ಮುoಡಗೋಡು ಪಟ್ಟಣ ಪಂಚಾಯತ ಬಳಿ ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಯಲ್ಲಾಪುರದ ನಾಸೀರ ಸಿದ್ಧಿ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಬಳಿಯಿದ್ದ ಬೈಕನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ಮುತ್ತಣ್ಣ ಭೋವಿ ಎಂಬಾತರು ಪ ಪಂ ಸಮೀಪದ ನೌಕರ ಭವನದ ಎದುರು ತಮ್ಮ ಬೈಕ್ ನಿಲ್ಲಿಸಿದ್ದರು. ಕೆಲಸಕ್ಕೆ ಹೋಗಿ ಮರಳಿದಾಗ ಅವರ ಬೈಕು ಅಲ್ಲಿರಲಿಲ್ಲ. ಹೀಗಾಗಿ ಪೊಲೀಸ್ ಠಾಣೆಗೆ ತೆರಳಿ ಬಜಾಜ್ ಪ್ಲಾಟಿನಾ ಬೈಕ್ ಕಾಣೆಯಾದ ಬಗ್ಗೆ ದೂರಿದ್ದರು.
ಹುಡುಕಾಟ ನಡೆಸಿದ ಮುಂಡಗೋಡು ಪೊಲೀಸರು ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ನಾಸಿರ ಅಹ್ಮದ ಸಿದ್ದಿಯನ್ನು ವಿಚಾರಿಸಿದರು. ಮುತ್ತಣ್ಣ ಭೋವಿ ಅವರ ಬೈಕ್ ನಾಸೀರ್ ಬಳಿಯಿರುವುದನ್ನು ಕಂಡುಹಿಡಿದರು. ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್ಐ ಪರಶುರಾಮ ಮಿರ್ಜಗಿ, ವಿನೋದ ಎಸ್.ಕೆ, ಪೊಲೀಸ್ ಸಿಬ್ಬಂದಿ ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಂಬಾಣಿ ಸೇರಿ ಆ ಬೈಕಿನ ಜೊತೆ ನಾಸೀರ್ ಸಿದ್ದಿಯನ್ನು ವಶಕ್ಕೆಪಡೆದರು.







