6
  • Latest
IT Park Construction Swarnavalli Sri's cooperation in the fight for job creation

ಐಟಿ ಪಾರ್ಕ ನಿರ್ಮಾಣ: ಉದ್ಯೋಗ ಸೃಷ್ಠಿಯ ಹೋರಾಟಕ್ಕೆ ಸ್ವರ್ಣವಲ್ಲಿ ಶ್ರೀಗಳ ಸಹಕಾರ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಐಟಿ ಪಾರ್ಕ ನಿರ್ಮಾಣ: ಉದ್ಯೋಗ ಸೃಷ್ಠಿಯ ಹೋರಾಟಕ್ಕೆ ಸ್ವರ್ಣವಲ್ಲಿ ಶ್ರೀಗಳ ಸಹಕಾರ

AchyutKumar by AchyutKumar
in ಸ್ಥಳೀಯ
IT Park Construction Swarnavalli Sri's cooperation in the fight for job creation

ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ `ಟೆಕ್ ಪಾರ್ಕ್’ ನಿರ್ಮಾಣ ವಿಷಯವಾಗಿ ಹೋರಾಟಗಾರರು ಸೋಂದಾ ಸ್ವರ್ಣವಲ್ಲಿ ಶ್ರೀಗಳನ್ನು ಭೇಟಿ ಮಾಡಿದ್ದಾರೆ. `ಹೋರಾಟ ಮುಂದುವರೆಸಿ.. ನಾನು ನಿಮ್ಮ ಜೊತೆಗಿರುವೆ’ ಎಂದು ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಧೈರ್ಯ ತುಂಬಿದ್ದಾರೆ.

ADVERTISEMENT

ಬೇಡ್ತಿ ಜಲ ವಿದ್ಯುತ್ ಯೋಜನೆಗಾಗಿ ಸರ್ಕಾರ ಈ ಹಿಂದೆ ಆಸಕ್ತಿವಹಿಸಿದ್ದು, ಈ ವೇಳೆ ಮಾಗೋಡಿನಲ್ಲಿ ನೂರಾರು ಎಕರೆ ಭೂಮಿಯನ್ನು ಈ ಯೋಜನೆಗಾಗಿ ಮೀಸಲಿಟ್ಟಿತ್ತು. ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಅವರ ನೇತ್ರತ್ವದಲ್ಲಿಯೇ ಆ ವೇಳೆ `ಪರಿಸರ ಉಳಿಸಿ’ ಎಂಬ ಹೋರಾಟ ನಡೆದಿತ್ತು. ಸಾವಿರಾರು ಜನ ಪ್ರತಿಭಟಿಸಿದ ಕಾರಣ ಸರ್ಕಾರ ಉದ್ದೇಶಿಸಿದ್ದ ಬೇಡ್ತಿ ಜಲ ವಿದ್ಯುತ್ ಯೋಜನೆ ನೆನೆಗುದಿಗೆ ಬಿದ್ದಿತು. ಆದರೆ, ಮಾಗೋಡಿನಲ್ಲಿ ಸರ್ಕಾರ ಮೀಸಲಿಟ್ಟ ಭೂಮಿ ಪಾಳು ಬಿದ್ದಿತು. ಈ ಭೂಮಿಯಲ್ಲಿ `ಐಟಿ ಪಾರ್ಕ’ ಸ್ಥಾಪಿಸಬೇಕು ಎಂಬುದು ಈಗಿನ ಬೇಡಿಕೆ.

`ಸೋಂದಾ ಸ್ವರ್ಣವಲ್ಲಿ ಶ್ರೀಗಳ ನೇತ್ರತ್ವದಲ್ಲಿ ಹೋರಾಟ ನಡೆದ ಪರಿಣಾಮ ಈ ಭಾಗದ ಪರಿಸರ ಉಳಿದಿದೆ. ಹೀಗಾಗಿ ಅವರ ಮುಂದಾಳತ್ವದಲ್ಲಿಯೇ ಐಟಿ ಪಾರ್ಕ ನಿರ್ಮಾಣದ ಹೋರಾಟ ಶುರು ಮಾಡೋಣ’ ಎಂದು ಸ್ಥಳೀಯರು ಮಾತನಾಡಿಕೊಂಡಿದ್ದರು. ಈ ಹಿನ್ನಲೆ ಶನಿವಾರ ಪ್ರಮುಖ ಹೋರಾಟಗಾರರು ಶ್ರೀಗಳ ಬಳಿ ತೆರಳಿ ವಿಷಯ ಪ್ರಸ್ತಾಪಿಸಿದರು. `ಮಾಗೋಡಿನಲ್ಲಿ ಐಟಿ ಪಾರ್ಕ ಮಾಡಿದರೆ ಐಟಿ ಕಂಪನಿ ಬರುವ ಸಾಧ್ಯತೆಯಿದೆಯೇ?’ ಎಂದು ಈ ವೇಳೆ ಶ್ರೀಗಳು ಪ್ರಶ್ನಿಸಿದರು. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಹೋರಾಟ ನಡೆಸುವಂತೆ ಸೂಚಿಸಿದರು.

Advertisement. Scroll to continue reading.

`ಈಗಾಗಲೇ ಹಲವು ಕಂಪನಿಯವರ ಜೊತೆ ಮಾತನಾಡಲಾಗಿದ್ದು, ಮಾಗೋಡು ಪರಿಸರದ ಬಗ್ಗೆ ಕಂಪನಿ ಮುಖ್ಯಸ್ಥರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಇಲ್ಲಿ ಐಟಿ ಪಾರ್ಕ ಆದಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಯಾಗಲಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ನಿರ್ಧರಿಸಲಾಗಿದ್ದು, ಸ್ಥಳೀಯವಾಗಿ ಉದ್ಯೋಗ ಸೃಷ್ಠಿ ಆಗುವುದರಿಂದ ಹಳ್ಳಿಗಳು ವೃದ್ಧಾಶ್ರಮವಾಗಿ ಬದಲಾಗುತ್ತಿರುವುದಕ್ಕೆ ಕಡಿವಾಣ ಬೀಳಲಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮನವರಿಕೆ ಮಾಡಿದರು. `ಹಳ್ಳಿಗಳು ವೃದ್ಧಾಶ್ರಮ ಆಗಲು ಬಿಡಬಾರದು ಎಂದು ಮಠವೂ ಮೊದಲಿನಿಂದಲೂ ಪ್ರಯತ್ನಿಸುತ್ತಿದೆ. ಐಟಿ ಪಾರ್ಕ ಸ್ಥಾಪನೆಯಿಂದ ಉದ್ಯೋಗ ಸೃಷ್ಠಿ ಜೊತೆ ಸ್ಥಳೀಯ ಅಭಿವೃದ್ಧಿಯೂ ಆಗುತ್ತದೆ ಎಂದಾದರೆ ನಿಮ್ಮೆಲ್ಲರ ಜೊತೆ ನಾನಿದ್ದೇನೆ’ ಎಂದು ಶ್ರೀಗಳು ಅಭಯ ನೀಡಿದರು.

Advertisement. Scroll to continue reading.

20 ನಿಮಿಷಗಳ ಕಾಲ ಈ ಬಗ್ಗೆ ಚರ್ಚೆ ನಡೆಯಿತು. ಮಾಗೋಡು ಭಾಗದ ಪ್ರಮುಖರಾದ ನಾಗರಾಜ ಕೌಡಿಕೆರೆ, ಜಿ ಎನ್ ಭಟ್ ತಟ್ಟಿಗದ್ದೆ, ಸುಬ್ರಾಯ ಭಟ್ಟ ದಾನ್ಯಾನಕೊಪ್ಪ, ಸುಬ್ಬಣ್ಣ ಉದ್ದಾಬೈಲ, ನಿರಂಜನ ಭಟ್ಟ, ರಾಘವೇಂದ್ರ ಭಟ್ಟ, ಗಣಪತಿ ಭಟ್ಟ ಕೌಡಿಕೆರೆ, ಮಹಾಬಲೇಶ್ವರ ಹೆಗಡೆ, ಅಂಕಿತ ಹೆಗಡೆ ಇತರರು ಶ್ರೀಗಳ ದರ್ಶನಪಡೆದರು.

Previous Post

ರಾಜಕೀಯ ಆಟದಲ್ಲಿ ಉಚ್ಚಾಟನೆ ಪರ್ವ!

Next Post

ಶ್ರೀಕುಮಾರ: ತಪ್ಪು ಮಾಡದಿದ್ದರೂ ಕಲ್ಲಿನ ಏಟು!

Next Post
Sirsi-Bengaluru Stone pelted on Srikumar bus!

ಶ್ರೀಕುಮಾರ: ತಪ್ಪು ಮಾಡದಿದ್ದರೂ ಕಲ್ಲಿನ ಏಟು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ