6
  • Latest
Misuse of cheque given to security Complaint filed against society director along with manager

ಭದ್ರತೆಗೆ ನೀಡಿದ ಚೆಕ್ ದುರುಪಯೋಗ: ವ್ಯವಸ್ಥಾಪಕನ ಜೊತೆ ಸೊಸೈಟಿ ನಿರ್ದೇಶಕರ ವಿರುದ್ಧ ದೂರು

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಭದ್ರತೆಗೆ ನೀಡಿದ ಚೆಕ್ ದುರುಪಯೋಗ: ವ್ಯವಸ್ಥಾಪಕನ ಜೊತೆ ಸೊಸೈಟಿ ನಿರ್ದೇಶಕರ ವಿರುದ್ಧ ದೂರು

AchyutKumar by AchyutKumar
March 6, 2025
in ಸ್ಥಳೀಯ
Misuse of cheque given to security Complaint filed against society director along with manager
advt advt advt
ADVERTISEMENT

ಕುಮಟಾದ ಓಂಕಾರ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದ ಸೊಸೈಟಿಯಲ್ಲಿ ಸಾಲಗಾರರು ಭದ್ರತೆಗೆ ನೀಡಿದ ಚೆಕ್ ದುರುಪಯೋಗವಾಗಿದೆ. ಸೊಸೈಟಿ ನಿರ್ದೇಶಕರೇ ಆ ಚೆಕ್’ನ್ನು ತಮ್ಮ ಹೆಸರಿಗೆ ಜಮಾ ಮಾಡಿಕೊಂಡಿದ್ದು, ಚೆಕ್ ಅಮಾನ್ಯವಾದ ಕಾರಣ ಸಾಲಗಾರರನ್ನು ಸತಾಯಿಸುತ್ತಿದ್ದಾರೆ.

ಕುಮಟಾದ ಬಸ್ತಿಪೇಟೆಯಲ್ಲಿರುವ ಓಂಕಾರ್ ಓಂಕಾರ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದ ಸೊಸೈಟಿಯಲ್ಲಿ ಚಿತ್ರಗಿಯ ಗುತ್ತಿಗೆದಾರ ಪ್ರಭಾಕರ ಭಂಡಾರಕರ್ 1 ಲಕ್ಷ ರೂ ಸಾಲ ಮಾಡಿದ್ದರು. 2020-21ರಲ್ಲಿ ಸಾಲ ಪಡೆದ ಅವರು ನಂತರ ಅದನ್ನು ಬಡ್ಡಿಸಹಿತ ತೀರಿಸಿದ್ದರು. ಸಾಲ ಮಾಡುವಾಗ ಅವರು ಭದ್ರತೆಗಾಗಿ ಎಸ್‌ಬಿಐ’ನ ಮೂರು ಚೆಕ್ ನೀಡಿದ್ದರು. ಆದರೆ, ಸಾಲ ಮರುಪಾವತಿ ವೇಳೆ ಸೊಸೈಟಿ ಶಾಖಾ ವ್ಯವಸ್ಥಾಪಕ ನಿಷ್ಠಂತ್ ಒಂದು ಚೆಕ್ ಮಾತ್ರ ಮರಳಿ ನೀಡಿದ್ದರು.

ADVERTISEMENT
ADVERTISEMENT

ಅದಾದ ನಂತರ ಓಂಕಾರ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದದ ನಿರ್ದೇಶಕರಾದ ವಿಶ್ವನಾಥ ಕೇಣಿ ಹಾಗೂ ಪ್ರಭಾಕರ ಬಾಳಗಿ ಇನ್ನೆರಡು ಚೆಕ್ ಬಳಸಿಕೊಂಡಿದ್ದರು. ಚೆಕ್ ಮೇಲೆ ಮೊತ್ತ ನಮೂದಿಸಿ ಅದನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ಪ್ರಯತ್ನಿಸಿದ್ದರು. ಆದರೆ, ಪ್ರಭಾಕರ ಭಂಡಾರಕರ್ ಅವರ ಖಾತೆಯಲ್ಲಿ ಆ ಪ್ರಮಾಣದಲ್ಲಿ ಹಣವಿಲ್ಲದ ಕಾರಣ ಚೆಕ್ ಅಮಾನ್ಯಗೊಂಡಿತು. ಇದಾದ ನಂತರ ಪ್ರಭಾಕರ ಭಂಡಾರಕರ್ ವಿರುದ್ಧ ವಿಶ್ವನಾಥ ಕೇಣಿ ಹಾಗೂ ಪ್ರಭಾಕರ ಬಾಳಗಿ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದರು.

Advertisement. Scroll to continue reading.
Advertisement. Scroll to continue reading.

ಆ ಮೂಲಕ ಸಾಲ ಪಡೆಯುವ ವೇಳೆ ಸೊಸೈಟಿಗೆ ನೀಡಿದ ಚೆಕ್’ನ್ನು ಅದೇ ಸೊಸೈಟಿ ನಿರ್ದೇಶಕರಿಬ್ಬರು ದುರುಪಯೋಗಪಡಿಸಿಕೊಂಡರು. ಜೊತೆಗೆ ಸಾಲ ಮಾಡಿ ಅದನ್ನು ಮರುಪಾವತಿ ಮಾಡಿದ ಪ್ರಭಾಕರ ಭಂಡಾರಕರ್ ಅವರಿಗೂ ಮಾನಸಿಕ ಹಿಂಸೆ ನೀಡಲು ಶುರು ಮಾಡಿದರು. ಸದ್ಯ ಇದನ್ನು ಸಹಿಸದ ಪ್ರಭಾಕರ ಭಂಡಾರಕರ್ ಕುಮಟಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಓಂಕಾರ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದದ ನಿರ್ದೇಶಕರಾದ ವಿಶ್ವನಾಥ ಕೇಣಿ ಹಾಗೂ ಪ್ರಭಾಕರ ಬಾಳಗಿ ಜೊತೆ ಶಾಖಾ ವ್ಯವಸ್ಥಾಪಕ ನಿಷ್ಠಂತ್ ಅವರ ಕುತಂತ್ರವನ್ನು ಅವರು ಪೊಲೀಸರ ಮುಂದೆ ಬಿಚ್ಚಿಟ್ಟರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೂರುದಾರರಿಗೆ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದ್ದಾರೆ.

ShareSendTweetShare
ADVERTISEMENT
Previous Post

ಅಪ್ಪ ಕಟ್ಟಿದ ಮನೆ ಬ್ಲಾಸ್ಟ್ ಮಾಡುವಾಗಿ ಬೆದರಿಸಿದ ಮಗ!

Next Post

ವಸತಿ ಯೋಜನೆ: ಮಾಹಿತಿ ನೀಡದ ಅಧಿಕಾರಿ ವಿರುದ್ಧ ವೃದ್ಧೆಯ ದೂರು!

Next Post
Housing project Elderly woman files complaint against officer who provided information!

ವಸತಿ ಯೋಜನೆ: ಮಾಹಿತಿ ನೀಡದ ಅಧಿಕಾರಿ ವಿರುದ್ಧ ವೃದ್ಧೆಯ ದೂರು!

This forest guard is more dangerous than that snake!

ಆ ಹಾವಿಗಿಂತಲೂ ಅಪಾಯ ಈ ಅರಣ್ಯ ಸಿಬ್ಬಂದಿ!

ಹೊಸಳ್ಳಿ ರೈತನಿಗೆ ಹಗ್ಗ ಕಟ್ಟಿ ಥಳಿಸಿದ ಆಗಂತುಕರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.