6
  • Latest
Hillside collapse Three lives saved by the grace of God!

ಗುಡ್ಡ ಕುಸಿತ: ದೇವರ ದಯೆಯಿಂದ ಬದುಕಿತು ಆ ಮೂರು ಜೀವ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗುಡ್ಡ ಕುಸಿತ: ದೇವರ ದಯೆಯಿಂದ ಬದುಕಿತು ಆ ಮೂರು ಜೀವ!

AchyutKumar by AchyutKumar
June 14, 2025
in ಸ್ಥಳೀಯ
Hillside collapse Three lives saved by the grace of God!
advt advt advt
ADVERTISEMENT

ಮಂಗಳೂರಿಗೆ ಹೋಗಿದ್ದ ಮೂವರು ಶಿರಸಿಗೆ ಮರಳುತ್ತಿರುವಾಗ ಗುಡ್ಡ ಕುಸಿತವಾಗಿದ್ದು, ದೇವರ ದಯೆಯಿಂದ ಅವರೆಲ್ಲರೂ ಪಾರಾಗಿದ್ದಾರೆ. ದೇವಿಮನೆಯ ಕ್ಷೇತ್ರಪಾಲನ ದರ್ಶನ ಮಾಡದಿದ್ದರೆ ಆ ಮೂವರು ಮಣ್ಣಿನ ಅಡಿ ಮಣ್ಣಾಗುತ್ತಿದ್ದರು!

ಶುಕ್ರವಾರ ರಾತ್ರಿ ದೇವಿಮನೆ ಘಟ್ಟದಲ್ಲಿ ನಡೆದ ಮಣ್ಣು ಕುಸಿತದಿಂದ ಶಿವಪ್ರಕಾಶ ಹೆಗಡೆ, ಸುಮಾ ಹೆಗಡೆ ಹಾಗೂ ಅರುಣ ಕಾಶಿಭಟ್ಟ ಕ್ಷಣಮಾತ್ರದಲ್ಲಿ ಬಚಾವಾಗಿದ್ದಾರೆ. ಶಿವಪ್ರಕಾಶ ಹೆಗಡೆ ಅವರು ಶಿರಸಿ ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ. ಸುಮಾ ಹೆಗಡೆ ಅವರು ಕೆನರಾ ಬ್ಯಾಂಕ್ ಉದ್ಯೋಗಿ. ಅರುಣ ಕಾಶಿಭಟ್ಟ ಅವರು ಆಹಾರ ಸುರಕ್ಷತಾ ಇಲಾಖೆಯ ನಿವೃತ್ತ ಅಧಿಕಾರಿ. ಈ ಮೂವರು ಶುಕ್ರವಾರ ಮಂಗಳೂರಿನಲ್ಲಿ ನಡೆದ ಎಸ್ ಎಲ್ ಭಟ್ಟ ಅವರ ವೈಕುಂಠ ಸಮಾರಾಧನೆಗೆ ಹೋಗಿ, ರಾತ್ರಿ ವೇಳೆ ಶಿರಸಿಗೆ ಮರಳುತ್ತಿದ್ದರು. ದಾರಿ ಮದ್ಯೆ ದೇವಿಮನೆ ಘಟ್ಟದಲ್ಲಿನ ಕ್ಷೇತ್ರಪಾಲನಿಗೆ ನಮಿಸಲು ಕಾರು ನಿಲ್ಲಿಸಿದ್ದು, ಅದಾದ ಕೆಲ ಹೊತ್ತಿನಲ್ಲಿ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಯಿತು.

ADVERTISEMENT
ADVERTISEMENT

ದೇವಿಮನೆಯ ಕ್ಷೇತ್ರಪಾಲನ ಬಳಿ ಕಾರು ನಿಧಾನ ಮಾಡದೇ ಇದ್ದಿದ್ದರೆ ಆ ಕಾರು ಗುಡ್ಡ ಕುಸಿತ ಪ್ರದೇಶದಲ್ಲಿ ಸಿಲುಕಿ, ಕಾರಿನ ಮೇಲೆ ಮಣ್ಣು ಬೀಳುವ ಅಪಾಯವಿತ್ತು. ಆ ಮೂವರು ದೇವರಿಗೆ ಕೈ ಮುಗಿದು ಮುಂದೆ ಸಾಗಿದ್ದು, 200ಮೀಟರ್ ಚಲಿಸುವಷ್ಟರಲ್ಲಿಯೇ ಗುಡ್ಡ ಕುಸಿಯಿತು. ಬರೇ 4-5 ಸೆಕೆಂಡ್ ಅಂತರದಲ್ಲಿ ಆ ಕಾರಿನ ಜೊತೆ ಮೂವರು ಪ್ರಯಾಣಿಕರು ಬಚಾವಾದರು. ಆ ಕಾರಿನಿಂದ ಒಂದುವರೆ ಅಡಿ ದೂರದಲ್ಲಿ ಗುಡ್ಡ ಕುಸಿದಿದ್ದು, ಕಾರನ್ನು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಮೂವರು ಪ್ರಾಣ ಉಳಿಸಿಕೊಂಡರು. ಸಾವೇ ಕಣ್ಣಿನ ಮುಂದೆ ಬಂದು ಹೋದ ಅನುಭವಪಡೆದ ಆ ಮೂವರು ದೇವರ ದಯೆಯಿಂದ ಬದುಕಿದರು. ಕೂಡಲೇ ಕ್ಷೇತ್ರಪಾಲನಿಗೆ ಇನ್ನೊಂದು ನಮಸ್ಕಾರ ಹಾಕಿದರು.

Advertisement. Scroll to continue reading.
Advertisement. Scroll to continue reading.

`ಶುಕ್ರವಾರ ರಾತ್ರಿ 10.30ರ ಸುಮಾರಿಗೆ ದೇವಿಮನೆ ಘಟ್ಟದಲ್ಲಿ ಕಾರು ಓಡಿಸುತ್ತಿದ್ದೆ. ಕ್ಷೇತ್ರಪಾಲನಿಗೆ ಕೈ ಮುಗಿದು ಮುಂದೆ ಚಲಿಸುವಾಗ ತಿರುವಿನಲ್ಲಿ ಮೊದಲು ಮರ ಬೀಳುವುದು ಕಾಣಿಸಿತು. ಘಟ್ಟ ಪ್ರದೇಶವಾಗಿದ್ದರಿಂದ ಕಾರಿನ ಬ್ರೆಕ್ ಅದುಮಿದೆ. ಕ್ಷಣಮಾತ್ರದಲ್ಲಿ ಗುಡ್ಡ ಕುಸಿತವಾಗಿದ್ದು, ಕಾರನ್ನು ಹಿಮ್ಮುಖವಾಗಿ ಚಲಿಸಿದ ಕಾರಣ ಮೂವರು ಅನಾಹುತದಿಂದ ತಪ್ಪಿಸಿಕೊಂಡೆವು’ ಎಂದು ಶಿವಪ್ರಕಾಶ ಹೆಗಡೆ ಅನುಭವ ಹಂಚಿಕೊoಡರು. `ಕ್ಷೇತ್ರಪಾಲನಿಗೆ ಕೈ ಮುಗಿಯಲು ಕಾರು ನಿಧಾನ ಮಾಡದೇ ಇದ್ದಿದ್ದರೆ ದುರಂತವೇ ನಡೆಯುತ್ತಿತ್ತು’ ಎಂದು ಆತಂಕದಿoದಲೇ ಮಾತನಾಡಿದರು.

ರಾತ್ರಿ ಗುಡ್ಡ ಕುಸಿತದ ಆತಂಕದಲ್ಲಿಯೂ ಮತ್ತೊಮ್ಮೆ ಸಮಯ ಪ್ರಜ್ಞೆ ಮೆರೆದ ಶಿವಪ್ರಕಾಶ ಹೆಗಡೆ ಅವರು ಉಪವಿಭಾಗಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ಗುಡ್ಡ ತೆರವು ಕಾರ್ಯಾಚರಣೆಗೆ ನೆರವಾದರು.

ShareSendTweetShare
ADVERTISEMENT
Previous Post

ದೇವಿಮನೆ: ರಸ್ತೆ ಮೇಲೆ ಮತ್ತೊಮ್ಮೆ ಧರೆ ಕುಸಿತ

Next Post

ಆ ಕಳ್ಳರು ಈ ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ!

Next Post
There's no way those thieves can escape the sight of this camera!

ಆ ಕಳ್ಳರು ಈ ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ!

A woodcutter who left the wood and ran into the forest!

ಕಟ್ಟಿಗೆ ಬಿಟ್ಟು ಕಾಡಿಗೆ ಓಡಿದ ಮರಕಳ್ಳ!

ಇಡಗುಂಜಿ ಗಣಪನ ಕರೆಯೋಲೆ: ಹೂ-ಹಣ್ಣು ವ್ಯಾಪಾರಕ್ಕೆ ಇಲ್ಲಿದೆ ಒಂದು ಅವಕಾಶ!

ಇಡಗುಂಜಿ ಗಣಪನ ಕರೆಯೋಲೆ: ಹೂ-ಹಣ್ಣು ವ್ಯಾಪಾರಕ್ಕೆ ಇಲ್ಲಿದೆ ಒಂದು ಅವಕಾಶ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.