6
  • Latest
Coming at night... stealing cows Fake registration for a luxury car!

ರಾತ್ರಿ ಬರ್ತಾರೆ.. ಹಸು ಕದಿತಾರೆ: ಐಷಾರಾಮಿ ಕಾರಿಗೆ ನಕಲಿ ನೋಂದಣಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ರಾತ್ರಿ ಬರ್ತಾರೆ.. ಹಸು ಕದಿತಾರೆ: ಐಷಾರಾಮಿ ಕಾರಿಗೆ ನಕಲಿ ನೋಂದಣಿ!

AchyutKumar by AchyutKumar
in ರಾಜ್ಯ
Coming at night... stealing cows Fake registration for a luxury car!

ತರಕಾರಿ ವ್ಯಾಪಾರ, ವೆಲ್ಡಿಂಗ್ ಕೆಲಸ ಹಾಗೂ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಮೂವರು  ಬಕ್ರೀದ್ ಹಬ್ಬದ ವೇಳೆ ಗೋ ಕಳ್ಳತನದ ಮೂಲಕ ಬಹುಬೇಗ ಶ್ರೀಮಂತರಾಗಲು ಉದ್ದೇಶಿಸಿದ್ದರು. ಶಿರಸಿ ಪೊಲೀಸರು ಅದಕ್ಕೆ ತಡೆಯೊಡ್ಡಿ ಆ ಮೂವರನ್ನು ಜೈಲಿಗೆ ಕಳುಹಿಸಿದರು.

ADVERTISEMENT

ಶಿವಮೊಗ್ಗದ ಭದ್ರಾವತಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಇಮ್ರಾನ್ ಬೇಗ್, ವೆಲ್ಡಿಂಗ್ ಕೆಲಸಗಾರ ನದೀಮ್ ಖಲೀಲ್ ಹಾಗೂ ಕೂಲಿ ಕಾರ್ಮಿಕ ಅಬ್ದುಲ್ ಆಜೀಜ್ ಈಚೆಗೆ ಸ್ಕಾರ್ಫಿಯೋ ಕಾರು ಖರೀದಿಸಿದ್ದರು. ಆ ಕಾರಿನಲ್ಲಿಯೇ ಅವರು ಶಿರಸಿಗೆ ಬಂದಿದ್ದರು. ಕಾರಿನ ನೋಂದಣಿ ಸಂಖ್ಯೆಯನ್ನು ಬದಲಿಸಿ ಶಿರಸಿಯ ಎಲ್ಲಾ ಕಡೆ ಓಡಾಟ ನಡೆಸಿದ್ದರು. ಬೀದಿಯಲ್ಲಿ ಮಲಗುವ ಜಾನುವಾರುಗಳನ್ನು ಲೆಕ್ಕ ಮಾಡಿದ್ದ ಅವರು ಅದನ್ನು ಕದ್ದು ಬಕ್ರೀದ್ ಹಬ್ಬ ಆಚರಿಸಲು ಉದ್ದೇಶಿಸಿದ್ದರು. ಕದ್ದ ಹಸುಗಳ ಮಾಂಸ ಮಾರಾಟ ಮಾಡಿ ಅದರಿಂದ ಕಾಸು ಸಂಪಾದಿಸಲು ಸಂಚು ರೂಪಿಸಿದ್ದರು.

ಐಷಾರಾಮಿ ಕಾರಿನ ನೋಂದಣಿ ಸಂಖ್ಯೆ ಬದಲಿಸಿ ರಾತ್ರಿ ಸಂಚಾರ ನಡೆಸಿದ ಆ ಮೂವರು ಜಾನುವಾರು ಅಪಹರಣದ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದವು. ಆ ಪ್ರಕರಣ ಬೆನ್ನತ್ತಿದ ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಅವರು ಎಸ್ಪಿ ಎಂ ನಾರಾಯಣ, ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ, ಜಗದೀಶ ಎಂ ಅವರಿಗೆ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು. ಮೇಲಧಿಕಾರಿಗಳ ಸೂಚನೆ ಮೇರೆಗೆ ಕಾರವಾರ ಟೆಕ್ನಿಕಲ್ ಸೆಲ್’ನ ಉದಯ ಗುನಗಾ, ಬಬನ ಕದಂ ಹಾಗೂ ಮಾರುತಿ ಮಳಗಿ ಅವರ ನೆರವು ಪಡೆದು ಶಿವಮೊಗ್ಗದ ಕಡೆ ಮುಖ ಮಾಡಿದರು.

Advertisement. Scroll to continue reading.

ಜೂನ್ 3ರಂದು ಶಿರಸಿ ಮಾರಿಕಾಂಬಾ ಕ್ರೀಡಾಂಗಣದ ಬಳಿ ಚಲಿಸುತ್ತಿದ್ದ ಕಾರನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದರು. ಪಿಐ ಮಂಜುನಾಥ ಗೌಡ, ಪಿಎಸ್‌ಐ ರತ್ನಾ ಕುರಿ ಹಾಗೂ ಮಹಂತೇಶ ಕುಂಬಾರ್ ಅವರಿಗೆ ಭದ್ರಾವತಿಯ ನದೀಮ್ ಮಹಮ್ಮದ ಖಲೀಲ, ಅಬ್ದುಲ್ ಅಜಿಜ್ ಹಾಗೂ ಇಮ್ರಾನ ಮೆಹಬೂಬ್ ಬೇಗ ಎಂಬಾತರು ಸಿಕ್ಕಿ ಬಿದ್ದರು. ಪೊಲೀಸ್ ಸಿಬ್ಬಂದಿ ಮಹಂತೇಶ ಬಾರಕರ್, ಪ್ರಶಾಂತ ಪಾವಸ್ಕರ್, ರಾಮಯ್ಯ ಪೂಜಾರಿ ಆ ಮೂವರನ್ನು ವಿಚಾರಣೆಗೆ ಒಳಪಡಿಸಿದರು. ಪೊಲೀಸ್ ಸಿಬ್ಬಂದಿ ಸಂದೀಪ ನಿಂಬಾಯಿ, ಅಶೋಕ ನಾಯ್ಕ ಹಾಗೂ ಮಧುಕರ ಗಾಂವ್ಕರ್ ಅವರು ಕಾರಿನ ಒಳಗೆ ತಪಾಸಣೆ ನಡೆಸಿದರು. ಆಗ ಅಲ್ಲಿ ಬೇರೆ ಬೇರೆ ನೋಂದಣಿಯ ಎರಡು ವಾಹನ ಸಂಖ್ಯೆಗಳು ಸಿಕ್ಕಿದವು. ಕೆಂಪು ಬಣ್ಣದ ಸ್ಕಾರ್ಪಿಯೋ ಕಾರಿಗೆ ಬೇರೆ ಬೇರೆ ನೋಂದಣಿ ಸಂಖ್ಯೆ ಅಳವಡಿಸಿ ಕಳ್ಳರು ಓಡಾಡುತ್ತಿರುವುದು ಖಚಿತವಾಯಿತು.

Advertisement. Scroll to continue reading.

ವಿಚಾರಣೆಯನ್ನು ಇನ್ನಷ್ಟು ತೀವೃಗೊಳಿಸಿದಾಗ ಜಾನುವಾರು ಕಳ್ಳತನದ ಕರಾಳ ಮುಖ ಹೊರ ಬಂದಿತು. ಆ ಕಾರಿನಲ್ಲಿ ಕತ್ತಿ, ಹಗ್ಗಗಳು ಸಹ ಪೊಲೀಸರಿಗೆ ಸಿಕ್ಕಿದವು. ಕಳ್ಳರ ಬಳಿಯಿದ್ದ 9 ಸಾವಿರ ರೂ ಹಣ, ಆ ಕಾರು, ನಕಲಿ ನಂಬರ್ ಪ್ಲೇಟ್’ನ್ನು ಪೊಲೀಸರು ವಶಕ್ಕೆಪಡೆದರು.

Previous Post

ಅವಧಿ ಮೀರಿದ ಸಿಲೆಂಡರ್ ಪೂರೈಕೆ ಆರೋಪ: ತೂಕದಲ್ಲಿಯೂ ಮೋಸ.. ವ್ಯವಹಾರದಲ್ಲಿಯೂ ಅನ್ಯಾಯ!

Next Post

ಈ ಸರ್ಕಾರಿ ಕಚೇರಿಗೆ ಭಾನುವಾರವೂ ಕೆಲಸ!

Next Post
This government office works even on Sundays!

ಈ ಸರ್ಕಾರಿ ಕಚೇರಿಗೆ ಭಾನುವಾರವೂ ಕೆಲಸ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ