6
  • Latest
Tourists' rampage in dense forest Those who beat up forest guards sentenced to prison!

ದಟ್ಟ ಕಾಡಿನಲ್ಲಿ ಪ್ರವಾಸಿಗರ ರಂಪಾಟ: ಅರಣ್ಯ ಸಿಬ್ಬಂದಿಗೆ ಥಳಿಸಿದವರಿಗೆ ಸೆರೆಮನೆ ವಾಸ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ದಟ್ಟ ಕಾಡಿನಲ್ಲಿ ಪ್ರವಾಸಿಗರ ರಂಪಾಟ: ಅರಣ್ಯ ಸಿಬ್ಬಂದಿಗೆ ಥಳಿಸಿದವರಿಗೆ ಸೆರೆಮನೆ ವಾಸ!

AchyutKumar by AchyutKumar
in ದೇಶ - ವಿದೇಶ
Tourists' rampage in dense forest Those who beat up forest guards sentenced to prison!

ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜೊಯಿಡಾದ ದೂದ್ ಸಾಗರ್ ಜಲಪಾತಕ್ಕೆ ತೆರಳಬೇಕಿದ್ದ ಪ್ರವಾಸಿಗರು ಗೋವಾ ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಅರಣ್ಯ ಸಿಬ್ಬಂದಿ ಆಸ್ಪತ್ರೆ ಸೇರಿದ್ದಾರೆ. ಅದಾದ ನಂತರ ಅರಣ್ಯ ಇಲಾಖೆ ಹಾಗೂ ಪೊಲೀಸರು ಕಾಡು ಪೂರ್ತಿ ಸುತ್ತಾಟ ನಡೆಸಿ ದಾಳಿ ನಡೆಸಿದವರನ್ನು ವಶಕ್ಕೆಪಡೆದಿದ್ದಾರೆ.

ADVERTISEMENT

ಪ್ರಸಿದ್ಧ ದೂದ್ ಸಾಗರ್ ಜಲಪಾತಕ್ಕೆ ಇದೀಗ ಪ್ರವೇಶ ನಿಷಿದ್ಧ. ಅದಾಗಿಯೂ ಆ ಮಾರ್ಗದ ರೈಲು ಏರಿ ಬರುವ ಪ್ರವಾಸಿಗರು ಕಾಡಿನಲ್ಲಿ ಇಳಿಯುತ್ತಾರೆ. ಅಲ್ಲಿಂದ ನಡೆದು ದೂದ್ ಸಾಗರ್ ಜಲಪಾತಕ್ಕೆ ತೆರಳುತ್ತಾರೆ. ಕಾಡಿನಲ್ಲಿ ದಾರಿ ತಪ್ಪುವ ಸಾಧ್ಯತೆ ಹಾಗೂ ಇನ್ನಿತರ ಅಪಾಯಗಳಿದ್ದರೂ ಪ್ರವಾಸಿಗರು ಕದ್ದು-ಮುಚ್ಚಿ ಜಲಪಾತ ವೀಕ್ಷಣೆಗೆ ಹೋಗುತ್ತಿದ್ದಾರೆ.

ಕಳೆದ ಗುರುವಾರ ಹುಬ್ಬಳ್ಳಿಯ ಶ್ರವಣ ಕರಡಿಗುಡ್ಡ ಹಾಗೂ ಹಳಿಯಾಳದ ಮಹಾದೇವಪ್ಪ ಮಾಲ್ಗುಂಡಿ ಎಂಬಾತರು ತಮ್ಮ ಇನ್ನಿಬ್ಬರು ಸ್ನೇಹಿತರ ಜೊತೆ ಗೋವಾಗೆ ಹೋಗಿದ್ದರು. ಅಲ್ಲಿಂದ ಮುಂದೆ ದೂದ್ ಸಾಗರ್ ಮಾರ್ಗವಾಗಿ ಸಂಚರಿಸುವ ರೈಲು ಏರಿದ್ದರು. ದೂದ್ ಸಾಗರ್ ಜಲಪಾತಕ್ಕಿಂದ ಹಿಂದೆ ಅವರು ರೈಲಿನಿಂದ ಇಳಿದಿದ್ದು, ಕಾಡು ಸುತ್ತುವ ಕೆಲಸ ಶುರು ಮಾಡಿದ್ದರು. ಜಲಪಾತದ ದಾರಿ ಹುಡುಕಿ ಹೊರಟ ಅವರು ವನ್ಯಜೀವಿ ಅಭಯಾರಣ್ಯ ಪ್ರವೇಶಿಸಿದ್ದರು.

Advertisement. Scroll to continue reading.

ಅಕ್ರಮವಾಗಿ ಅಭಯಾರಾಣ್ಯ ಪ್ರವೇಶಿಸಿರುವುದನ್ನು ಗೋವಾದ ಅರಣ್ಯ ಸಿಬ್ಬಂದಿ ಗಮನಿಸಿದರು. ಕೂಡಲೇ ಅಲ್ಲಿಗೆ ಧಾವಿಸಿದ ಗೋವಾ ಅರಣ್ಯ ಸಿಬ್ಬಂದಿ ಮಂಗಲದಾಸ ಗಾಂವ್ಕರ ಹಾಗೂ ನಾಗು ದೋಯಿಪಡೆ ಆ ನಾಲ್ವರು ಪ್ರವಾಸಿಗರನ್ನು ತಡೆದರು. ಮುಂದೆ ಹೋಗದಂತೆ ಎಚ್ಚರಿಸಿದರು. ಅದಾಗಿಯೂ ಆ ನಾಲ್ವರು ಅರಣ್ಯ ಸಿಬ್ಬಂದಿ ಜೊತೆ ಜಗಳವಾಡಿದರು. ಶ್ರವಣ ಕರಡಿಗುಡ್ಡ ಹಾಗೂ ಮಹಾದೇವಪ್ಪ ಮಾಲ್ಗುಂಡಿ ಸೇರಿ ಅರಣ್ಯ ಸಿಬ್ಬಂದಿಯನ್ನು ಥಳಿಸಿದರು. ಪ್ರವಾಸಿಗರು ತಮ್ಮ ಬಳಿಯಿದ್ದ ಹರಿತವಾದ ಆಯುಧಗಳಿಂದಲು ತಿವಿದರು.

Advertisement. Scroll to continue reading.

ಪರಿಣಾಮ ಆ ಇಬ್ಬರು ಅರಣ್ಯ ಸಿಬ್ಬಂದಿ ಗಾಯಗೊಂಡಿದ್ದು, ಅವರು ಗೋವಾದ ಆಸ್ಪತ್ರೆ ಸೇರಿದರು. ಈ ವಿಷಯ ಅರಿತ ಪೊಲೀಸರು ಅರಣ್ಯ ಸಿಬ್ಬಂದಿ ನೆರವು ಪಡೆದು ಕಾಡಿನಲ್ಲಿ ಕಾರ್ಯಾಚರಣೆ ನಡೆಸಿದರು. ಅಲ್ಲಿ ಅವಿತುಕೊಂಡಿದ್ದ ಪ್ರವಾಸಿ ದುಷ್ಕರ್ಮಿಗಳನ್ನು ವಶಕ್ಕೆಪಡೆದರು. ಸದ್ಯ ಗೋವಾ ಪೊಲೀಸರು ಅವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Previous Post

ಸರ್ಕಾರಿ ಸೂಚನೆಗೆ ಇಲ್ಲಿ ಕಿಂಚಿತ್ತೂ ಕಿಮ್ಮತ್ತಿಲ್ಲ!

Next Post

ಸೇತುವೆ ಮೇಲೆ ಸರ್ಕಸ್: ಅಪಾಯದಲ್ಲಿದ್ದ ಮಗು ರಕ್ಷಿಸಿದ ಅಪರಿಚಿತ ಧ್ವನಿ!

Next Post
Camera Eye An unknown voice saved a child in danger!

ಸೇತುವೆ ಮೇಲೆ ಸರ್ಕಸ್: ಅಪಾಯದಲ್ಲಿದ್ದ ಮಗು ರಕ್ಷಿಸಿದ ಅಪರಿಚಿತ ಧ್ವನಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ