6
  • Latest

PDO ವರ್ಗಾವಣೆಗಾಗಿ ಮುಖ್ಯಮಂತ್ರಿಗೆ ಮೊರೆ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

PDO ವರ್ಗಾವಣೆಗಾಗಿ ಮುಖ್ಯಮಂತ್ರಿಗೆ ಮೊರೆ!

AchyutKumar by AchyutKumar
in ರಾಜ್ಯ

ಸಾರ್ವಜನಿಕ ಕೆಲಸ ಮಾಡಿಕೊಡಲು ಪದೇ ಪದೇ ಎಡವುತ್ತಿರುವ ಪಿಡಿಓ ವರ್ಗಾವಣೆಗೆ ಆಗ್ರಹಿಸಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಮುಖ್ಯಮಂತ್ರಿಯ ಮೊರೆ ಹೋಗಿದ್ದಾರೆ!

ADVERTISEMENT

ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ್ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿದೆ. `2023ರಲ್ಲಿಯೇ ನಾಗರಾಜ ನಾಯ್ಕರನ್ನು ಇಲ್ಲಿಂದ ವರ್ಗಾಯಿಸಿ’ ಎಂದು ಕೆಲವರು ಆಗ್ರಹಿಸಿದ್ದರು. ಈ ಬಗ್ಗೆ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದ್ದರು. ಆದರೂ, ಯಾವುದೇ ಕ್ರಮವಾಗದ ಕಾರಣ ಇದೀಗ ಮುಖ್ಯಮಂತ್ರಿಗಳಿಗೆ ಪತ್ರ ರವಾನೆಯಾಗಿದೆ.

ಗ್ರಾಮ ಪಂಚಾಯತದಲ್ಲಿ ಅವ್ಯವಹಾರ, ಕಾನೂನು ಸೇವಾ ಪ್ರಾಧಿಕಾರದ ಕೆಲಸದ ಬಗ್ಗೆ ಅಸಡ್ಡೆ, ಸಾರ್ವಜನಿಕರ ಜೊತೆ ಅನುಚಿತ ವರ್ತನೆ, ಅರ್ಜಿ ವಿಲೇವಾರಿಯಲ್ಲಿ ಲೋಪ, ಹಿರಿಯ ನಾಗರಿಕರ ಕೆಡಗಣನೆ, ಸರ್ಕಾರ ನೀಡಿದ ದೂರವಾಣಿ ನಾಪತ್ತೆ, ಸರ್ಕಾರಿ ಆಸ್ತಿ ನಿರ್ವಹಣೆಯಲ್ಲಿನ ಲೋಪ ಸೇರಿ ಹಲವು ಆರೋಪಗಳನ್ನು ನಾಗರಾಜ ನಾಯ್ಕ ವಿರುದ್ಧ ಮಾಡಲಾಗಿದೆ. ಸಾರ್ವಜನಿಕರು ಪಿಡಿಓ ಭೇಟಿ ಮಾಡಲು ತೆರಳಿದಾಗಲೆಲ್ಲ `ಮಿಟಿಂಗ್ ಹೋಗಿದ್ದಾರೆ’ ಎಂಬ ಉತ್ತರ ಬರುತ್ತದೆ. `ಫೋನ್ ಮಾಡಿದರೂ ಪಿಡಿಓ ಸರಿಯಾಗಿ ಉತ್ತರಿಸುತ್ತಿಲ್ಲ’ ಎಂದು ಜನ ಸಾಮಾನ್ಯರು ದೂರಿದ್ದಾರೆ.

Advertisement. Scroll to continue reading.
ಪಿಡಿಓ ವಿರುದ್ಧ ದೂರು ಸಲ್ಲಿಸಿದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು

`ಈಗಾಗಲೇ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಸಾರ್ವಜನಿಕ ಸೇವೆ ಮಾಡದ ಪಿಡಿಓ ಇಲ್ಲಿ ಅಗತ್ಯವಿಲ್ಲದ ಕಾರಣ ಅವರನ್ನು ಬೇರೆ ಕಡೆ ವರ್ಗಾಯಿಸಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್, ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಪ್ರಮುಖರಾದ ಲಕ್ಷಿ ನಾಯ್ಕ, ಸುಶೀಲ, ರೇಣುಕಾ, ಈಶ್ವರ, ಸಿಂಪರಿಯನ್, ಸಂಜಯ ಹೊಲೆಯರ, ಗುರು ಮುಕ್ರಿ, ವಿಠ್ಠಲ್ ನಾಯ್ಕ, ಬೀರಪ್ಪ ಪಟಗಾರ ಇತರರು ಸಹಿ ಮಾಡಿದ ಅರ್ಜಿಯನ್ನು ಮುಖ್ಯಮಂತ್ರಿಗೆ ರವಾನಿಸಲಾಗಿದೆ.

Advertisement. Scroll to continue reading.
Previous Post

ಮಾತು ತಪ್ಪಿದ ಮಂಕಾಳು ವೈದ್ಯ: ಕಡಲ ಮಗುವಿನ ಪ್ರಶ್ನೆಗೆ ಉತ್ತರಿಸುವವರಾರು?

Next Post

ಶಿರಸಿಗೂ ವ್ಯಾಪಿಸಿದ ಮಂಗನ ಸೊಂಕು!

Next Post

ಶಿರಸಿಗೂ ವ್ಯಾಪಿಸಿದ ಮಂಗನ ಸೊಂಕು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ