6
  • Latest
Those who escaped then are now caught!

ಆಗ ತಪ್ಪಿಸಿಕೊಂಡವರು ಈಗ ಸಿಕ್ಕಿ ಬಿದ್ದರು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಆಗ ತಪ್ಪಿಸಿಕೊಂಡವರು ಈಗ ಸಿಕ್ಕಿ ಬಿದ್ದರು!

AchyutKumar by AchyutKumar
in ದೇಶ - ವಿದೇಶ
Those who escaped then are now caught!

ಯಲ್ಲಾಪುರ ಅಂಕೋಲಾ ಮಾರ್ಗದ ಅರಬೈಲ್ ಘಟ್ಟದಲ್ಲಿ ಕಾರುಗಳನ್ನು ಅಡ್ಡಹಾಕಿ ದರೋಡೆ ಮಾಡುವ ತಂಡದ ಸದಸ್ಯರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

2024ರ ಮೇ ತಿಂಗಳಿನಲ್ಲಿ ಮುಂಬೈಯಿoದ ಮಂಗಳೂರಿಗೆ ಹೋಗುತ್ತಿದ್ದ ಮಹಾರಾಷ್ಟದ ಸುರೇಶ್ ರಾವ್ ಎಂಬಾತರನ್ನು ನಾಲ್ಕು ಜನ ಅಡ್ಡಗಟ್ಟಿದ್ದರು. ಮೊಬೈಲ್ ನೆಟ್‌ವರ್ಕ ಸಹ ಸರಿಯಾಗಿ ಸಿಗದ ಜಾಗದಲ್ಲಿ ಪ್ರಯಾಣಿಕರನ್ನು ಸತಾಯಿಸಿದ್ದರು. ಕಾರಿನಲ್ಲಿದ್ದ ಸಂಪತ್ ಕುಮಾರ್ ಅವರನ್ನು ದರೋಡೆಕೋರರು ಬೆದರಿಸಿದ್ದರು. ಅದಾದ ನಂತರ ಹಲ್ಲೆಯನ್ನು ನಡೆಸಿ, ಕಾರಿನ ಗ್ಲಾಸ್ ಒಡೆದು ರಂಪಾಟ ನಡೆಸಿದ್ದರು. ಸಂಪತ್ ಕುಮಾರ್ ಹಾಗೂ ಸುರೇಶ್ ರಾವ್ ಅವರ ಬಳಿಯಿದ್ದ ಮೊಬೈಲು, ಕಾರಿನ ಚಾವಿಯನ್ನು ಕಿತ್ತುಕೊಂಡಿದ್ದರು. `ನೀವು ಶಿಂಧೆ ಸಾಹೇಬರ ಕಾರು ಓವರ್ ಟೆಕ್ ಮಾಡಿ ತಪ್ಪು ಮಾಡಿದ್ದೀರಿ. ಅವರ ಬಳಿ ಬನ್ನಿ’ ಎಂದು ಕಾರಿನಲ್ಲಿದ್ದವರನ್ನು ಕರೆದೊಯ್ದಿದ್ದರು.

ಅವರಿಬ್ಬರನ್ನು ತಮ್ಮ ಕಾರಿಗೆ ಹತ್ತಿಸಿಕೊಂಡ ದರೋಡೆಕೋರರು ಅರಬೈಲ್ ಕಡೆಯಿಂದ ಹುಬ್ಬಳ್ಳಿ ಕಡೆ ಕಾರು ಓಡಿಸಿದ್ದರು. ಆ ಇಬ್ಬರನ್ನು ರಸ್ತೆ ಬದಿ ಇಳಿಸಿ ಬಸ್ ಹತ್ತಿ ಅರಬೈಲ್’ಗೆ ಹೋಗಿ ಎಂದು ದಬಾಯಿಸಿದ್ದರು. ಈ ಬಗ್ಗೆ ಸುರೇಶ್ ರಾವ್ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಬಂದು ಸಹಾಯ ಕೇಳಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದಾಗ ಮಹಾರಾಷ್ಟದ ಸತೀಶ ಕೋಳಿ ಎಂಬಾತ ಸಿಕ್ಕಿ ಬಿದ್ದಿದ್ದು, ಆತನ ಜೊತೆ ನಾಲ್ವರು ಸಹಚರರನ್ನು ಪೊಲೀಸರು ಬಂಧಿಸಿದ್ದರು.

Advertisement. Scroll to continue reading.

ಆದರೆ, ಆ ಅವಧಿಯಲ್ಲಿ ಮಹಾರಾಷ್ಟದ ಅಬ್ದುಲ್ಲಾ ಶೇಖ್ ಹಾಗೂ ಸಂಕೇತ ತುಳಸಿಕರ್ ತಪ್ಪಿಸಿಕೊಂಡಿದ್ದರು. ಪೊಲೀಸರು ಅಂದಿನಿoದ ಈವರೆಗೆ ಅವರ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಜೂನ್ 4ರಂದು ಶಿರವಾಲಾ ಹಾಗೂ ಖಡಗಾವದಲ್ಲಿ ಅವರಿಬ್ಬರು ಅಡಗಿರುವ ವಿಷಯ ಅರಿತು ಈ ಬಗ್ಗೆ ಯಲ್ಲಾಪುರ ಸಿಪಿಐ ರಮೇಶ ಹಾನಾಪುರ ಅವರು ಡಿವೈಎಸ್ಪಿ ಗೀತಾ ಪಾಟೀಲ್ ಅವರಿಗೆ ತಿಳಿಸಿದರು.

Advertisement. Scroll to continue reading.

ಗೀತಾ ಪಾಟೀಲ್ ಅವರು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹಾಗೂ ಹೆಚ್ಚುವರಿ ಅಧೀಕ್ಷಕ ಜಗದೀಶ ಎಂ, ಕೃಷ್ಣಮೂರ್ತಿ ಅವರಿಗೆ ಸುದ್ದಿ ಮುಟ್ಟಿಸಿದರು. ಹಿರಿಯ ಅಧಿಕಾರಿಗಳ ಸಹಯೋಗದಲ್ಲಿ ಪಿಎಸ್‌ಐ ಸಿದ್ದಪ್ಪ ಗುಡಿ ಅವರು ನೆರೆ ರಾಜ್ಯದ ಪೊಲೀಸರ ನೆರವುಪಡೆದರು. ಪೊಲೀಸ್ ಸಿಬ್ಬಂದಿ ಬಸವರಾಜ ಹಗರಿ, ಮಹಾವೀರ, ಗಿರೀಶ ಲಮಾಣಿ ನೇತ್ರತ್ವದ ತಂಡ ಆ ಇಬ್ಬರು ಡಕಾಯಿತರನ್ನು ಬಂಧಿಸಿತು. ಸೆರೆ ಸಿಕ್ಕ ಅಬ್ದುಲ್ಲಾ ಶೇಖ್ ಹಾಗೂ ಸಂಕೇತ ತುಳಸಿಕರ್ ಅವರನ್ನು ಸದ್ಯ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ನ್ಯಾಯಾಲಯ ಅವರಿಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.

Previous Post

ಭೀಮಕೋಲದಲ್ಲಿ ಜಲ ಸಾಹಸ.. ಪ್ರವಾಸಿಗರಲ್ಲಿ ಸಂತಸ!

Next Post

BSNL: ಮಳೆ ಬಂದಾಗ ಎಲ್ಲರೂ ವ್ಯಾಪ್ತಿ ಪ್ರದೇಶದ ಹೊರಗೆ!

Next Post
BSNL Everyone is out of coverage area when it rains!

BSNL: ಮಳೆ ಬಂದಾಗ ಎಲ್ಲರೂ ವ್ಯಾಪ್ತಿ ಪ್ರದೇಶದ ಹೊರಗೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ