6
  • Latest
BSNL Everyone is out of coverage area when it rains!

BSNL: ಮಳೆ ಬಂದಾಗ ಎಲ್ಲರೂ ವ್ಯಾಪ್ತಿ ಪ್ರದೇಶದ ಹೊರಗೆ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

BSNL: ಮಳೆ ಬಂದಾಗ ಎಲ್ಲರೂ ವ್ಯಾಪ್ತಿ ಪ್ರದೇಶದ ಹೊರಗೆ!

AchyutKumar by AchyutKumar
in ದೇಶ - ವಿದೇಶ
BSNL Everyone is out of coverage area when it rains!

ಶಿರಸಿಯ ಮೂಲೆ ಮೂಲೆಗೂ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಬಿಎಸ್‌ಎನ್‌ಎಲ್ ಟವರ್ ಕಟ್ಟಲಾಗಿದೆ. ಆದರೆ, ಅದರಿಂದ ಜನರಿಗೆ ಮಾತ್ರ ಪ್ರಯೋಜನ ಸಿಗುತ್ತಿಲ್ಲ!

ADVERTISEMENT

ಶಿರಸಿ ಗ್ರಾಮೀಣ ಭಾಗದಲ್ಲಿ ಜೋರು ಮಳೆ ಬಿದ್ದರೆ ಕರೆಂಟ್ ಇರಲ್ಲ. ಮೋಡ ಕವಿದರೆ ಮೊಬೈಲ್ ನೆಟ್‌ವರ್ಕ ಕೆಲಸ ಮಾಡಿಲ್ಲ. ಹೀಗಾಗಿ ದುಬಾರಿ ಬೆಲೆಯ ಮೊಬೈಲ್ ಖರೀದಿಸಿ ಟವರ್ ನೋಡಿ ಬಿಎಸ್‌ಎನ್‌ಎಲ್ ಸಿಮ್ ಅಳವಡಿಸಿಕೊಂಡವರು ಈಗಲೂ ವ್ಯಾಪ್ತಿ ಪ್ರದೇಶದ ಹೊರಗೆ ಉಳಿದಿದ್ದಾರೆ!

ಶಿರಸಿ-ಯಲ್ಲಾಪುರ ಭಾಗದಲ್ಲಿ ಕೇಂದ್ರ ಸರ್ಕಾರ 4ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಅಡಿಯಲ್ಲಿ ಕಳೆದ ವರ್ಷ ಅಗತ್ಯವಿರುವ ಕಡೆ ಟವರ್ ನಿರ್ಮಿಸಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಹೋರಾಟ ನಡೆಸಿ ಗುಡ್ಡದ ಮೇಲೆ ಟವರ್ ಮಂಜೂರಿ ಮಾಡಿಸಿದ್ದಾರೆ. ಅನೇಕ ಕಡೆ ಟವರ್ ನಿರ್ಮಾಣವಾದರೂ ನೆಟ್‌ವರ್ಕ ಬಿಟ್ಟಿಲ್ಲ. ಇನ್ನೂ ಕೆಲವು ಕಡೆ ಮನೆ ಮುಂದೆ ಟವರ್ ಇದ್ದರೂ ಮನೆ ಒಳಗೆ ಫೋನ್ ರಿಂಗಾಗುತ್ತಿಲ್ಲ!

Advertisement. Scroll to continue reading.

ಇನ್ನೂ ಕೆಲವು ಕಡೆ ಸೋಲಾರ್ ಆಧಾರದಲ್ಲಿ ಟವರ್ ಕೆಲಸ ಮಾಡುತ್ತಿದ್ದು, ಬಿಸಿಲು ಬಿದ್ದಾಗ ಮಾತ್ರ ಬಿಎಸ್‌ಎನ್‌ಎಲ್ ನೆಟ್‌ವರ್ಕ ಬರುತ್ತದೆ. ಹೀಗಾಗಿ ಗ್ರಾಹಕರಿಗೆ ಮಳೆಗಾಲದ ಮೂರು ತಿಂಗಳು ಬೇರೆ ಕಂಪನಿಗೆ ಪೋರ್ಟ ಆಗುವುದು ಅನಿವಾರ್ಯವಾಗಿದೆ. ಹಲವು ಕಡೆ ಕಳೆದ ವರ್ಷ ನಿರ್ಮಿಸಿದ ಟವರ್ ಇನ್ನೂ ಉದ್ಘಾಟನೆಯೇ ಆಗಿಲ್ಲ. `ಉದ್ಘಾಟನೆಗೆ ಸಂಸದರಿಗೆ ಪುರಸೋತಾಗುತ್ತಿಲ್ಲ’ ಎಂಬುದು ಊರ ಮೇಲಿನ ಇನ್ನೊಂದು ಸುದ್ದಿ!

Advertisement. Scroll to continue reading.

ಉತ್ತರ ಕನ್ನಡ ಜಿಲ್ಲೆಯಲ್ಲಿ 252 ಹಳ್ಳಿಗಳಲ್ಲಿ ಟವರ್ ನಿರ್ಮಿಸುವುದು ಕೇಂದ್ರ ಸರ್ಕಾರದ ಗುರಿ. ಆ ಪೈಕಿ 71 ಕಡೆ ಬಿಎಸ್‌ಎನ್‌ಎಲ್ ಗೋಪುರ ಕಟ್ಟಲಾಗಿದೆ. ಅದರಲ್ಲಿ ಎಲ್ಲಾ ಟವರ್ ಸಿಗ್ನಲ್ ಬಿಡುತ್ತಿಲ್ಲ. ಸೋಲಾರ್ ಶಕ್ತಿ ಆಧರಿಸಿ ಸಿಗ್ನಲ್ ಬಿಡುವ ಟವರ್’ಗಳಿಗೆ ಮಳೆಗಾಲದಲ್ಲಿ ಕೆಲಸವಿಲ್ಲ. ಊರಿಗೆ ಟವರ್ ಬಂದ ಖುಷಿಗೆ ಅನೇಕರು ಕಳೆದ ವರ್ಷವೇ ಬಿಎಸ್‌ಎನ್‌ಎಲ್’ಗೆ ಮರಳಿದ್ದಾರೆ. 4ಜಿ ಸೇವೆ ಒದಗಿಸಿದ ಕಾರಣ ಮೊದಲ ಅವಧಿಯಲ್ಲಿ ಖುಷಿಯಿಂದ ಇಂಟರ್‌ನೆಟ್ ಸೇವೆಯನ್ನು ಬಳಸಿದ್ದಾರೆ. ಆದರೆ, ಈ ವರ್ಷ ಮೊದಲ ಮಳೆಗೆ ಟವರ್ ಹಾಳಾಗಿದ್ದರಿಂದ ಅವರೆಲ್ಲರೂ ನೆಟ್‌ವರ್ಕ ಸಿಗದೇ ನಿರಾಸೆವ್ಯಕ್ತಪಡಿಸಿದ್ದಾರೆ.

Previous Post

ಆಗ ತಪ್ಪಿಸಿಕೊಂಡವರು ಈಗ ಸಿಕ್ಕಿ ಬಿದ್ದರು!

Next Post

ಉತ್ತರ ಕನ್ನಡ: ಸಾಲಗಾರರು ಬೇಕಾಗಿದ್ದಾರೆ.. ಬಡ್ಡಿ ಬಡ್ಡಿ ತುಂಬುವ ಪ್ರಾಮಾಣಿಕರಿಗೆ ಇಲ್ಲಿ ಮೊದಲ ಆದ್ಯತೆ!

Next Post
Uttara Kannada Borrowers wanted.. Honest people who pay interest are given first priority here!

ಉತ್ತರ ಕನ್ನಡ: ಸಾಲಗಾರರು ಬೇಕಾಗಿದ್ದಾರೆ.. ಬಡ್ಡಿ ಬಡ್ಡಿ ತುಂಬುವ ಪ್ರಾಮಾಣಿಕರಿಗೆ ಇಲ್ಲಿ ಮೊದಲ ಆದ್ಯತೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ