ಉತ್ತರ ಕನ್ನಡ ಜಿಲ್ಲೆಯ 163 ಗ್ರಾಮ ಪಂಚಾಯತಗಳಲ್ಲಿ ಅರಣ್ಯ ಅರಿವು ಜಾಥಾ ನಡೆಯುತ್ತಿದ್ದು, ಸೋಮವಾರ ಕುಮಟಾದ ಮಿರ್ಜಾನ್ ಭಾಗದಲ್ಲಿ ಜಾಥಾ ಆಯೋಜಿಸಲಾಗಿತ್ತು. ಅಜ್ಞಾನ ಹಾಗೂ ಕಾನೂನು ತಿಳುವಳಿಕೆ ಕೊರತೆಯಿಂದ ಭೂಮಿ ಹಕ್ಕಿನಿಂದ ವಂಚಿತರಾದವರಿಗೆ ಕಾನೂನು ಅರಿವು ಮೂಡಿಸುವ ಕೆಲಸ ನಡೆಯಿತು.
`ಅರಣ್ಯವಾಸಿಗಳಿಗೆ ಕಾನೂನು ಜಾಗೃತಿ ಮೂಡಿಸುವ ಜಾಥಾ ರಾಜ್ಯದ ಎಲ್ಲಡೆ ನಡೆಯಲಿದೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು. `ದೇಶದಲ್ಲಿ ಅರಣ್ಯವಾಸಿ ಮತ್ತು ಅರಣ್ಯ ಪ್ರದೇಶದ ಪ್ರಮಾಣದಲ್ಲಿ ಕರ್ನಾಟಕ ಮೊದ¯ನೇ 5 ಸ್ಥಾನದಲ್ಲಿದೆ.ಅರಣ್ಯ ಹಕ್ಕು ಅನುಷ್ಠಾನದಲ್ಲಿ 15ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 2,94,000 ಅರ್ಜಿಗಳಲ್ಲಿ ಕೇವಲ 17,561 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ’ ಎಂದವರು ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು ವಹಿಸಿದ್ದರು. ಈ ಸಭೆಯಲ್ಲಿ ಯಾಕುಬ್ ಸಾಬ ಮಿರ್ಜಾನ್, ಸೀತಾರಾಮ ನಾಯ್ಕ, ಮಹೇಂದ್ರ ನಾಯ್ಕ, ಶಂಕರ ಗೌಡ, ಪ್ರಕಾಶ ನಾಯ್ಕ ಕತಗಾರ,ರಾಜು ಗೌಡ, ಶಾಂತಿ ಆರೇರ, ಕಮಲಾಕ್ಷಿ ಹಿರೆಗುತ್ತಿ, ಜಗದೀಶ ಹರಿಕಾಂತ, ರಾಘವೇಂದ್ರ ನಾಯ್ಕ ಕವಂಚೂರು ಇತರರು ಇದ್ದರು.





