ಭಟ್ಕಳದಿಂದ ಹೊನ್ನಾವರ ಕಡೆ ಚಲಿಸುತ್ತಿದ್ದ ಟೆಂಪೋಗೆ ಹಿಂದಿನಿoದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಟೆಂಪೊದಲ್ಲಿದ್ದ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ.
ಹೊನ್ನಾವರ ಮಂಕಿಯ ಸಿಂಗಾಣಿಹಿತ್ಲುವಿನ ಅಣ್ಣಪ್ಪ ನಾಯ್ಕ ಅವರು ಫೆ ೨೫ರಂದು ತಮ್ಮ ಟೆಂಪೋ ಓಡಿಸುತ್ತಿದ್ದರು. ಭಟ್ಕಳದಿಂದ ಹೊನ್ನಾವರ ಕಡೆ ಬರುತ್ತಿದ್ದ ಟೆಂಪೋ ಬೈಲೂರು ಕ್ರಾಸಿನ ಬಳಿ ನಿಂತಿತು. ಅಲ್ಲಿ ಇಳಿಯಬೇಕಾದ ಪ್ರಯಾಣಿಕರು ಇಳಿದಿದ್ದರು. ಟೆಂಪೋ ಹತ್ತುವ ಪ್ರಯಾಣಿಕರು ಕಾಯುತ್ತಿದ್ದರು.
ಈ ವೇಳೆ ಕೇರಳದ ಬಿನೀಶ್ ಭಾಸ್ಕರನ್ ಜೋರಾಗಿ ಲಾರಿ ಓಡಿಸಿಕೊಂಡು ಬಂದರು. ಭಟ್ಕಳ – ಹೊನ್ನಾವರ ಮಾರ್ಗವಾಗಿ ಬಂದ ಅವರು ರಸ್ತೆ ಅಂಚಿನಲ್ಲಿ ನಿಂತಿದ್ದ ಟೆಂಪೋಗೆ ಹಿಂದಿನಿAದ ಡಿಕ್ಕಿ ಹೊಡೆದರು. ಪರಿಣಾಮ ಟೆಂಪೊದಲ್ಲಿದ್ದ ಹೊನ್ನಾವರ ಮಂಕಿಯ ನರೇಂದ್ರ ಗೌಡ ಗಾಯಗೊಂಡರು.
ಈ ಅಪಘಾತದ ಬಗ್ಗೆ ಅಣ್ಣಪ್ಪ ನಾಯ್ಕ ಅವರು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಶುರು ಮಾಡಿದರು.




