6
  • Latest

ಕೊಂಕಣ ರೈಲ್ವೆ: ಬಹುದೊಡ್ಡ ಲಾಭದಲ್ಲಿದ್ದರೂ ಅಪಾರ ನಷ್ಟ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಕೊಂಕಣ ರೈಲ್ವೆ: ಬಹುದೊಡ್ಡ ಲಾಭದಲ್ಲಿದ್ದರೂ ಅಪಾರ ನಷ್ಟ!

AchyutKumar by AchyutKumar
in ವಿಡಿಯೋ

`ಕೊಂಕಣ ರೈಲ್ವೆ ಲಾಭದಲ್ಲಿದೆ. ಅದಾಗಿಯೂ ಸಂಸ್ಥೆ ನಷ್ಟ ಅನುಭವಿಸುತ್ತಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಹೇಳಿದ್ದಾರೆ.

ADVERTISEMENT

ಕಾರವಾರದಲ್ಲಿ ಮಾತನಾಡಿದ ಅವರು `ಕೊಂಕಣ ರೈಲ್ವೆ ಶುರು ಮಾಡುವಾಗ ಬೇರೆ ಬೇರೆ ರಾಜ್ಯದಿಂದ ಬಾಂಡ್ ಪಡೆಯಲಾಗಿತ್ತು. ಅದರ ಬಡ್ಡಿಯನ್ನು ಕೊಂಕಣ ರೈಲ್ವೆಯಿಂದ ಪಾವತಿಸಲಾಗುತ್ತಿದೆ. ವ್ಯವಹಾರಿಕ ಚಟುವಟಿಕೆಯಿಂದ ಕೊಂಕಣ ರೈಲ್ವೆ ಲಾಭದಲ್ಲಿದೆ. ಆದರೆ, ಬಡ್ಡಿ ಕೊಡಲು ಸಾಧ್ಯವಾಗದೇ ನಷ್ಠ ಅನುಭವಿಸುತ್ತಿದೆ. ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊಂಕಣ ರೈಲ್ವೆ ಸ್ಥಿತಿ-ಗತಿ ಉತ್ತಮಪಡಿಸಲು ಸಹಕಾರ ನೀಡುವ ಬಗ್ಗೆ ಚರ್ಚೆ ನಡೆದಿದೆ’ ಎಂಬ ವಿಷಯ ಬಹಿರಂಗಪಡಿಸಿದರು. ಕೊಂಕಣ ರೈಲ್ವೆಯನ್ನು ರೈಲ್ವೆ ಇಲಾಖೆ ಜೊತೆ ಸೇರಿಸುವ ಬಗ್ಗೆಯೂ ಚಿಂತನೆ ನಡೆದಿದೆ’ ಎಂದರು.

ಸಾವಿರ ನಿರಾಶ್ರಿತರಿಗೆ ಸಿಕ್ಕಿಲ್ಲ ಪರಿಹಾರ!
ಕೊಂಕಣ ರೈಲ್ವೆಗಾಗಿ ಭೂಮಿ ಕಳೆದುಕೊಂಡ ಸಾವಿರಾರು ನಿರಾಶ್ರಿತರಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ನಿಯಮಾನುಸಾರ ಅವರಿಗೆ ಉದ್ಯೋಗವನ್ನು ಸಹ ನೀಡಲಾಗಿಲ್ಲ. ಈ ಬಗ್ಗೆಯೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಯನ ನಡೆಸಿ, ನಿರಾಶ್ರಿತರ ಪಟ್ಟಿಯನ್ನು ಹೊರ ಹಾಕಿದ್ದಾರೆ. ಅವರೆಲ್ಲರಿಗೂ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

Advertisement. Scroll to continue reading.

`ಸೀಬರ್ಡ ನಿರಾಶ್ರಿತರ ವಿಷಯದಲ್ಲಿಯೂ ಸಹ ಇದೇ ಬಗೆಯ ಸಮಸ್ಯೆಯಾಗಿತ್ತು. 28ಎ ಆಗದೇ ಇದ್ದವರು ಅತಂತ್ರರಾಗಿದ್ದರು. ಜಿಲ್ಲಾಡಳಿತದಿಂದ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆದಿದ್ದು, ಪರಿಹಾರ ವಿತರಣೆಯಾಗುತ್ತಿದೆ. ಕೊಂಕಣ ರೈಲ್ವೆ ನಿರಾಶ್ರಿತರ ಸಮಸ್ಯೆ ಸಾಕಷ್ಟಿದ್ದು, ಅದನ್ನು ಬಗೆಹರಿಸಲಾಗುತ್ತದೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

Advertisement. Scroll to continue reading.

ರಾಜ್ಯ ಸರ್ಕಾರದ ಅಸಹಕಾರ!
`ಗೋವಾ ಹಾಗೂ ಮಾಹಾರಾಷ್ಟದಲ್ಲಿನ ರಾಜ್ಯ ಸರ್ಕಾರಗಳು ಕೊಂಕಣ ರೈಲ್ವೆ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದೆ. ದೊಡ್ಡ ಪ್ರಮಾಣದಲ್ಲಿ ಹಣವನ್ನು ನೀಡುತ್ತಿದೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಈವರೆಗೂ ಕೊಂಕಣ ರೈಲ್ವೆ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಕಾರವಾರ, ಉಡುಪಿ, ಮಂಗಳೂರು ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ರಾಜ್ಯ ಸರ್ಕಾರವೂ ಸಹಾಯ ಮಾಡಬೇಕು’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

`ರೈಲ್ವೆಗೆ ಹೆಚ್ಚುವರಿ ಬೋಗಿ ಅಳವಡಿಕೆ, ಅಗತ್ಯವಿರುವ ಕಡೆ ನಿಲುಗಡೆ ಸೇರಿ ವಿವಿಧ ವಿಷಯ ಚರ್ಚೆ ನಡೆದಿದೆ. ಕಾರವಾರದಲ್ಲಿ ನೀರು ಸರಬರಾಜು ಘಟಕ ಸ್ಥಾಪನೆಗೆ ಕೊಂಕಣ ರೈಲ್ವೆ ಆಸಕ್ತಿವಹಿಸಿದೆ. ಇದರಿಂದ ಉದ್ಯೋಗವಕಾಶ ಸೇರಿ ಇನ್ನಷ್ಟು ಅನುಕೂಲವಾಗಲಿದೆ’ ಎಂದರು. `ಭಟ್ಕಳದಿಂದ ಕಾರವಾರದವರೆಗೆ ಮೂಲಭೂತ ಸೌಕರ್ಯ ಕೊರತೆಯಿದ್ದು, ಮುಖ್ಯವಾಗಿ ಕುಮಟಾ ಮತ್ತು ಗೋಕರ್ಣ ಪ್ಲಾಟಫಾರ್ಮ ಮೇಲ್ದರ್ಜಗೆರಿಸಲು ಕ್ರಮ ಜರುಗಿಸಲಾಗಿದೆ’ ಎಂದು ತಿಳಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..

Previous Post

ಕುಡಿಯುವ ನೀರಿಗೆ ಕನ್ನ: ಕೋಟಿ ಕಾಸಿನ ಕಬ್ಬಿಣ ಕದ್ದವರಾರು?

Next Post

ರಾಮ ಭಜನೆ ಮಾಡುವ ಮುಕ್ತಿ ವಾಹನ!

Next Post
Rama bhajan is the vehicle of liberation!

ರಾಮ ಭಜನೆ ಮಾಡುವ ಮುಕ್ತಿ ವಾಹನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ