ಕೆಎಸ್ಆರ್ಟಿಸಿ ಬಸ್ಸು ಹಾಗೂ ಬೈಕಿನ ನಡುವೆ ಕುಮಟಾದ ಹಳ್ಳಕಾರದಲ್ಲಿ ಅಪಘಾತ ನಡೆದಿದೆ. ಈ ಅಪಘಾತ ನೋಡಿದ ಶಾಸಕ ದಿನಕರ ಶೆಟ್ಟಿ ತಕ್ಷಣ ಪೊಲೀಸರು ಹಾಗೂ ಆಂಬುಲೆನ್ಸ ಕರೆಯಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದರು.
ಫೆ 26ರಂದು ಮಂಗಳೂರಿನ ಶಿವಾಜಿ ಶಂಕರ್ ಅವರು ತಮ್ಮ ಪತ್ನಿ ಶ್ರೀದೇವಿ ಅವರ ಜೊತೆ ಇದೇ ವೇಳೆ ಬೈಕಿನಲ್ಲಿ ಬರುತ್ತಿದ್ದರು. ಅಘನಾಶಿನಿ ಕಡೆ ತೆರಳಲು ತಿರುಗಿದಾಗ ಆ ಬೈಕು ಕೆಎಸ್ಆರ್ಟಿಸಿ ಬಸ್ಸಿಗೆ ಡಿಕ್ಕಿಯಾಯಿತು. ಹಳ್ಳಕಾರಿನ ಬಳಿ ಬೈಕಿನ ಜೊತೆ ಸವಾರರಿಬ್ಬರು ನೆಲಕ್ಕೆ ಬಿದ್ದರು.
ಅಪಘಾತದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡರು. ಶಿವಾಜಿ ಅವರ ಕಾಲು ಮುರಿದಿದ್ದು, ಶ್ರೀದೇವಿ ಅವರು ಕೈ, ಮುಖಕ್ಕೆ ಪೆಟ್ಟು ಮಾಡಿಕೊಂಡರು. ಇದೇ ವೇಳೆ ಶಾಸಕ ದಿನಕರ ಶೆಟ್ಟಿ ಗೋಕರ್ಣ ಉತ್ಸವಕ್ಕೆ ಹೋಗುತ್ತಿದ್ದರು. ಅಪಘಾತವನ್ನು ನೋಡಿದ ಅವರು ತಮ್ಮ ಕಾರು ನಿಲ್ಲಿಸಿದರು. ಗಾಯಾಳುವಿನ ಕ್ಷೇಮ ವಿಚಾರಿಸಿ ಆಂಬುಲೆನ್ಸಿಗೆ ಫೋನ್ ಮಾಡಿದರು.
ಇಬ್ಬರನ್ನು ಆಸ್ಪತ್ರೆಗೆ ರವಾನಿಸಿದ ನಂತರ ಗೋಕರ್ಣಕ್ಕೆ ತೆರಳಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಚಿನ್ನದ ವ್ಯಾಪಾರಿ ಪ್ರಶಾಂತ ಪಾವಸ್ಕರ ದೂರು ನೀಡಿದ್ದಾರೆ. ಎಎಸ್ಐ ಮರಿಯಾಂಜಿ ಉಸ್ಮಾನ್ ಮಲಿಮ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.




