲಿ ಜೇನುಗೂಡು ಕಟ್ಟಿದ್ದು, ಈಚೆಗೆ ಪ್ರವಾಸಿಗರ ಮೇಲೆ ದಾಳಿಯೂ ನಡೆದಿದೆ. ಹೀಗಾಗಿ ಭಕ್ತರು ಈ ಬಗ್ಗೆ ಎಚ್ಚರವಹಿಸುವುದು ಒಳಿತು ಎಂದು ದೇವಾಲಯ ಸಮಿತಿಯವರು ಮನವಿ ಮಾಡಿದ್ದಾರೆ.

Previous Post

ಪ್ರೇಯಸಿಯ ಪತಿ ಕೊಂದು ಜೈಲು ಸೇರಿದ ಪ್ರೀತಂ!

Next Post

ಬಳಸಿ ಬಿಸಾಡುವ ಬಟ್ಟೆಯಿಂದ ಚಂದದ ಅಲಂಕಾರ: ಸ್ವಾವಲಂಬಿ ಮಹಿಳೆಯರಿಗಾಗಿ ಮಾರ್ಚ 2ಕ್ಕೆ ಉಚಿತ ಕಾರ್ಯಾಗಾರ!

Next Post
beautiful-decoration-from-disposable-clothes-free-workshop-for-self-sufficient-women-on-march-2

ಬಳಸಿ ಬಿಸಾಡುವ ಬಟ್ಟೆಯಿಂದ ಚಂದದ ಅಲಂಕಾರ: ಸ್ವಾವಲಂಬಿ ಮಹಿಳೆಯರಿಗಾಗಿ ಮಾರ್ಚ 2ಕ್ಕೆ ಉಚಿತ ಕಾರ್ಯಾಗಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ