6
  • Latest
Life is a lie told by the government: No marriage.. no children!

ಜೀವನ ಸಂಗಮ ಎಂಬುದು ಸರ್ಕಾರವೇ ಹೇಳಿದ ಸುಳ್ಳಿನ ಕಥೆ: ಮದುವೆಯೂ ಇಲ್ಲ.. ಮಕ್ಕಳು ಇಲ್ಲ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಜೀವನ ಸಂಗಮ ಎಂಬುದು ಸರ್ಕಾರವೇ ಹೇಳಿದ ಸುಳ್ಳಿನ ಕಥೆ: ಮದುವೆಯೂ ಇಲ್ಲ.. ಮಕ್ಕಳು ಇಲ್ಲ!

AchyutKumar by AchyutKumar
in ರಾಜ್ಯ
Life is a lie told by the government: No marriage.. no children!

ಉತ್ತರ ಕನ್ನಡ ಜಿಲ್ಲಾಡಳಿತದ ವೆಬ್‌ಸೈಟಿನಲ್ಲಿ ಪ್ರದರ್ಶಿಸಿದ್ದ `ಜೀವನ ಸಂಗಮ' ಯೋಜನೆ ನೊಂದಣಿ ಅರ್ಜಿ

ರೈತರು, ನಿರುದ್ಯೋಗಿಗಳು ಹಾಗೂ ವಿಕಲಚೇತನರಿಗೆ ವಿವಾಹ ಭಾಗ್ಯ ಕಲ್ಪಿಸಲು ಉತ್ತರ ಕನ್ನಡ ಜಿಲ್ಲಾಡಳಿತ `ಜೀವನ ಸಂಗಮ’ ಎಂಬ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಹಳ್ಳ ಹಿಡಿದಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಈ ಯೋಜನೆಯೇ ದಾಖಲೆಗಳಿಂದ `ಡಿಲಿಟ್’ ಆಗಿದೆ!

ADVERTISEMENT

2024ರ ಜುಲೈ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ `ಜೀವನ ಸಂಗಮ’ ಎಂಬ ಯೋಜನೆಯನ್ನು ಜಾರಿಗೆ ತಂದಿತು. ಇನ್ನೂ ವಿವಾಹ ಆಗದವರು ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟಿಗೆ ತೆರಳಿ ವಿವಾಹ ನೊಂದಣಿ ಮಾಡಿಕೊಂಡಲ್ಲಿ ಅವರಿಗೆ ತಕ್ಕ ಬಾಳ ಸಂಗಾತಿ ಆಯ್ಕೆ ಮಾಡಿಕೊಡುವುದು ಯೋಜನೆಯ ಉದ್ದೇಶವಾಗಿತ್ತು. ಉತ್ತರ ಕನ್ನಡ ಜಿಲ್ಲೆಗೆ ಸೀಮಿತವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಯೋಜನೆಯ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕೃತ ಲೇಖನವನ್ನು ಪ್ರಸಾರ ಮಾಡಿತ್ತು. ವಿನೂತನ ಯೋಜನೆಯ ಬಗ್ಗೆ ಮಾಧ್ಯಮಗಳಲ್ಲಿ ಸಹ ಸಾಕಷ್ಟು ಪ್ರಚಾರ ಸಿಕ್ಕಿದ್ದರಿಂದ ಕಂಕಣ ಭಾಗ್ಯಕ್ಕಾಗಿ ಅನೇಕರು ನೊಂದಣಿ ಮಾಡಿಕೊಂಡಿದ್ದರು.

ಉತ್ತರ ಕನ್ನಡ ಜಿಲ್ಲಾಡಳಿತದ ವೆಬ್‌ಸೈಟಿನಲ್ಲಿ ಪ್ರದರ್ಶಿಸಿದ್ದ `ಜೀವನ ಸಂಗಮ’ ಯೋಜನೆ ಮಾಹಿತಿ

ಎಲ್ಲವೂ ಅಂದುಕೊoಡ0ತೆ ನಡೆದರೆ, ಅರ್ಜಿ ಸಲ್ಲಿಸಿದವರ ಪೂರ್ವಾಪರದ ಬಗ್ಗೆ ಗ್ರಾಮ ಆಡಳಿತಾಧಿಕಾರಿಗಳು ಪರಿಶೀಲನೆ ನಡೆಸಬೇಕಿತ್ತು. ಕಂದಾಯ ನಿರೀಕ್ಷಕರು ಅರ್ಜಿದಾರರ ಮನೆಗೆ ತೆರಳಿ ಯೋಜನೆ ಯಶಸ್ಸಿಗೆ ಶ್ರಮಿಸಬೇಕಿತ್ತು. ಮುಜುರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಈ ಸಾಮೂಹಿಕ ವಿವಾಹ ನಡೆಯಬೇಕಿತ್ತು. ನಿಯಮಾನುಸಾರ ವಿವಾಹ ಆದವರಿಗೆ ಸರ್ಕಾರದಿಂದಲೇ ಬಂಗಾರದ ತಾಳಿ ಕೊಡಬೇಕಿತ್ತು. ಆದರೆ, ಈಚೆಗೆ ನಡೆದ ಸಾಮೂಹಿಕ ವಿವಾಹದಲ್ಲಿಯೂ ಜೀವನ ಸಂಗಮ ಯೋಜನೆಯ ಅಭ್ಯರ್ಥಿಗಳು ಕಾಣಲಿಲ್ಲ. ಯೋಜನೆ ಜಾರಿಯಾಗಿ ವರ್ಷ ಸಮೀಪಿಸಿದರೂ ಜಿಲ್ಲಾಡಳಿತದಿಂದ ಒಂದೇ ಒಂದು ವಿವಾಹ ಕಾರ್ಯ ಸಹ ನಡೆದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೇಳಿದಾಗ `ಈ ಕಚೇರಿಯಿಂದ ಕಾರ್ಯಗೊಳಿಸಿದ ಲಿಖಿತ ಆದೇಶ ಇಲ್ಲ’ ಎಂಬ ಉತ್ತರ ಬಂದಿದೆ.

Advertisement. Scroll to continue reading.
ಜೀವನ ಸಂಗಮ ಯೋಜನೆ ಕುರಿತು ಯಾವುದೇ ಆದೇಶ ಇಲ್ಲದ ಬಗ್ಗೆ ಜಿಲ್ಲಾಡಳಿತ ನೀಡಿದ ಲಿಖಿತ ಉತ್ತರ

ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಗಂಗುಬಾಯಿ ಮಾನೇಕರ್ ಅವರು ಈ ಯೋಜನೆ ರೂಪಿಸಿದ್ದು, ಅವರು ಇಲ್ಲಿಂದ ವರ್ಗವಾದ ಮರುದಿನವೇ `ಜೀವನ ಸಂಗಮ’ ಯೋಜನೆಯೂ ನೆನೆಗುದಿಗೆ ಬಿದ್ದಿದೆ. ಜೀವನ ಸಂಗಮ ಯೋಜನೆಯ ರೂಪುರೇಷೆಗಳ ಪ್ರಕಾರ ಅರ್ಜಿ ಸಲ್ಲಿಸಿದವರ ಪೂರ್ವಾಪರ ವಿಚಾರಣೆ ನಡೆದಿಲ್ಲ. ಅವರಿಗೆ ಹೊಂದಾಣಿಕೆಯಾಗಬಹುದಾದ ಸಂಗಾತಿಯ ಹುಡುಕಾಟವೂ ಆಗಿಲ್ಲ. ಹೀಗಾಗಿ ಸರ್ಕಾರಿ ಯೋಜನೆ ಅಡಿ ವಿವಾಹಕ್ಕಾಗಿ ನೊಂದಣಿ ಮಾಡಿಕೊಂಡವರು ಈಗಲೂ ಬಾಳ ಸಂಗಾತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ, ಮದುವೆ ಆಗಿಲ್ಲ ಎಂಬ ಕಾರಣದಿಂದ ಆತ್ಮಹತ್ಯೆಗೆ ಶರಣಾದವರು ಸಹ ಜಿಲ್ಲೆಯಲ್ಲಿದ್ದಾರೆ.

Advertisement. Scroll to continue reading.
Previous Post

ಅವನತಿಯ ಹಾದಿ ಹಿಡಿದ ಬಿಜೆಪಿ: ಮಾಧವ ನಾಯಕ ಅಭಿಮತ

Next Post

ಸತೀಶ್ ಸೈಲ್ ಹೆದರುವುದು ಆ ದೇವರಿಗೆ ಮಾತ್ರ!

Next Post
Satish Sail is only afraid of that god!

ಸತೀಶ್ ಸೈಲ್ ಹೆದರುವುದು ಆ ದೇವರಿಗೆ ಮಾತ್ರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ