6
  • Latest
Disagreement over building a house: Son stabs father!

ಮನೆ ಕಟ್ಟುವ ವಿಚಾರದಲ್ಲಿ ವೈಮನಸ್ಸು: ಅಪ್ಪನಿಗೆ ಚಾಕು ಚುಚ್ಚಿದ ಪುತ್ರ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮನೆ ಕಟ್ಟುವ ವಿಚಾರದಲ್ಲಿ ವೈಮನಸ್ಸು: ಅಪ್ಪನಿಗೆ ಚಾಕು ಚುಚ್ಚಿದ ಪುತ್ರ!

AchyutKumar by AchyutKumar
in ಸ್ಥಳೀಯ
Disagreement over building a house: Son stabs father!

ಹಳಿಯಾಳದ ಗಾಂಧಿಕೇರಿಯಲ್ಲಿ ಮನೆ ಕಟ್ಟುವ ವಿಚಾರವಾಗಿ ಅಪ್ಪ-ಮಗನ ನಡುವೆ ವೈಮನಸ್ಸು ಉಂಟಾಗಿದೆ. ಇದೇ ವಿಷಯವಾಗಿ ಜಗಳವಾಗಿದ್ದು, ಸುರೇಶ ತಳವಾರ ಎಂಬಾತರು ತಮ್ಮ ತಂದೆ ಪರಶುರಾಮ ತಳವಾರ್ ಅವರಿಗೆ ಚಾಕು ಚುಚ್ಚಿ ಕೊಲೆಗೆ ಪ್ರಯತ್ನಿಸಿದ್ದಾರೆ!

ADVERTISEMENT

81 ವರ್ಷದ ಪರಶುರಾಮ ತಳವಾರ ಅವರು ಸರ್ವೇ ನಂ 1414ರ ಮಾಲಕರಾಗಿದ್ದಾರೆ. ಈ ಭೂಮಿಯಲ್ಲಿ ಮನೆ ಕಟ್ಟುವುದಾಗಿ ಅವರ ಪುತ್ರ ಸುರೇಶ ತಳವಾರ್ ಹೇಳಿದ್ದು, ಅದಕ್ಕೆ ಪರಶುರಾಮ ತಳವಾರ್ ಒಪ್ಪಿಗೆ ಸೂಚಿಸಿಲ್ಲ. 2024ರ ಅಕ್ಟೋಬರಿನಿಂದ ಅಪ್ಪ-ಮಕ್ಕಳ ನಡುವೆ ಇದೇ ವಿಷಯವಾಗಿ ವೈಮನಸ್ಸು ಉಂಟಾಗಿದೆ. ಪದೇ ಪದೇ ಜಗಳವೂ ನಡೆದಿದೆ.

ಮಾರ್ಚ 26ರಂದು ಸುರೇಶ ತಳವಾರ್ ಮತ್ತೆ ಮನೆ ಕಟ್ಟುವ ವಿಚಾರವಾಗಿ ಕುಟುಂಬದವರ ಜೊತೆ ಜಗಳ ಮಾಡಿದ್ದಾರೆ. ರಾತ್ರಿ 8.30ಕ್ಕೆ ಜಗಳ ಜೋರಾದಾಗ ಪರಶುರಾಮ ತಳವಾರ್ ಸಮಾಧಾನ ಮಾಡಿದ್ದಾರೆ. `ಹಿರಿಯರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸೋಣ’ ಎಂದು ಪರಶುರಾಮ ತಳವಾರ್ ಹೇಳಿದ್ದಾರೆ. ಆಗ, ಏಕಾಏಕಿ ಸಿಟ್ಟಾದ ಸುರೇಶ ತಳವಾರ್ ತಂದೆಗೆ ಕೆಟ್ಟದಾಗಿ ಬೈದಿದ್ದಾರೆ. `ನೀನು ಎಂಥ ಅಪ್ಪ?’ ಎಂದು ಪ್ರಶ್ನಿಸಿದ್ದಾರೆ.

Advertisement. Scroll to continue reading.

ಜಗಳ ಬಿಡಿಸಲು ಬಂದ ತಾಯಿ ಸುಗಂಧ ಅವರಿಗೂ ನಿಂದಿಸಿದ್ದಾರೆ. `ತಂದೆ-ತಾಯಿಗೆ ಆ ರೀತಿ ಹೇಳಬಾರದು’ ಎಂದು ಬುದ್ದಿ ಹೇಳಿದಾಗ ಸುರೇಶ ತಳವಾರ್ ಇನ್ನಷ್ಟು ಸಿಟ್ಟಾಗಿದ್ದಾರೆ. `ನೀನು ಹೋದರೆ ಎಲ್ಲಾ ಸರಿಯಾಗುತ್ತದೆ’ ಎಂದು ಹೇಳಿದ ಸುರೇಶ ತಳವಾರ್ ಮನೆಯಲ್ಲಿದ್ದ ಚಾಕು ತಂದು ತಂದೆಗೆ ಚುಚ್ಚುವುದಕ್ಕಾಗಿ ದಾವಿಸಿದ್ದಾರೆ. ಆ ವೇಳೆ ಪರಶುರಾಮರ ಇನ್ನೊಬ್ಬ ಮಗ ಬಸಪ್ಪ ಆಗಮಿಸಿ ಚಾಕು ಚುಚ್ಚುವುದನ್ನು ತಡೆದಿದ್ದಾರೆ.

Advertisement. Scroll to continue reading.

ಅದಾಗಿಯೂ, ಬಸಪ್ಪರನ್ನು ಕೈಯಿಂದ ದೂಡಿದ ಸುರೇಶ ತಳವಾರ್ ಹೊಟ್ಟೆಗೆ ಚಾಕು ಚುಚ್ಚುವ ಪ್ರಯತ್ನ ಮಾಡಿದ್ದಾರೆ. ಆ ವೇಳೆ ಪರಶುರಾಮ ತಳವಾರ್ ಅವರು ತಪ್ಪಿಸಿಕೊಂಡಿದ್ದರಿoದ ಅವರ ಬಲ ಕೈಗೆ ಚಾಕು ತಾಗಿದೆ. ರಕ್ತ ನೋಡಿದ ನಂತರ ಸುರೇಶ ತಳವಾರ್ ಅಲ್ಲಿಂದ ಪರಾರಿಯಾಗಿದ್ದು, ಮಗನಿಂದ ರಕ್ಷಣೆ ಕೋರಿ ಪರಶುರಾಮ ತಳವಾರ್ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹಳಿಯಾಳ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Previous Post

ಸಮುದ್ರದಲ್ಲಿ ಬಿದ್ದ ಮೀನುಗಾರ ಸಿಕ್ಕಿದ್ದು ಶವವಾಗಿ!

Next Post

ಯೋಗ ಮಾಡುವವರಿಗೆ ಸುಯೋಗ: ಪ್ರಧಾನಿ ಘೋಷಿಸಿದ ಪ್ರಶಸ್ತಿ ಪಡೆಯಲು ಹೀಗೆ ಮಾಡಿ!

Next Post
Privilege for yoga practitioners Do this to get the award announced by the Prime Minister!

ಯೋಗ ಮಾಡುವವರಿಗೆ ಸುಯೋಗ: ಪ್ರಧಾನಿ ಘೋಷಿಸಿದ ಪ್ರಶಸ್ತಿ ಪಡೆಯಲು ಹೀಗೆ ಮಾಡಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ