6
  • Latest
Devimane Ghat Hillside landslide causes death of trees and endangers traffic

ದೇವಿಮನೆ ಘಟ್ಟ: ಗುಡ್ಡ ಕುಸಿತದಿಂದ ಗಿಡ-ಮರಗಳ ಮರಣ-ಸಂಚಾರಕ್ಕೂ ಸಂಚಕಾರ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದೇವಿಮನೆ ಘಟ್ಟ: ಗುಡ್ಡ ಕುಸಿತದಿಂದ ಗಿಡ-ಮರಗಳ ಮರಣ-ಸಂಚಾರಕ್ಕೂ ಸಂಚಕಾರ

ಶಿರಸಿ-ಕುಮಟಾ ಓಡಾಡುವ ಪ್ರಯಾಣಿಕರು ಪ್ರಯಾಣ ಮುಂದುಡುವುದು ಉತ್ತಮ. ತೀರಾ ಅನಿವಾರ್ಯವಾದರೆ ಬೇರೆ ಮಾರ್ಗ ಬಳಸುವುದು ಅನಿವಾರ್ಯ

AchyutKumar by AchyutKumar
June 15, 2025
in ಸ್ಥಳೀಯ
Devimane Ghat Hillside landslide causes death of trees and endangers traffic
advt advt advt
ADVERTISEMENT

ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟದಲ್ಲಿ ಭಾನುವಾರ ನಸುಕಿನಲ್ಲಿ ಮತ್ತೆ ಗುಡ್ಡ ಕುಸಿದಿದೆ. ಗುಡ್ಡದ ಮೇಲಿನ ಗಿಡ-ಮರಗಳು ಹೆದ್ದಾರಿಗೆ ಬಂದು ಬಿದ್ದಿದೆ. ಹೀಗಾಗಿ ಲಘು ವಾಹನ ಸಂಚಾರಕ್ಕೂ ಇಲ್ಲಿ ಸಂಚಕಾರ ಎದುರಾಗಿದೆ.

ಕಳೆದ ಮೂರು ದಿನದ ಅವಧಿಯಲ್ಲಿ ಮೂರನೇ ಬಾರಿ ಇಲ್ಲಿ ಗುಡ್ಡ ಕುಸಿತ ನಡೆದಿದೆ. ಅದಕ್ಕಿಂತ ಮೊದಲು ಸಹ ಗುಡ್ಡದ ಮಣ್ಣು ಹೆದ್ದಾರಿಗೆ ಅಪ್ಪಳಿಸಿದ್ದು, ತೆರವು ಕಾರ್ಯಾಚರಣೆ ನಡೆದಿತ್ತು. ಕುಮಟಾ-ಶಿರಸಿ ಮಾರ್ಗದ ಅಭಿವೃದ್ಧಿ ಕೆಲಸ ನಡೆಯುತ್ತಿರುವುದರಿಂದ ಹಿಂದೆಯೇ ಈ ಮಾರ್ಗದಲ್ಲಿ ಭಾರೀ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಹೀಗಾಗಿ ಲಘು ವಾಹನಗಳ ಓಡಾಟ ಮಾತ್ರ ನಡೆಯುತ್ತಿದ್ದು, ರಾತ್ರಿ ವೇಳೆ ಗುಡ್ಡ ಕುಸಿದಿದ್ದರಿಂದ ವಾಹನ ಓಡಾಟ ವಿರಳವಾಗಿತ್ತು. ಹೀಗಾಗಿ ಜೀವ ಹಾನಿ ಆಗಿಲ್ಲ.

Advertisement. Scroll to continue reading.
ADVERTISEMENT
ADVERTISEMENT

ಭಾರೀ ವಾಹನ ಓಡಾಟಕ್ಕೆ ಅವಕಾಶ ನೀಡಿದಲ್ಲಿ ಈ ರಸ್ತೆಯಲ್ಲಿ ಹಗಲು-ರಾತ್ರಿ ವಾಹನ ಸಂಚಾರ ನಡೆಯಲಿದ್ದು, ಆ ವೇಳೆ ಗುಡ್ಡ ಕುಸಿದರೆ ಅಪಾಯ ಖಚಿತ. ಇದರೊಂದಿಗೆ ರಸ್ತೆ ಅಭಿವೃದ್ಧಿಗೆ ಸಹ ಭಾರೀ ವಾಹನ ಓಡಾಟ ತೊಂದರೆ ಮಾಡಲಿದೆ. ರಸ್ತೆ ಅಭಿವೃದ್ಧಿ ಕೆಲಸದ ವೇಳೆ ಗುಡ್ಡವನ್ನು ಅವೈಜ್ಞಾನಿಕ ರೀತಿ ಕಡಿತ ಮಾಡಿರುವುದು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣ. ಕಳೆದ ವರ್ಷವೂ ಈ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಪ್ರಯಾಣಿಕರು ಸಮಸ್ಯೆ ಅನುಭವಿಸಿದ್ದರು.

Advertisement. Scroll to continue reading.

ಭಾನುವಾರ ಬೆಳಗ್ಗೆ ಗುಡ್ಡ ಕುಸಿತವಾಗಿದ್ದರಿಂದ ಕುಮಟಾ-ಶಿರಸಿ ಮಾರ್ಗ ಸಂಪೂರ್ಣವಾಗಿ ಬಂದ್ ಆಗಿದೆ. ಮಳೆಯೂ ಸುರಿಯುತ್ತಿರುವುದರಿಂದ ಮಣ್ಣು ತೆರವು ಕಾರ್ಯಾಚರಣೆ ನಿಧಾನವಾಗುವ ಸಾಧ್ಯತೆಯಿದೆ. ರಸ್ತೆ ಮೇಲೆ ಮಣ್ಣು ಹಾಗೂ ಮರ ಬಿದ್ದಿರುವುದರಿಂದ ಅಲ್ಲಿ ಹೋಗುವುದು ಕಷ್ಟ. ಜೊತೆಗೆ ಗುಡ್ಡದ ಮಣ್ಣು ಸಡಿಲವಾಗಿರುವ ಕಾರಣ ಹತ್ತಿರ ಹೋಗುವುದು ಅಪಾಯಕಾರಿಯೂ ಹೌದು. ಹೀಗಾಗಿ ಶಿರಸಿ-ಕುಮಟಾ ಓಡಾಡುವ ಪ್ರಯಾಣಿಕರು ಪ್ರಯಾಣ ಮುಂದುಡುವುದು ಉತ್ತಮ. ತೀರಾ ಅನಿವಾರ್ಯವಾದರೆ ಬೇರೆ ಮಾರ್ಗ ಬಳಸುವುದು ಅನಿವಾರ್ಯ

ShareSendTweetShare
ADVERTISEMENT
Previous Post

ಪೊಲೀಸರ ಮೇಲೆ ಚಾಕುವಿನ ದಾಳಿ: ದಾಂಡೇಲಿ ಡಿಶುಂ ಡಿಶುಂ ಬಗ್ಗೆ SP ತುರ್ತು ಸುದ್ದಿಗೋಷ್ಠಿ

Next Post

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

Next Post
Human death due to rain Tragic end to the life of a child who was swept away by a canal

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

Doctor couple transfer issue Special invitation from BJP to Congress-leaning MLAs!

ವೈದ್ಯ ದಂಪತಿ ವರ್ಗಾವಣೆ ವಿಚಾರ: ಕಾಂಗ್ರೆಸ್ ಒಲವಿನ ಶಾಸಕರಿಗೆ ಬಿಜೆಪಿಯಿಂದ ವಿಶೇಷ ಆಹ್ವಾನ!

Encroachment resolution 5 lakh trees ready for planting

ಅತಿಕ್ರಮಣದಾರರ ಸಂಕಲ್ಪ: ನಾಟಿಗೆ ಸಿದ್ದವಾದ 5 ಲಕ್ಷ ಗಿಡ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.