6
  • Latest
Robbery is their job: Garuda gang leader arrested!

ದರೋಡೆಯೇ ಅವರ ಕಾಯಕ: ಗರುಡಾ ಗ್ಯಾಂಗಿನ ಲೀಡರ್ ಸೆರೆ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ದರೋಡೆಯೇ ಅವರ ಕಾಯಕ: ಗರುಡಾ ಗ್ಯಾಂಗಿನ ಲೀಡರ್ ಸೆರೆ!

AchyutKumar by AchyutKumar
May 29, 2025
in ರಾಜ್ಯ
Robbery is their job: Garuda gang leader arrested!
advt advt advt
ADVERTISEMENT

ರಸ್ತೆಯಲ್ಲಿ ಹೋಗುಬರುವವರನ್ನು ಅಡ್ಡಗಟ್ಟಿ ದರೋಡೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ `ಗರುಡಾ ಗ್ಯಾಂಗ್’ನ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪಿಎಸ್‌ಐ ರನ್ನಗೌಡ ಪಾಟೀಲ್ ವೀರಾವೇಷದಿಂದ ಹೋರಾಡಿ ಮೂವರನ್ನು ಬಂಧಿಸಿದ್ದಾರೆ.

ಮೇ 28ರಂದು ನಸುಕಿನ 3 ಗಂಟೆಗೆ ಬಿಲಾಲ್‌ಖಂಡ ಗ್ರಾಮದ ಸಾಗರ ರಸ್ತೆ ಬಳಿ ಐದು ಜನ ಅಡಗಿ ಕುಳಿತಿದ್ದರು. ಅಲ್ಲಿ ಹೋಗಿ-ಬರುವವರನ್ನು ಅಡ್ಡಗಟ್ಟಲು ಆ ಐವರು ಸಂಚು ರೂಪಿಸಿದ್ದರು. ಇನೋವಾ ಕಾರಿನಲ್ಲಿ ಕೂತಿದ್ದ ಅವರ ಬಳಿ ಚಾಕು, ಚೂರಿ, ಕಾರಪುಡಿ ಸೇರಿ ಬಗೆ ಬಗೆಯ ವಸ್ತುಗಳಿದ್ದವು. ಮುಖ ಕಾಣದಂತೆ ಅವರೆಲ್ಲರೂ ಮಂಕಿ ಟೋಪಿ ಧರಿಸಿದ್ದರು.

ADVERTISEMENT
ADVERTISEMENT

ಗುಳ್ಮೆ ರಸ್ತೆ ಕ್ರಾಸಿನ ಬಳಿ ಕತ್ತಲಿನಲ್ಲಿ ಜನ ಅಡಿಗಿರುವುದನ್ನು ಕಂಡ ಭಟ್ಕಳ ಗ್ರಾಮೀಣ ಠಾಣೆ ಪಿಎಸ್‌ಐ ರನ್ನಗೌಡ ಪಾಟೀಲ್ ವಿಚಾರಣೆಗಾಗಿ ಅಲ್ಲಿಗೆ ತೆರಳಿದರು. ಆಗ ಡಕಾಯಿತರೆಲ್ಲರೂ ಓಡಿ ಹೋಗುವ ಸಿದ್ಧತೆ ನಡೆಸಿದರು. ಕಾರನ್ನು ಹಿಮ್ಮುಖವಾಗಿ ಚಲಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಕಾರು ಗಟಾರಕ್ಕೆ ಬಿದ್ದಿದ್ದು, ಈ ವೇಳೆ ಕಾರಿನಲ್ಲಿದ್ದ ಭಟ್ಕಳ ಮುಗ್ದಂ ಕಾಲೋನಿಯ ಜಿಶಾನ್, ಭಟ್ಕಳ ಬಟ್ಟಾಗಾವಿನ ನಬೀಲ್ ಓಡಿ ಪರಾರಿಯಾದರು.

Advertisement. Scroll to continue reading.
Advertisement. Scroll to continue reading.

ಭಟ್ಕಳ ಸಿಪಿಐ ದಿವಾಕರ್ ಪಿ ಎಂ, ಪಿಎಸ್‌ಐ ಬರಮಪ್ಪ ಬರಗಲಿ, ನವೀನ ನಾಯ್ಕ, ಶಾಂತಿನಾಥ ಪಾಸಾನೆ ಅವರು ತಮ್ಮ ಸಿಬ್ಬಂದಿ ಜೊತೆ ಆ ಇಬ್ಬರು ಡಕಾಯಿತರನ್ನು ಹಿಡಿಯುವ ಪ್ರಯತ್ನ ಮಾಡಿದರು. ಆದರೂ, ಅವರು ತಪ್ಪಿಸಿಕೊಂಡರು. ಉಳಿದ ಮೂವರನ್ನು ಹಿಡಿಯಲು ಹೋರಾಟ ನಡೆಸಿದ ಪಿಎಸ್‌ಐ ರನ್ನಗೌಡ ಪಾಟೀಲ್ ಅವರು ಪೊಲೀಸ್ ಸಿಬ್ಬಂದಿ ವಿನಾಯಕ ಪಾಟೀಲ. ಅಂಬರೀಶ ಕುಂಬಾರಿ, ವಿನೋದ ಜಿಬಿ, ಲೋಕೇಶ ಕತ್ತಿ, ನಿಂಗನಗೌಡ ಪಾಟೀಲ, ಜಗದೀಶ ನಾಯ್ಕ, ವಿಜಯ ಜಾದವ್, ದುರ್ಗೇಶ ನಾಯ್ಕ, ದೇವರಾಜ ಮೊಗೇರ್ ಜೊತೆ ಸೇರಿ ಉಳಿದ ಮೂವರನ್ನು ವಶಕ್ಕೆಪಡೆದರು. ಗರುಡಾ ಗ್ಯಾಂಗಿನ ಪ್ರಮುಖ ಆರೋಪಿತರಾದ ಮಂಗಳೂರಿನ ಜಲೀಲ ಹುಸೈನ್, ಭಟ್ಕಳದ ಗಾಂಧೀನಗರದ ಹೆಬಳೆಯ ನಾಶೀರ್ ಹಕಿಂ ಹಾಗೂ ಕಾನೂನಿನ ಪ್ರಕಾರ ಹೆಸರು-ಊರು ಹೇಳಲು ಸಾಧ್ಯವಾಗದ ಬಾಲಕರೊಬ್ಬರು ಈ ವೇಳೆ ಸಿಕ್ಕಿಬಿದ್ದರು.

ಮಂಗಳೂರಿನ ಜಲೀಲ ಹುಸೈನ್ ವಿರುದ್ಧ ಈಗಾಗಲೇ ಕಳ್ಳತನ, ದರೋಡೆ ಸೇರಿ 11 ಪ್ರಕರಣಗಳಿದ್ದವು. ಭಟ್ಕಳದ ಗಾಂಧೀನಗರದ ಹೆಬಳೆಯ ನಾಶೀರ್ ಹಕಿಂ ವಿರುದ್ಧ 2 ಪ್ರಕರಣ ಚಾಲ್ತಿಯಲ್ಲಿದ್ದವು. ಆ ಬಾಲಕನ ವಿರುದ್ಧವೂ ಒಂದು ಪ್ರಕರಣ ವಿಚಾರಣೆ ನಡೆಯುತ್ತಿದ್ದು, ಸಿಕ್ಕಿಬಿದ್ದವರ ಬಳಿಯಿದ್ದ 1500ರೂ ಹಣ, ಮೊಬೈಲ್, ಚಾಕು, ಬೆಲ್ಟು, ಖಾರದಪುಡಿ ಸೇರಿ ಅವರು ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆಪಡೆದರು. ಇನ್ನೂ ತಪ್ಪಿಸಿಕೊಂಡ ಭಟ್ಕಳ ಮುಗ್ದಂ ಕಾಲೋನಿಯ ಜಿಶಾನ್, ಭಟ್ಕಳ ಬಟ್ಟಾಗಾವಿನ ನಬೀಲ್ ಪತ್ತೆಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ವಿಶೇಷ ತಂಡ ರಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ, ಡಿವೈಎಸ್ಪಿ ಮಹೇಶ ಎಂ ಕೆ ಈ ಕಾರ್ಯಾಚರಣೆಗೆ ನೆರವು ನೀಡಿದರು.

ShareSendTweetShare
ADVERTISEMENT
Previous Post

ಮೇ 29: ಶಾಲೆಗೆ ರಜೆ ಇಲ್ಲ.. ಮಕ್ಕಳು ಬರಬೇಕಿಲ್ಲ!

Next Post

ಉತ್ತರ ಕನ್ನಡ | ಇಲ್ಲಿ ಮಳೆ ಬಂದರೂ ಕಷ್ಟ.. ಮಳೆ ಬಾರದಿದ್ದರೂ ನಷ್ಟ!

Next Post
Uttara Kannada It's difficult even if it rains here.. It's a loss even if it doesn't rain!

ಉತ್ತರ ಕನ್ನಡ | ಇಲ್ಲಿ ಮಳೆ ಬಂದರೂ ಕಷ್ಟ.. ಮಳೆ ಬಾರದಿದ್ದರೂ ನಷ್ಟ!

Everything in this shop is fake Even the ISI symbol has been copied by a scammer!

ಈ ಅಂಗಡಿಯಲ್ಲಿರುವುದೆಲ್ಲವೂ ನಕಲಿ: ISI ಚಿಹ್ನೆಯನ್ನೂ ನಕಲು ಮಾಡಿದ ಕಿಲಾಡಿ!

A curse on a friend who doesn't cook!

ಭೂ ವ್ಯಾಜ್ಯ: ತೆಂಗಿನಮರದ ಹಕ್ಕಿಗಾಗಿ ರಕ್ತ ಬರುವ ರೀತಿ ಹೊಡೆದಾಟ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.