6
  • Latest
Turtle came Turtle Disabled turtle!

ಆಮೆ ಬಂತು ಆಮೆ: ಅಂಗವಿಕಲ ಆಮೆ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಆಮೆ ಬಂತು ಆಮೆ: ಅಂಗವಿಕಲ ಆಮೆ!

AchyutKumar by AchyutKumar
in ರಾಜ್ಯ
Turtle came Turtle Disabled turtle!

ಅಂಕೋಲಾ ಕಡಲತೀರಕ್ಕೆ ಆಗಮಿಸಿದ್ದ ಅಂಗವಿಕಲ ಆಮೆಯನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆ ಆಮೆಗೆ ಆರೈಕೆ ಮಾಡಿದ್ದಾರೆ. ಆ ಆಮೆಯನ್ನು ಗುಣಪಡಿಸುವುದಕ್ಕಾಗಿ ಇದೀಗ ಕುಂದಾಪುರಕ್ಕೆ ಕಳುಹಿಸಲಾಗಿದೆ.

ADVERTISEMENT

ಅಂಕೋಲಾದ ಬೆಲಿಕೇರಿ ಕಡಲತೀರದಲ್ಲಿ ಎರಡು ಮೂರು ದಿನಗಳಿಂದ ಆಮೆಯೊಂದು ಓಡಾಡುತ್ತಿತ್ತು. ಆ ಆಮೆಗೆ ಸಮುದ್ರದಲ್ಲಿ ಈಜಲು ಆಗುತ್ತಿರಲಿಲ್ಲ. ಕಾರಣ ಆಮೆಯ ಕಾಲುಗಳು ಸರಿಯಾಗಿರಲಿಲ್ಲ. ಹೀಗಾಗಿ ಎಲ್ಲಾ ಆಮೆಗಳು ಆಳ ಸಮುದ್ರ ತಲುಪಿದರೂ ಈ ಆಮೆ ಬಳಿ ಅದು ಸಾಧ್ಯವಾಗಿರಲಿಲ್ಲ.

ಅಲ್ಲಿನ ಮೀನುಗಾರರಾದ ಸತೀಶ, ಗೌರೀಶ ಹಾಗೂ ನಾಗೇಂದ್ರ ಅವರು ಆಮೆಯ ಬಗ್ಗೆ ವಿಲಾಸ ನಾಯಕ ಅವರಿಗೆ ಮಾಹಿತಿ ನೀಡಿದರು. ವಿಲಾಸ ನಾಯಕ ಅವರು ಆಮೆಯ ಶೋಚನಿಯ ಸ್ಥಿತಿಯ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು. ಕಡಲ ಆಮೆ ರಕ್ಷಣೆಗಾಗಿ ಶ್ರಮಿಸುವ ಅರಣ್ಯ ಇಲಾಖೆ ಸಿಬ್ಬಂದಿ ಸಮುದ್ರ ತೀರಕ್ಕೆ ಆಗಮಿಸಿದರು. ಆಮೆಯ ಸ್ಥಿತಿ ನೋಡಿ ಮರುಗಿದ ಅವರು ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು.

Advertisement. Scroll to continue reading.

ಕಡಲ ಆಮೆಯ ಮೊಟ್ಟೆ ಸಂರಕ್ಷಿಸಿ ಮರಿ ಮಾಡಿ ಸಮುದ್ರಕ್ಕೆ ಬಿಟ್ಟ ಅನುಭವಹೊಂದಿದ ಆ ಸಿಬ್ಬಂದಿ ಆಗಮಿಸಿ, ಆಮೆಯ ಚಿಕಿತ್ಸೆ ಶುರು ಮಾಡಿದರು. ಸಮುದ್ರದಲ್ಲಿ ಈಜಲಾಗದೇ ಒದ್ದಾಡುತ್ತಿದ್ದ ಆಮೆಯ ಮುಂಗಾಲು ಬೆಳವಣಿಗೆ ಆಗದಿರುವುದನ್ನು ಗಮನಿಸಿದರು. ಆ ಆಮೆಗೆ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ಸಾಗಿಸಿದ್ದು, ಅಲ್ಲಿ ತಜ್ಞರು ಆಮೆಯ ಮೇಲೆ ವಿಶೇಷ ನಿಗಾವಿಡಲಿದ್ದಾರೆ.

Advertisement. Scroll to continue reading.

ಕಡಲ ಆಮೆಗಳು ಮೊಟ್ಟೆಯಿಡುವುದಕ್ಕಾಗಿ ಸಮುದ್ರ ದಡೆಗೆ ಬರುತ್ತಿದ್ದು, ಆಮೆ ಮೊಟ್ಟೆಯನ್ನು ನಾಯಿಯಿಂದ ರಕ್ಷಿಸುವಲ್ಲಿ ಅರಣ್ಯ ಇಲಾಖೆ ಪ್ರಮುಖ ಪಾತ್ರ ನಿಭಾಯಿಸುತ್ತಿದೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯ ಕಡಲ ಆಮೆಯನ್ನು ರಕ್ಷಿಸಿ ಕಡಲಿಗೆ ಬಿಡುತ್ತಿದೆ. ಕಡಲಿನಲ್ಲಿ ಆಮೆ ಮೊಟ್ಟೆಯಿಟ್ಟಿರುವ ಸುದ್ದಿ ಮುಟ್ಟಿಸಿದವರಿಗೂ ಅರಣ್ಯ ಇಲಾಖೆ ಸಾವಿರ ರೂ ಬಹುಮಾನ ನೀಡುತ್ತಿದೆ.

Previous Post

ಹೊಟ್ಟೆಯಲ್ಲಿ ಮಗು: ದೇಹಕ್ಕೆ ಕೋವಿಡ್!

Next Post

ರಾಜಕೀಯ ಆಟದಲ್ಲಿ ಉಚ್ಚಾಟನೆ ಪರ್ವ!

Next Post
Expulsion is a game of politics!

ರಾಜಕೀಯ ಆಟದಲ್ಲಿ ಉಚ್ಚಾಟನೆ ಪರ್ವ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ