6
  • Latest
Karwar Gudi Padwa grand procession reflects culture

ಕಾರವಾರ | ಸಂಸ್ಕೃತಿ ಪ್ರತಿಬಿಂಬಿಸಿದ ಗುಡಿಪಡ್ವಾ ಭವ್ಯ ಶೋಭಾ ಯಾತ್ರೆ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಕಾರವಾರ | ಸಂಸ್ಕೃತಿ ಪ್ರತಿಬಿಂಬಿಸಿದ ಗುಡಿಪಡ್ವಾ ಭವ್ಯ ಶೋಭಾ ಯಾತ್ರೆ

AchyutKumar by AchyutKumar
in ವಿಡಿಯೋ, ಸ್ಥಳೀಯ
Karwar Gudi Padwa grand procession reflects culture

ಯುಗಾದಿ- ಗುಡಿಪಡ್ವಾ ಅಂಗವಾಗಿ ನರೇಂದ್ರಾಚಾರ್ಯಜಿ ಮಹಾರಾಜ್ ಭಕ್ತ ಸೇವಾ ಮಂಡಳಿ ನೇತ್ರತ್ವದಲ್ಲಿ ಕಾರವಾರ ನಗರದಲ್ಲಿ ನಡೆದ ಭವ್ಯ ಶೋಭಾ ಯಾತ್ರೆ ನೋಡುಗರ ಮನ ಗೆದ್ದಿತು.

ADVERTISEMENT

ಯುಗಾದಿಯ ಹೊಸ ವರ್ಷದ ಆರಂಭವನ್ನು ಮರಾಠ – ಕೊಂಕಣ ಸಮುದಾಯದವರು `ಗುಡಿಪಡ್ವಾ’ ಎಂಬ ಹೆಸರಿನಿಂದ ಆಚರಿಸುತ್ತಾರೆ. ಸನಾತನ ಹಿಂದು ಸಂಸ್ಕೃತಿಯ ವಿಶೇಷಗಳನ್ನು ಈ ವೇಳೆ ಸಮುದಾಯದವರು ಸಾರುತ್ತಾರೆ. ಭಾನುವಾರ ಹೊಸ ವರ್ಷವನ್ನು ಸಾಂಪ್ರದಾಯಿಕ ಹಾಗೂ ಶಾಸ್ತ್ರೋಕ್ತವಾಗಿ ಸ್ವಾಗತಿಸಲು ನರೇಂದ್ರಾಚಾರ್ಯಜಿ ಮಹಾರಾಜ್ ಭಕ್ತ ಸೇವಾ ಮಂಡಳಿಯವರು ಭವ್ಯ ಶೋಭಾ ಯಾತ್ರೆ ನಡೆಸಿದರು.

ಕೋಡಿಬಾಗ್ ದುರ್ಗಾದೇವಿ ದೇವಸ್ಥಾನ ಹೊರಟ ಶೋಭಾಯಾತ್ರೆ ನಂದನಗದ್ದಾ ಗಣಪತಿ ದೇವಸ್ಥಾನದವರೆಗೆ ಸಾಗಿತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಶೋಭಾಯಾತ್ರೆಯಲ್ಲಿ ಡೋಲು, ನಗಾರಿಗಳು ಸದ್ದು ಮಾಡಿದವು. ಛತ್ರಪತಿ ಶಿವಾಜಿ, ಸಂಭಾಜಿ ಮಹಾರಾಜರು, ರಾಮಾಯಣ ಸೇರಿದಂತೆ ವಿವಿಧ ರೂಪಕಗಳನ್ನು ಜನ ಕಣ್ತುಂಬಿಕೊoಡರು. ಮಹಿಳೆಯರು ಪೂರ್ಣಕುಂಭ ಹಾಗೂ ಗುಡಿ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಮಕ್ಕಳು ವೃದ್ಧರು ಸಹ ನೂರಾರು ಸಂಖ್ಯೆಯಲ್ಲಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

Advertisement. Scroll to continue reading.

ಕೋಡಿಬಾಗ್ ದುರ್ಗಾದೇವಿ ದೇವಸ್ಥಾನದ ಬಳಿ ಶೋಭಾಯಾತ್ರೆಗೆ ಚಾಲನೆ ನೀಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ `ಧರ್ಮದ ಪರಿಪಾಲನೆ, ರಕ್ಷಣೆಯನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಮಾಡಬೇಕು. ಎಲ್ಲಾ ಧರ್ಮವನ್ನು ಗೌರವಿಸಿ, ಮಾನವೀಯತೆಯ ಮೌಲ್ಯ ಸಾರಬೇಕು’ ಎಂದು ಕರೆ ನೀಡಿದರು. `ಹಿಂದು ಕ್ಯಾಲೆಂಡರ್ ಪ್ರಕಾರ ಚಾಂದ್ರಮಾನ ಯುಗಾದಿ ಹೊಸ ವರ್ಷದ ಆರಂಭ. ಪೃಕೃತಿಯಲ್ಲಿ ಸಹ ಬದಲಾವಣೆಯಾಗುವುದರಿಂದ ಇಡೀ ಜಗತ್ತಿಗೂ ಈ ದಿನ ಹೊಸ ವರ್ಷ’ ಎಂದವರು ಹೇಳಿದರು.

Advertisement. Scroll to continue reading.

`ನರೇಂದ್ರಾಚಾರ್ಯಜಿ ಮಹಾರಾಜ್ ಅವರು ಉತ್ತರಕನ್ನಡ ಜಿಲ್ಲೆಯಲ್ಲಿ ಸಂಸ್ಕೃತಿ- ಸಂಪ್ರದಾಯಗಳನ್ನು ಬೆಳೆಸಿದ್ದಾರೆ. ಸಾಧು- ಸಂತರು, ಪೂರ್ವಜರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು’ ಎಂದು ಕರೆ ನೀಡಿದರು. ಎಲ್ಲರಿಗೂ ಯುಗಾದಿ ಶುಭಾಶಯಕೋರಿದ ಅವರು ನಾಡಿನ ಎಲ್ಲರು ಸುಖ- ಶಾಂತಿ- ಸಮೃದ್ಧಿಯಿಂದ ಬಾಳಲಿ’ ಎಂದು ಬೇಡಿಕೊಂಡರು. ಭಕ್ತ ಮಂಡಳಿಯ ಪ್ರಮುಖರಾದ ಸೂರಜ್ ಕೆಂಕ್ರೆ, ದೀಪಕ್ ವೆರ್ಣೇಕರ್, ನಯನಬಾಬು ಕಾಣಕೋಣಕರ್, ಅಪ್ಪಣ ಕುಡ್ತಲ್ಕರ್, ಅರುಣ್ ರಾಣೆ, ಸುರೇಶ್ ಭಟ್, ಕಿರಣ್ ತಾಮ್ಸೆ, ಸಂತೋಷ್ ಮಾಳ್ಸೇಕರ ಇತರರು ಇದ್ದರು.

ಈ ಶೋಭಾಯಾತ್ರೆಯ ವಿಡಿಯೋ ಇಲ್ಲಿ ನೋಡಿ..

Previous Post

ವಿನಾಯಕ ಎಂಟರ್ಪ್ರೈಸಸ್: ಅಗ್ಗದ ಮದ್ಯ ಸಾಗಿಸಿ ಸಿಕ್ಕಿಬಿದ್ದ ಮುಂಬೈಯ ಗಾಂಧಿ!

Next Post

ಶ್ರೀರಾಮ ಸೇನೆ ನಿರ್ಣಯ: ಸಾವಿರ ಸ್ತ್ರೀಯರಿಗೆ ತ್ರಿಶೂಲ ದೀಕ್ಷೆ!

Next Post
Sri Ram Sena resolution Trishula initiation for a thousand women!

ಶ್ರೀರಾಮ ಸೇನೆ ನಿರ್ಣಯ: ಸಾವಿರ ಸ್ತ್ರೀಯರಿಗೆ ತ್ರಿಶೂಲ ದೀಕ್ಷೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ