6
  • Latest

ಕಾರು ಕೆಟ್ಟಿತು.. ಸ್ನೇಹ ಮುರಿಯಿತು: ಕಾರು ಕೊಟ್ಟು ಕೆಟ್ಟ ಸ್ನೇಹಿತ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕಾರು ಕೆಟ್ಟಿತು.. ಸ್ನೇಹ ಮುರಿಯಿತು: ಕಾರು ಕೊಟ್ಟು ಕೆಟ್ಟ ಸ್ನೇಹಿತ!

AchyutKumar by AchyutKumar
March 6, 2025
in ರಾಜ್ಯ
advt advt advt
ADVERTISEMENT

ಅಂಕೋಲಾದ ಜೀವನಕುಮಾರ ನಾಯಕ ಅವರು ಸ್ನೇಹಿತನ ಮದುವೆ ಬಳಕೆಗೆ ಕಾರು ಕೊಟ್ಟಿದ್ದು, ಆ ಕಾರನ್ನು ಮರಳಿ ಪಡೆಯಲಾಗದೇ ಸಮಸ್ಯೆಗೆ ಸಿಲುಕಿದ್ದಾರೆ. ಇದೀಗ ಅವರ ಕಾರು ಮರಳಿ ಸಿಕ್ಕಿಲ್ಲ. ಆ ಸ್ನೇಹಿತನೂ ಪತ್ತೆಯಿಲ್ಲ!

ಜೀವನಕುಮಾರ ನಾಯಕ (31) ಅವರು ಅಂಕೋಲಾದ ಕೋಟೆವಾಡದಲ್ಲಿ ವ್ಯಾಪಾರಿ. ದಾವಣಗೆರೆಯ ಹರಿಹರದಲ್ಲಿರುವ ಅವರ ಸ್ನೇಹಿತ ಸಯ್ಯದ ಪರ್ಹಾನ್ (32) ಅವರ ಕಾರು ಪಡೆದು ಮರಳಿಸುತ್ತಿಲ್ಲ. ಮೊದಲು `ನಾಳೆ ಕೊಡುವೆ.. ನಾಡಿದ್ದು ಕೊಡುವೆ’ ಎನ್ನುತ್ತಿದ್ದ ಸಯ್ಯದ್ ಇದೀಗ `ಕಾರು ಇಲ್ಲ.. ನಾನು ಸಿಗಲ್ಲ’ ಎನ್ನುತ್ತಿದ್ದಾರೆ. ಹರಿಹರಕ್ಕೆ ಹೋಗಿ ಹುಡುಕಿದರೂ ಸಹ ಕಾರಿನ ಸುಳಿವು ಸಿಗದೇ ಜೀವನಕುಮಾರ ನಾಯಕ ಪೊಲೀಸರ ಮೊರೆ ಹೋಗಿದ್ದಾರೆ.

ADVERTISEMENT
ADVERTISEMENT

2025ರ ಜನವರಿ ಮೊದಲ ವಾರ ಸಯ್ಯದ್ ಫೋನ್ ಮಾಡಿ `ಮದುವೆ ಕಾರ್ಯಕ್ರಮಕ್ಕೆ ಕಾರು ಬೇಕು’ ಎಂದು ಕೇಳಿದ್ದರು. ಉದಾರ ಮನಸ್ಸಿನ ಜೀವನಕುಮಾರ್ ಮರು ಮಾತನಾಡದೇ ಕಾರು ಕೊಟ್ಟು ಕಳುಹಿಸಿದ್ದರು. ಮದುವೆ ಮುಗಿದು 1 ವಾರದ ನಂತರ ಕಾರು ಮರಳಿಸುವಂತೆ ಸಯ್ಯದ್’ಗೆ ಜೀವನಕುಮಾರ ಫೋನ್ ಮಾಡಿದ್ದರು. `ಎರಡೇ ದಿನದಲ್ಲಿ ಕೊಟ್ಟುಬಿಡುವೆ’ ಎಂದು ಸಯ್ಯದ್ ಉತ್ತರಿಸಿದ್ದರಿಂದ ಸುಮ್ಮನಾಗಿದ್ದರು.

Advertisement. Scroll to continue reading.

ಆದರೆ, ಎರಡು ದಿನವಲ್ಲ. ಒಂದು ವಾರ ಕಳೆದರೂ ಆ ಕಾರು ಅಂಕೋಲಾಗೆ ಬರಲಿಲ್ಲ. ಇದಾದ ನಂತರ ಮತ್ತೆ ಮತ್ತೆ ಜೀವನಕುಮಾರ ನಾಯಕ ಫೋನ್ ಮಾಡಿದರು. ಆ ಕಡೆಯಿಂದ ಮಾತನಾಡಿದ ಸಯ್ಯದ್ ಕಾರು ಮರಳಿಸಲು ಮತ್ತಷ್ಟು ಸಮಯಾವಕಾಶ ಕೇಳಿದರು. ಅದಕ್ಕೂ ಜೀವನಕುಮಾರ್ ಒಪ್ಪಿಗೆ ಸೂಚಿಸಿದರು. ಅದಾದ ನಂತರ ಮತ್ತೆ ಫೋನ್ ಮಾಡಿದಾಗ `ಹರಿಹರಕ್ಕೆ ಬಂದು ಕಾರು ಪಡೆದು ಹೋಗು’ ಎಂದು ಸಯ್ಯದ್ ಉತ್ತರಿಸಿದರು. ಅದರ ಪ್ರಕಾರ ಜನವರಿ 21ರಂದು ಜೀವನಕುಮಾರ ಹರಿಹರಕ್ಕೆ ಹೋದಾಗ ಅಲ್ಲಿ ಕಾರು ಇರಲಿಲ್ಲ.

Advertisement. Scroll to continue reading.

ಆಗ ಸಯ್ಯದ್, `ಸಂಬoಧಿಕರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಕಾರನ್ನು ಮುಂಬೈಗೆ ಕಳುಹಿಸಿದ್ದೇನೆ. ಮೂರು ದಿನ ಬಿಟ್ಟು ಮತ್ತೆ ಬಾ’ ಎಂದು ಉತ್ತರಿಸಿದರು. ಹೀಗಾಗಿ ಜನವರಿ 24ಕ್ಕೆ ಜೀವನಕುಮಾರ ಮತ್ತೆ ಹರಿಹರಕ್ಕೆ ಹೋಗಿ ಕಾರು ಹುಡುಕಿದರು. ಆಗಲೂ ಅವರಿಗೆ ಕಾರು ಸಿಗಲಿಲ್ಲ. ಸಯ್ಯದ್ ಮನೆ ಹುಡುಕಿ ಹೊರಟರು. ಅಲ್ಲಿ ಸ್ನೇಹಿತ ಸಯ್ಯದ್ ಸಹ ಇರಲಿಲ್ಲ.

ಕೂಡಲೇ ಸಯ್ಯದ್’ಗೆ ಜೀವನಕುಮಾರ್ ನಾಯಕ ಫೋನ್ ಮಾಡಿದರು. ಆಗಲೂ ಸಯ್ಯದ್ ಫೋನ್ ಸ್ವೀಕರಿಸಲಿಲ್ಲ. ಇದರಿಂದ ಸಿಟ್ಟಾದ ಜೀವನಕುಮಾರ್ ಅಂಕೋಲಾಗೆ ಮರಳಿ ಪೊಲೀಸ್ ಠಾಣೆಗೆ ತೆರಳಿದರು. ತಮಗೆ ಆದ ಅನ್ಯಾಯದ ಬಗ್ಗೆ ವಿವರವಾದ ವರದಿ ಒಪ್ಪಿಸಿದರು. ಕಾರು ಮರಳಿಸದ ಸ್ನೇಹಿತನ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ, ಕಾರು ಹುಡುಕಿಕೊಡುವಂತೆ ಕೋರಿದರು. ಇದೀಗ ಪೊಲೀಸರು ಸಹ ಸಯ್ಯದ್ ಜೊತೆ ಆ ಕಾರಿನ ಹುಡುಕಾಟ ನಡೆಸಿದ್ದಾರೆ.

ShareSendTweetShare
ADVERTISEMENT
Previous Post

ಸುಪ್ರೀಂ ಅಂಗಳದಲ್ಲಿ ಅತಿಕ್ರಮಣದಾರರ ಭವಿಷ್ಯ: ಸರ್ಕಾರ ಅಪಡಾವಿಟ್ ಸಲ್ಲಿಸದಿದ್ದರೆ ಬದುಕು ಅತಂತ್ರ!

Next Post

ಅಪ್ಪ ಕಟ್ಟಿದ ಮನೆ ಬ್ಲಾಸ್ಟ್ ಮಾಡುವಾಗಿ ಬೆದರಿಸಿದ ಮಗ!

Next Post
Son threatens to blow up house built by father!

ಅಪ್ಪ ಕಟ್ಟಿದ ಮನೆ ಬ್ಲಾಸ್ಟ್ ಮಾಡುವಾಗಿ ಬೆದರಿಸಿದ ಮಗ!

Misuse of cheque given to security Complaint filed against society director along with manager

ಭದ್ರತೆಗೆ ನೀಡಿದ ಚೆಕ್ ದುರುಪಯೋಗ: ವ್ಯವಸ್ಥಾಪಕನ ಜೊತೆ ಸೊಸೈಟಿ ನಿರ್ದೇಶಕರ ವಿರುದ್ಧ ದೂರು

Housing project Elderly woman files complaint against officer who provided information!

ವಸತಿ ಯೋಜನೆ: ಮಾಹಿತಿ ನೀಡದ ಅಧಿಕಾರಿ ವಿರುದ್ಧ ವೃದ್ಧೆಯ ದೂರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.