ಶಿರಸಿಯಿಂದ ಹುಬ್ಬಳ್ಳಿ ಕಡೆ ಸಂಚರಿಸುತ್ತಿದ್ದ ಬಸ್ಸು ಮಂಗಳವಾರ ಸಂಜೆ ಬೆಣಗಿ ಬಸ್ ನಿಲ್ದಾಣದ ತಿರುವಿನಲ್ಲಿದ್ದ ನೇರಲೆ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ 14ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಆನ0ದ ಹಳ್ಳೂರು ಎಂಬಾತರು ಈ ಬಸ್ಸನ್ನು ಓಡಿಸುತ್ತಿದ್ದರು. ಹುಂಡೈಲಕೊಪ್ಪದ ಬಳಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿತು. ರಸ್ತೆ ಅಂಚಿನ ಮರಕ್ಕೆ ಬಸ್ಸು ಡಿಕ್ಕಿಯಾಯಿತು. ಪರಿಣಾಮ ಬಸ್ಸಿನ ಚಾಲಕ ಆನಂದ ಹಳ್ಳೂರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಉಳಿದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಆನಂದ ಹಳ್ಳೂರು ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಗೋಡಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಈ ಬಸ್ಸಿನೊಳಗಿದ್ದರು. ಮುಂಡಗೋಡಿನ ಪೊಲೀಸ್ ಸಿಬ್ಬಂದಿ ರೈಫೈಭಾಷಾ ಬಸ್ಸು ಅಪಘಾತದ ಬಗ್ಗೆ ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.







