ಬಯಲು ಶೌಚ ನಿಷೇಧಿಸಿದರೂ ಸಮುದ್ರಕ್ಕೆ ತೆರಳಿದ್ದ ವ್ಯಕ್ತಿಯನ್ನು ಅರಬ್ಬಿ ಸಮುದ್ರ ಆಹುತಿ ಪಡೆದಿದೆ. ಗುರುವಾರ ಕಾಣೆಯಾದ ರಾಮದಾಸ ನಾಯ್ಕ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.
ಕಾರವಾರದ ಅರ್ಗಾ ಮೇಲಿನಕೇರಿಯ ರಾಮದಾಸ ನಾಯ್ಕ (77) ಚರ್ಮರೋಗದಿಂದ ಬಳಲುತ್ತಿದ್ದರು. ಅವರ ಮಗ ಶ್ರೀಧರ್ ಅವರಿಗೂ ಈ ರೋಗ ಕಾಣಿಸಿಕೊಂಡಿತ್ತು. ತಮ್ಮ ಕುಟುಂಬದಕ್ಕೆ ಬಂದ ಈ ರೋಗದ ಬಗ್ಗೆ ಅವರು ಚಿಕಿತ್ಸೆಗಾಗಿ ಮಾರ್ಚ 6ರಂದು ಜಿಲ್ಲಾ ಆಸ್ಪತ್ರೆಗೆ ಹೋಗಿದ್ದರು.
ಅದಾದ ನಂತರ ಬಯಲು ಶೌಚಕ್ಕಾಗಿ ಕಾರವಾರ ಸಮುದ್ರದ ಕಡೆ ಹೋದರು. ಅಲೆಗಳ ಅಬ್ಬರಕ್ಕೆ ಸಿಲುಕಿ ಅವರು ಕಾಣೆಯಾದರು. ಫೆ 7ರಂದು ಅಲಿಗದ್ದಾ ಕಡಲತೀರದಲ್ಲಿ ಅವರ ಶವ ಸಿಕ್ಕಿತು.
ಇದನ್ನು ನೋಡಿದವರು ರಾಮದಾಸ ಅವರ ಪತ್ನಿ ಜಯಲಕ್ಷಿ ನಾಯ್ಕ ಅವರಿಗೆ ವಿಷಯ ಮುಟ್ಟಿಸಿದರು. ಜಯಲಕ್ಷಿ ಅವರು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಶವ ಪಡೆದರು.







