6
  • Latest
Human death due to rain Tragic end to the life of a child who was swept away by a canal

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

AchyutKumar by AchyutKumar
in ವಿಡಿಯೋ, ಸ್ಥಳೀಯ
Human death due to rain Tragic end to the life of a child who was swept away by a canal

ಕರಾವಳಿಯಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದ್ದು, ಮಳೆ ಕಾರಣದಿಂದ ಭಟ್ಕಳದಲ್ಲಿ ಎರಡು ಸಾವು ಸಂಭವಿಸಿದೆ.

ADVERTISEMENT

ಶನಿವಾರ ಮಧ್ಯಾಹ್ನ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಮನೆ ಮುಂದಿನ ಹಳ್ಳದಲ್ಲಿ ಬಿದ್ದು ಕೊಚ್ಚಿ ಹೋಗಿದೆ. ಆ ವೇಳೆ ಮಳೆ ಇಲ್ಲದಿದ್ದರೂ ಹಳ್ಳ ರಭಸವಾಗಿ ಹರಿಯುತ್ತಿದ್ದು, ಮಗು ಬಿದ್ದಿದ್ದನ್ನು ನೋಡಿದ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಹಳ್ಳದ ನೀರಿನಲ್ಲಿ 2 ವರ್ಷದ ಮಗು ಬಹುದೂರ ಸಾಗಿದ್ದು, ಅಷ್ಟರೊಳಗೆ ಕಿವಿ-ಮೂಗು-ಬಾಯಿಯೊಳಗೆ ನೀರು ತುಂಬಿತ್ತು.

ಅದಾಗಿಯೂ ಅಲ್ಲಿಯ ಜನ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ರಕ್ಷಿಸಿ, ಕುಟುಂಬದವರಿಗೆ ಹಸ್ತಾಂತರಿಸಿದರು. ಮಗುವನ್ನು ಕುಟುಂಬದವರು ಆಸ್ಪತ್ರೆಗೆ ಸಾಗಿಸಿದರಾದರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಗೆ ಮಗು ಬರುವ ಮುನ್ನವೇ ಕೊನೆಯುಸಿರೆಳೆದಿದ್ದ ಬಗ್ಗೆ ವೈದ್ಯಾಧಿಕಾರಿಗಳು ಘೋಷಿಸಿದರು. ಭಟ್ಕಳ ನಗರದ ಆಝಾದ ನಗರದಲ್ಲಿ ಈ ದುರ್ಘಟನೆ ನಡೆದಿದೆ. ತೌಸೀಫ್ ಮತ್ತು ಅರ್ಜು ದಂಪತಿಯ ಮಗು ಸಾವನಪ್ಪಿದ್ದರಿಂದ ಊರಿನ ತುಂಬ ಶೋಕದ ವಾತಾವರಣ ಕಾಣಿಸಿತು.

Advertisement. Scroll to continue reading.

ಇನ್ನೂ ಭಟ್ಕಳ ಗುಳ್ಮೆ ಬೆಳಲಖಂಡದ ಮಾದೇವ ದೇವಾಡಿಗ (50) ಎಂಬಾತರು ಮಳೆಯಲ್ಲಿ ನೆನೆದು ಸಾವನಪ್ಪಿದ್ದಾರೆ. ಗುಳ್ಮೆ ಬೆಳಲಖಂಡದ ಲಕ್ಕಿ ಪಾಕ್ಟರ್ ಹಿಂದಿನ ದಾರಿಯಲ್ಲಿ ಅವರು ನಡೆದು ಬರುತ್ತಿರುವಾಗ ಧಾರಾಕಾರ ಮಳೆ ಸುರಿದಿದೆ. ಮಳೆಯಲ್ಲಿ ಪೂರ್ತಿಯಾಗಿ ನೆನೆದ ಅವರು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅದೇ ನೀರಿನಲ್ಲಿ ಮುಳುಗಿ ಅವರು ಕೊನೆಯುಸಿರೆಳೆದಿದ್ದಾರೆ. ಮಾದೇವ ದೇವಾಡಿಗ ಅವರ ಪತ್ನಿ ಲಕ್ಷಿ ದೇವಾಡಿಗ ಅವರು ಪತಿಯ ನೆನೆದು ಕಣ್ಣೀರಾದರು. ಅದಾದ ನಂತರ ಭಟ್ಕಳ ಗ್ರಾಮೀಣ ಠಾಣೆಗೆ ಆಗಮಿಸಿ ಮಾದೇವ ದೇವಾಡಿಗ ಅವರು ನೀರಿನಲ್ಲಿ ಕೊಚ್ಚಿ ಹೋಗಿ ಸಾವನಪ್ಪಿರುವ ಬಗ್ಗೆ ಪ್ರಕರಣ ದಾಖಲಿಸಿದರು.

Advertisement. Scroll to continue reading.

`ವ್ಯಾಪಕ ಮಳೆಯಾಗುತ್ತಿರುವ ಕಾರಣ ಸುರಕ್ಷತೆ ಬಗ್ಗೆ ಕಾಳಜಿವಹಿಸಿ. ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಗುಡ್ಡ ಪ್ರದೇಶಗಳ ಅಡಿ ಭಾಗ ನಿಲ್ಲಬೇಡಿ. ಅಪಾಯಕಾರಿ ಸ್ಥಳದಲ್ಲಿ ವಾಹನ ನಿಲುಗಡೆ, ಫೋಟೋ ಕ್ಲಿಕ್ಕಿಸುವಿಕೆ ಮಾಡಬೇಡಿ’ ಎಂದು ಮನವಿ ಮಾಡಿದೆ. ಇದರೊಂದಿಗೆ `ಕಡಲತೀರಗಳು ಅಪಾಯದ ಸ್ಥಿತಿಯಲ್ಲಿದ್ದು, ಸಮೀಪ ಹೋಗಬೇಡಿ’ ಎಂದು ಜಿಲ್ಲಾಡಳಿತ ಸೂಚಿಸಿದೆ.

ಅಂಗಳದಲ್ಲಿ ಆಡುತ್ತಿದ್ದ ಮಗು ನೀರಿನಲ್ಲಿ ಕೊಚ್ಚಿ ಹೋದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆ ವಿಡಿಯೋ ಇಲ್ಲಿ ನೋಡಿ..

Previous Post

ದೇವಿಮನೆ ಘಟ್ಟ: ಗುಡ್ಡ ಕುಸಿತದಿಂದ ಗಿಡ-ಮರಗಳ ಮರಣ-ಸಂಚಾರಕ್ಕೂ ಸಂಚಕಾರ

Next Post

ವೈದ್ಯ ದಂಪತಿ ವರ್ಗಾವಣೆ ವಿಚಾರ: ಕಾಂಗ್ರೆಸ್ ಒಲವಿನ ಶಾಸಕರಿಗೆ ಬಿಜೆಪಿಯಿಂದ ವಿಶೇಷ ಆಹ್ವಾನ!

Next Post
Doctor couple transfer issue Special invitation from BJP to Congress-leaning MLAs!

ವೈದ್ಯ ದಂಪತಿ ವರ್ಗಾವಣೆ ವಿಚಾರ: ಕಾಂಗ್ರೆಸ್ ಒಲವಿನ ಶಾಸಕರಿಗೆ ಬಿಜೆಪಿಯಿಂದ ವಿಶೇಷ ಆಹ್ವಾನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ