6
  • Latest
Uttara Kannada It's difficult even if it rains here.. It's a loss even if it doesn't rain!

ಉತ್ತರ ಕನ್ನಡ | ಇಲ್ಲಿ ಮಳೆ ಬಂದರೂ ಕಷ್ಟ.. ಮಳೆ ಬಾರದಿದ್ದರೂ ನಷ್ಟ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಉತ್ತರ ಕನ್ನಡ | ಇಲ್ಲಿ ಮಳೆ ಬಂದರೂ ಕಷ್ಟ.. ಮಳೆ ಬಾರದಿದ್ದರೂ ನಷ್ಟ!

AchyutKumar by AchyutKumar
in ರಾಜ್ಯ
Uttara Kannada It's difficult even if it rains here.. It's a loss even if it doesn't rain!

ಒಂದು ದಶಕದಿಂದ ನಿರಂತರವಾಗಿ ಅವೈಜ್ಞಾನಿಕ ರೀತಿ ಗುಡ್ಡ ಕತ್ತರಿಸಿದ ಪರಿಣಾಮ ಉತ್ತರ ಕನ್ನಡ ಜಿಲ್ಲೆ ನಲುಗಿ ಹೋಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಕಡೆ ಗುಡ್ಡ ಕುಸಿತ ಉಂಟಾಗಿದ್ದು, ಇದರಿಂದ ಅನೇಕ ಸಾವು-ನೋವುಗಳಾಗಿದೆ. ಅದೆಲ್ಲದರ ನಡುವೆ ಈ ವರ್ಷವೂ ಗುಡ್ಡ ಕುಸಿಯುವ ಆತಂಕ ಎದುರಾಗಿದೆ.

ADVERTISEMENT

ಶೇ 80ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಊರುಗಳು ಗುಡ್ಡದ ತಪ್ಪಲಿನಲ್ಲಿವೆ. ತೋಟ ವಿಸ್ತರಣೆ, ರಸ್ತೆ ನಿರ್ಮಾಣ, ವಸತಿ ಉದ್ದೇಶ ಸೇರಿ ನಾನಾ ಕಾರಣಗಳಿಂದ ಇಲ್ಲಿ ಗುಡ್ಡ ಕಡಿಯಲಾಗುತ್ತಿದೆ. ರಸ್ತೆಗಾಗಿ ಕತ್ತರಿಸಿದ ಗುಡ್ಡಗಳು ತೀರಾ ಅಪಾಯಕಾರಿ ಸ್ಥಿತಿಯಲ್ಲಿದ್ದು, ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟಿಯ ಹೆದ್ದಾರಿಗಳಲ್ಲಿಯೇ ಗುಡ್ಡ ಕುಸಿತದ ಅಪಾಯಗಳು ಹೆಚ್ಚಿವೆ. ಜಿಲ್ಲೆಯ ಹೆದ್ದಾರಿಗಳ ಪೈಕಿ 19 ಕಡೆ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಿರುವ ಬಗ್ಗೆ ತಜ್ಞರು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ.

ಪ್ರಕೃತಿ ವಿಕೋಪದ ವೇಳೆ ಸರ್ಕಾರ ಶಾಲೆಗಳನ್ನು ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸುತ್ತದೆ. ಆದರೆ, ಆ ಕಾಳಜಿ ಕೇಂದ್ರಗಳೇ ಗುಡ್ಡದ ತಪ್ಪಲಿನಲ್ಲಿರುವುದು ಇಲ್ಲಿನ ಸಮಸ್ಯೆ. ಅನೇಕ ಕಡೆ ಶಾಲೆಗಳ ಪಕ್ಕದಲ್ಲಿಯೇ ಗುಡ್ಡ ಕುಸಿದಿದೆ. ಶಾಲಾ ಆವರಣಕ್ಕೆ ನೀರು ನುಗ್ಗಿ ಸಮಸ್ಯೆಯಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗುಡ್ಡ ಕುಸಿತ ನಡೆದಿದೆ. ರೆಸಾರ್ಟ ನಿರ್ಮಾಣಕ್ಕಾಗಿ ಅನೇಕ ಕಡೆ ದೊಡ್ಡ ದೊಡ್ಡ ಬೆಟ್ಟಗಳನ್ನು ಅಗೆಯಲಾಗಿದೆ. ಹೆದ್ದಾರಿ ಅಗಲೀಕರಣ ನೆಪದಲ್ಲಿ ಅತ್ಯಂತ ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ತೆರೆಯಲಾಗಿದೆ. ಯಂತ್ರಗಳ ಸದ್ದಿಗೆ ಕಲ್ಬಂಡೆಗಳು ನೆಲಕ್ಕೆ ಅಪ್ಪಳಿಸುತ್ತಿದೆ. ದುಡ್ಡಿದ್ದವರು ಮಾಡಿದ ತಪ್ಪಿಗೆ ಅಮಾಯಕರು ಹಿಂಸೆ ಅನುಭವಿಸುತ್ತಿದ್ದಾರೆ.

Advertisement. Scroll to continue reading.

ವ್ಯಾಪಕ ಪ್ರಮಾಣದಲ್ಲಿ ಅರಣ್ಯ ನಾಶ ಮಾಡಿರುವುದು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣ. ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟ, ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ, ಅಂಕೋಲಾ ಬಳಿಯ ಶಿರೂರು ಗುಡ್ಡ, ಹೊನ್ನಾವರ ತಾಲೂಕಿನ ಮಲೆಮನೆ ಘಟ್ಟ, ಸಮೀಪದಲ್ಲಿರುವ ಭಾಸ್ಕೇರಿ ಹಾಗೂ ಅಪ್ಸರಕೊಂಡದಲ್ಲಿನ ರಸ್ತೆಗಳು ಈಗಲೂ ಕುಸಿತದ ಆತಂಕ ಎದುರಿಸುತ್ತಿವೆ. ಇದರೊಂದಿಗೆ ಯಲ್ಲಾಪುರ ತಾಲೂಕಿನ ಕಳಚೆ ಸೇರಿ ಹಲವು ಊರುಗಳು ಗುಡ್ಡ ಕುಸಿತದಿಂದ ನಲುಗಿದ್ದು, `ಮಳೆಗಾಲ ಮುಗಿದರೆ ಸಾಕು’ ಎನ್ನುವಷ್ಟರ ಮಟ್ಟಿಗೆ ಜನ ಹೆದರಿದ್ದಾರೆ.

Advertisement. Scroll to continue reading.
Previous Post

ದರೋಡೆಯೇ ಅವರ ಕಾಯಕ: ಗರುಡಾ ಗ್ಯಾಂಗಿನ ಲೀಡರ್ ಸೆರೆ!

Next Post

ಈ ಅಂಗಡಿಯಲ್ಲಿರುವುದೆಲ್ಲವೂ ನಕಲಿ: ISI ಚಿಹ್ನೆಯನ್ನೂ ನಕಲು ಮಾಡಿದ ಕಿಲಾಡಿ!

Next Post
Everything in this shop is fake Even the ISI symbol has been copied by a scammer!

ಈ ಅಂಗಡಿಯಲ್ಲಿರುವುದೆಲ್ಲವೂ ನಕಲಿ: ISI ಚಿಹ್ನೆಯನ್ನೂ ನಕಲು ಮಾಡಿದ ಕಿಲಾಡಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ