ಅಂಕೋಲಾ-ಯಲ್ಲಾಪುರ ಗಡಿಭಾಗವಾದ ಗುಳ್ಳಾಪುರದಲ್ಲಿನ ಗೂಡಂಗಡಿಗಳಿಗೆ ಮಂಗಳವಾರ ರಾತ್ರಿ ಲಾರಿ ನುಗ್ಗಿದೆ. ರಸ್ತೆ ಅಂಚಿನಲ್ಲಿ ಲಾರಿ ನಿಲ್ಲಿಸಿದ ಚಾಲಕ ಚಹ ಕುಡಿಯಲು ತೆರಳಿದ ವೇಳೆ ಅವಘಡ ನಡೆದಿದೆ.
ಹುಬ್ಬಳ್ಳಿ ಅಂಕೋಲಾ ಮಾರ್ಗವಾಗಿ ಮಂಗಳವಾರ ರಾತ್ರಿ ಚಲಿಸಬೇಕಿದ್ದ ಮಹಾರಾಷ್ಟç ನೊಂದಣಿಯ ಲಾರಿ ಅಂಗಡಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸವಣ್ಣಿ ಟಿ ಶಾಪ್ ಹಾಗೂ ಭಗವಾನ್ ಹೇರ್ ಕಟಿಂಗ್ ಮಳಿಗೆಗೆ ಹಾನಿಯಾಗಿದೆ. ರಾತ್ರಿ 10.45ರ ಆಸುಪಾಸಿಗೆ ಈ ಅವಘಡ ನಡೆದಿದೆ.
ಲಾರಿ ನಿಧಾನವಾಗಿ ಚಲಿಸಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಲಾರಿ ಮೊದಲು ಬಸವಣ್ಣಿ ಟಿ ಶಾಪ್’ಗೆ ಗುದ್ದಿದ್ದು, ಆ ಮಳಿಗೆಯ ಗೋಡೆ ಪಕ್ಕದಲ್ಲಿದ್ದ ಕಟಿಂಗ್ ಅಂಗಡಿ ಮೇಲೆ ಬಿದ್ದಿದೆ. ಅಪಘಾತ ಸ್ಥಳದಲ್ಲಿ ಹೆಚ್ಚಿನ ಜನರು ಇರಲಿಲ್ಲ. ಅಪಘಾತ ನಡೆದ ನಂತರ ಸಾಕಷ್ಟು ಜನ ಜಮಾಯಿಸಿದರು.
ಲಾರಿ ಚಾಲಕ ಸೂಕ್ತ ಭದ್ರತೆಯಿಲ್ಲದೇ ಹೆದ್ದಾರಿ ಅಂಚಿನಲ್ಲಿ ಲಾರಿ ನಿಲ್ಲಿಸಿದ್ದು, ಅವಘಡಕ್ಕೆ ಕಾರಣ. ಲಾರಿ ಅಪಘಾತದ ವೇಳೆ ಚಾಲಕ ಸಹ ಅದೇ ಚಹದ ಅಂಗಡಿಯಲ್ಲಿದ್ದಿರುವುದನ್ನು ಪ್ರತ್ಯಕ್ಷದರ್ಶಿಗಳು ಖಚಿತಪಡಿಸಿದ್ದಾರೆ.







