ಚಲಿಸುತ್ತಿದ್ದ ಟಾಕ್ಟರ್ ಮೇಲಿದ್ದ ಬಿದ್ದ ಪರಿಣಾಮ ಮುಂಡಗೋಡಿನ ಸತೀಶ ತಳವಾರ ಸಾವನಪ್ಪಿದ್ದಾರೆ. ಎಲ್ಲರ ಜೊತೆ ಅನ್ಯೋನ್ಯವಾಗಿ ಜೀವಿಸುತ್ತಿದ್ದ ಸತೀಶ ತಳವಾರ ಅವರ ಬದುಕು 18ನೇ ವಯಸ್ಸಿಗೆ ಕೊನೆಯಾಗಿದೆ.
ಮುಂಡಗೋಡಿನ ಹುಲಿಹೊಂಡದಲ್ಲಿ ಸತೀಶ ತಳವಾರ್ ವಾಸಿಸುತ್ತಿದ್ದರು. ಅವರು ಜೂನ್ 3ರಂದು ರಾಜು ಕಂಬಾರ (33) ಅವರು ಓಡಿಸುತ್ತಿದ್ದ ಟಾಕ್ಟರ್ ಹತ್ತಿದ್ದರು. ಮುಂಡಗೋಡು ಕಲಘಟಗಿ ರಸ್ತೆ ಮಾರ್ಗವಾಗಿ ಆ ಟಾಕ್ಟರ್ ಜೋರಾಗಿ ಚಲಿಸಿತು. ಇಂದೂರು ಗ್ರಾಮದ ಶರೀಪಜ್ಜನ ಗುಡಿ ಬಳಿ ಟಾಕ್ಟರ್ ವೇಗ ಇನ್ನಷ್ಟು ಹೆಚ್ಚಾಯಿತು.
ಪರಿಣಾಮ ಸತೀಶ ತಳವಾರ್ ಟಾಕ್ಟರಿನಿಂದ ನೆಲಕ್ಕೆ ಬಿದ್ದರು. ಬಿದ್ದ ರಭಸಕ್ಕೆ ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಸಾವನಪ್ಪಿದರು. ಸಾವಿನ ಸುದ್ದಿ ಕೇಳಿ ಸತೀಶರ ಅಣ್ಣ ಧರ್ಮರಾಜ ತಳವಾರ ಸ್ಥಳಕ್ಕೆ ಆಗಮಿಸಿದರು. `ಟಾಕ್ಟರ್ ಚಾಲಕನ ವೇಗದ ಚಾಲನೆಯೇ ಈ ಅವಘಡಕ್ಕೆ ಕಾರಣ’ ಎಂದು ಅವರು ದೂರಿದರು. ಈ ಬಗ್ಗೆ ಪೊಲೀಸ್ ಪ್ರಕರಣವನ್ನು ದಾಖಲಿಸಿದರು.







