6
  • Latest
Fight between fishermen Police who came to stop them were also attacked!

ಮೀನುಗಾರರ ನಡುವೆ ಮಾರಾಮಾರಿ: ತಡೆಯಲು ಬಂದ ಪೊಲೀಸರ ಮೇಲೆಯೂ ದಾಳಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮೀನುಗಾರರ ನಡುವೆ ಮಾರಾಮಾರಿ: ತಡೆಯಲು ಬಂದ ಪೊಲೀಸರ ಮೇಲೆಯೂ ದಾಳಿ!

AchyutKumar by AchyutKumar
in ಸ್ಥಳೀಯ
Fight between fishermen Police who came to stop them were also attacked!

ಬಲೆ ಹಾಕಿ ಮೀನು ಹಿಡಿಯುವ ವಿಷಯವಾಗಿ ಕುಮಟಾದ ಹೊಸ್ಕಟ್ಟಾ ಬಳಿ ಎರಡು ಗುಂಪಿನ ಮೀನುಗಾರರ ನಡುವೆ ಮಾರಾಮಾರಿ ನಡೆದಿದೆ. ಈ ವಿಷಯ ಅರಿತು ಸ್ಥಳಕ್ಕೆ ತೆರಳಿದ ಪೊಲೀಸರ ಮೇಲೆಯೂ ದಾಳಿ ನಡೆದಿದೆ.

ADVERTISEMENT

ಹೊಸಕಟ್ಟಾದ ಪ್ರಮೋದ ಹೊಸ್ಕಟ್ಟಾ ಅವರು ತೊರ್ಕೆ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಸ್ಕಟ್ಟಾ ಖ್ಯಾರಲಾಂಡ್ ಬಂಡಿಗೇಟ್ ನಿರ್ವಹಣೆ ಹಾಗೂ ಆ ಪ್ರದೇಶದ ಮೀನುಗಾರಿಕೆ ಟೆಂಡರ್ ಪಡೆದಿದ್ದರು. ಆದರೆ, ಗುರುವಾರ ರಾತ್ರಿ ಮಸಾಕಲ್’ನ ಪರಮೇಶ್ವರ ಹರಿಕಂತ್ರ, ನಾಗಪ್ಪ ಹರಿಕಂತ್ರ, ಮಂಜುನಾಥ ಹರಿಕಂತ್ರ, ಅನಂತ ಹರಿಕಂತ್ರ, ಹೊಸಕಟ್ಟಾದ ರಾಜು ಹೊಸ್ಕಟ್ಟಾ, ಜಗದೀಶ ಹೊಸ್ಕಟ್ಟಾ ಹಾಗೂ ರವಿ ಹೊಸ್ಕಟ್ಟಾ ಅಲ್ಲಿ ಆಗಮಿಸಿ ಮೀನು ಹಿಡಿಯುತ್ತಿದ್ದರು.

ಇದನ್ನು ನೋಡಿದ ಪ್ರಮೋದ ಹೊಸ್ಕಟ್ಟಾ ಅವರು ಟೆಂಡರ್ ಪಾಲುದಾರ ಪ್ರವೀರ ಹೊಸಕಟ್ಟಾ ಹಾಗೂ ಕೆಲಸದವರಿಗೆ ವಿಷಯ ತಿಳಿಸಿದರು. ಪ್ರವೀರ ಹೊಸಕಟ್ಟಾ ಕೆಲಸಗಾರರ ಜೊತೆ ಸ್ಥಳಕ್ಕೆ ಬಂದು ಟೆಂಡರ್ ಮಾಹಿತಿ ನೀಡಿದರು. ಆಗ ಎದುರಾಳಿಗಳು ಅದನ್ನು ಕೇಳಲಿಲ್ಲ. `ನಮಗೆ ಮೀನು ಹಿಡಿಯಲು ಮೀನುಗಾರಿಕಾ ಇಲಾಖೆ ಪಾಸ್ ಇದೆ’ ಎಂದು ಅವರು ಉತ್ತರಿಸಿದರು. ಈ ವಿಷಯವಾಗಿ ಎರಡು ಗುಂಪುಗಳ ನಡುವೆ ಬೈಗುಳ ಶುರುವಾಯಿತು.

Advertisement. Scroll to continue reading.

`ಇಲ್ಲಿ ಟೆಂಡರ್ ಮಾಡಲು ಗ್ರಾಮ ಪಂಚಾಯತಗೆ ಅವಕಾಶ ಇಲ್ಲ’ ಎಂದು ಪರಮೇಶ್ವರ ಹರಿಕಂತ್ರ ವಾದಿಸಿದರು. `ಇಲ್ಲಿ ಪಾಸ್ ಕೊಡುವ ಅಧಿಕಾರ ಮೀನುಗಾರಿಕೆಗೆ ಇಲ್ಲ’ ಎಂದು ಪ್ರಮೋದ ಹೊಸ್ಕಟ್ಟಾ ಬೊಬ್ಬೆ ಹೊಡೆದರು. ಈ ವಿಷಯವಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ಶುರುವಾಯಿತು. ಕಲ್ಲು ತೂರಾಟ ಸಹ ನಡೆಯಿತು. ವಿಷಯ ತಿಳಿದ 112 ಪೊಲೀಸರು ಸ್ಥಳಕ್ಕೆ ಹೋದರು. ಪೊಲೀಸ್ ಸಿಬ್ಬಂದಿ ಮೇಲೆ ಸಹ ಅಲ್ಲಿನವರು ಮುಗಿಬಿದ್ದರು.

Advertisement. Scroll to continue reading.

ಅಲ್ಲಿ ಗಲಾಟೆ ಮಾಡುತ್ತಿದ್ದವರು ಪೊಲೀಸ್ ಸಿಬ್ಬಂದಿ ರಾಜು ಶಂಕರ ಮಾಳಿ ಅವರ ಯುನಿಪಾರಂ ಹರಿದರು. ಕೆಟ್ಟದಾಗಿ ನಿಂದಿಸಿ ಪೊಲೀಸರನ್ನು ಬೈದರು. ಹೀಗಾಗಿ ರಾಜು ಮಾಳಿ ಅವರು ಈ ಬಗ್ಗೆಯೂ ದೂರು ನೀಡಿದ್ದು, ಪಿಐ ಶ್ರೀಧರ್ ಎಸ್ ಆರ್ ಪ್ರಕರಣ ದಾಖಲಿಸಿಕೊಂಡರು. ಜೊತೆಗೆ ಪೊಲೀಸರ ಮೇಲೆ ಕೈ ಮಾಡಿದ ರಾಮಚಂದ್ರ ಬೊಮ್ಮಯ್ಯ ಹೊಸ್ಕಟ್ಟಾ, ರಾಜು ವೆಂಕಟ್ರಮಣ ಹರಿಕಂತ್ರ,ಪರಮೇಶ್ವರ ಮಂಕಾಳಿ ಹರಿಕಂತ್ರ, ನಾಗಪ್ಪ ಮಂಕಾಳಿ ಹರಿಕಂತ್ರ, ಪ್ರಮೋದ ದಯಾನಂದ ಹರಿಕಂತ್ರ, ನಾಗರಾಜ ಮೋಹನ ಹೊಸ್ಕಟ್ಟಾ, ಜಗದೀಶ ವೆಂಕಟ್ರಮಣ ಹರಿಕಂತ್ರ, ಚಂದ್ರಕಾoತ ಶಿವು ಹೊಸ್ಕಟ್ಟಾ, ಶಿವಾನಂದ ಗಜಾನನ ಹೊಸ್ಕಟ್ಟಾ, ಸದಾನಂದ ಮಂಕಾಳಿ ಹೊಸ್ಕಟ್ಟಾ ಎಂಬಾತರನ್ನು ಬಂಧಿಸಿದರು. ಅವರೆಲ್ಲರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

Previous Post

ಗೋ ವಧಿಸುವ ವ್ಯಾಘ್ರರ ಅಟ್ಟಹಾಸ: ಪೊಲೀಸರ ಮೇಲೆ ಕಾರು ಹತ್ತಿಸುವ ಪ್ರಯತ್ನ!

Next Post

ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟ: ಡೊಂಕು ಬಾಲದ ನಾಯಕರಿಗೆ ಬುದ್ದಿ ಬರುವುದು ಯಾವಾಗ ಎಂದು ಪ್ರಶ್ನಿಸಿದ ಬಿ ಎಲ್ ಸಂತೋಷ್

Next Post
United fight against terrorism BL Santosh questions when will the crooked leaders come to their senses

ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟ: ಡೊಂಕು ಬಾಲದ ನಾಯಕರಿಗೆ ಬುದ್ದಿ ಬರುವುದು ಯಾವಾಗ ಎಂದು ಪ್ರಶ್ನಿಸಿದ ಬಿ ಎಲ್ ಸಂತೋಷ್

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ