6
  • Latest
The poor fisherman who swam ashore all night!

ರಾತ್ರಿಯಿಡೀ ಈಜಿ ದಡ ಸೇರಿದ ಬಡ ಮೀನುಗಾರ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ರಾತ್ರಿಯಿಡೀ ಈಜಿ ದಡ ಸೇರಿದ ಬಡ ಮೀನುಗಾರ!

AchyutKumar by AchyutKumar
in ದೇಶ - ವಿದೇಶ
The poor fisherman who swam ashore all night!

ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ತೆರಳಿದ್ದ ಕಾರವಾರದ ಮಾಜಾಳಿ ಬಳಿಯ ಮಹೇಶ ಸಾಳಗಾಂವ್ಕರ್ ಅವರಿಗೆ ನೆರೆ ಜಿಲ್ಲೆ ಮೀನುಗಾರರು ಆತಂಕ ಉಂಟು ಮಾಡಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಎಂಟುವರೆ ತಾಸು ಈಜುವ ಮೂಲಕ ಅವರು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ!

ADVERTISEMENT

ಸೋಮವಾರ ಸಂಜೆ ಮಹೇಶ ಸಾಳಗಾಂವ್ಕರ್ ತಮ್ಮ ಪಾತೆ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿದ್ದ ಮಂಗಳೂರಿನ ಯಾಂತ್ರಿಕೃತ ದೋಣಿಯವರು ಬೀಸಿದ ಬಲೆಗೆ ಮಹೇಶ ಅವರ ದೋಣಿ ಸಿಲುಕಿಕೊಂಡಿತು. ದಮ್ಮಯ್ಯ ಎಂದರೂ ದೊಡ್ಡ ಬೋಟಿನವರು ಸಣ್ಣ ದೋಣಿಯನ್ನು ಬಿಟ್ಟುಕೊಡಲಿಲ್ಲ. ಆ ದೋಣಿಯ ಜೊತೆ ಮಹೇಶ ಅವರನ್ನು ಹಗ್ಗದಿಂದ ಕಟ್ಟಿ ಎಳೆದೊಯ್ಯುವ ಪ್ರಯತ್ನ ನಡೆಸಿದರು. ಆ ಸಂಘರ್ಷದಲ್ಲಿ ಮಹೇಶ ಅವರು ಬೆದರಿದ್ದು, ಕಂಗಾಲಾದ ಅವರು ತಪ್ಪಿಸಿಕೊಳ್ಳುವುದಕ್ಕಾಗಿ ಸಮುದ್ರಕ್ಕೆ ಹಾರಿದರು.

ಇದಕ್ಕೂ ಮುನ್ನ ಅವರು ತಮ್ಮ ಪತ್ನಿಗೆ ಫೋನ್ ಮಾಡಿದ್ದರು. `ತಾನು ಅಪಾಯಕ್ಕೆ ಸಿಲುಕಿದ್ದೇನೆ’ ಎಂಬ ಸಂದೇಶ ರವಾನಿಸಿದ್ದರು. ಹೀಗಾಗಿ ಪೊಲೀಸರು ಮಹೇಶ ಅವರ ಹುಡುಕಾಟ ನಡೆಸಿದರು. ಮಹೇಶ ಅವರನ್ನು ಬೆದರಿಸಿದ ದೊಡ್ಡ ದೋಣಿಯವರನ್ನು ಸಹ ವಿಚಾರಣೆಗೆ ಒಳಪಡಿಸಿದರು. ಊರಿನವರೆಲ್ಲ ಸೇರಿ ಆಳ ಸಮುದ್ರದಲ್ಲಿ ಹುಡುಕಾಟ ನಡೆಸಿದರು. ರಾತ್ರಿ 11 ಗಂಟೆಯವರೆಗೂ ಪೊಲೀಸರ ಜೊತೆ ಊರಿನವರು ಹುಡುಕಿದರು. ನೀರಿನಲ್ಲಿ ಬಿದ್ದ ಮಹೇಶ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಅವರ ಲೊಕೇಶನ್ ಸಹ ಕಂಡು ಹಿಡಿಯಲು ಆಗಲಿಲ್ಲ. ಎಷ್ಟು ಹುಡುಕಿದರೂ ಮಹೇಶ ಅವರ ಸುಳಿವು ಸಿಕ್ಕಿಲ್ಲ.

Advertisement. Scroll to continue reading.

45 ವರ್ಷದ ಮಹೇಶ ಸಾಳಗಾಂವ್ಕರ್ ಅವರಿಗೆ ಮೀನು ಹಿಡಿಯುವುದು ಹಾಗೂ ಈಜುವುದು ಬಿಟ್ಟು ಬೇರೆನೂ ಬರುತ್ತಿರಲಿಲ್ಲ. ಹೀಗಾಗಿ ಸಮುದ್ರದಲ್ಲಿ ಅವರು ನಿರಂತರವಾಗಿ ಈಜಲು ಶುರು ಮಾಡಿದ್ದರು. ತಮ್ಮಲ್ಲಿದ್ದ ಚಾಕುವಿನಿಂದ ದೋಣಿ ಸಮತೋಲನ ಕಾಪಾಡಲು ಬಳಸುವ ಉಲಾಂಡಿ ದಾರ ತುಂಡರಿಸಿದ್ದರು. ಅದರ ಮೂಲಕ ಮರದ ಹಲಿಗೆಯೊಂದನ್ನು ಹಿಡಿದುಕೊಂಡು ಕೆಲ ಕಾಲ ವಿರಮಿಸಿದರು. ಮತ್ತೆ ಈಜುತ್ತ ಈಜುತ್ತ ದಡ ಸೇರುವ ಪ್ರಯತ್ನ ಮಾಡುತ್ತಿದ್ದರು.

Advertisement. Scroll to continue reading.

ಎಂಟುವರೆ ತಾಸು ಈಜಿದ ನಂತರ ಅವರಿಗೆ ದಡ ಕಾಣಿಸಿತು. ಮಂಗಳವಾರ ಬೆಳಗ್ಗೆ ಅವರು ಗೋವಾದ ಕಾಣಕೋಣ ಕಡಲತೀರಕ್ಕೆ ಬಂದು ತಲುಪಿದರು. ಅಲ್ಲಿನ ಜನ ಮಹೇಶ ಅವರಿಗೆ ನೆರವಾದರು. ಈ ವೇಳೆಗಾಗಲೇ ಊರಿನವರಿಗೂ ಸುದ್ದಿ ಮುಟ್ಟಿತು. ಅವರೆಲ್ಲರೂ ಸೇರಿ ಮಹೇಶ ಅವರನ್ನು ಕಾರವಾರಕ್ಕೆ ಕರೆ ತಂದರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಮುದ್ರದಲ್ಲಿ ಸತತವಾಗಿ ಈಜಿ ದಡ ಸೇರಿ ಆಯಾಸಗೊಂಡಿದ್ದ ಮಹೇಶ ಅವರು ಇದೀಗ ಚೇತರಿಸಿಕೊಂಡಿದ್ದಾರೆ.

Previous Post

ಒಡಹುಟ್ಟಿದವನನ್ನು ಕೊಂದವರಿಗೆ ಜೀವನಪೂರ್ತಿ ಜೈಲು!

Next Post

ಸಹಿ ಪೊರ್ಜರಿ ಆರೋಪ: ಅಧಿಕಾರಿ ವಿರುದ್ಧ ಮಹಿಳೆ ಒಂಟಿ ಪ್ರತಿಭಟನೆ!

Next Post
Sahi allegation of adultery Woman single protest against the officer!

ಸಹಿ ಪೊರ್ಜರಿ ಆರೋಪ: ಅಧಿಕಾರಿ ವಿರುದ್ಧ ಮಹಿಳೆ ಒಂಟಿ ಪ್ರತಿಭಟನೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ