6
  • Latest
Doctor couple transfer issue Special invitation from BJP to Congress-leaning MLAs!

ವೈದ್ಯ ದಂಪತಿ ವರ್ಗಾವಣೆ ವಿಚಾರ: ಕಾಂಗ್ರೆಸ್ ಒಲವಿನ ಶಾಸಕರಿಗೆ ಬಿಜೆಪಿಯಿಂದ ವಿಶೇಷ ಆಹ್ವಾನ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ವೈದ್ಯ ದಂಪತಿ ವರ್ಗಾವಣೆ ವಿಚಾರ: ಕಾಂಗ್ರೆಸ್ ಒಲವಿನ ಶಾಸಕರಿಗೆ ಬಿಜೆಪಿಯಿಂದ ವಿಶೇಷ ಆಹ್ವಾನ!

AchyutKumar by AchyutKumar
in ರಾಜಕೀಯ
Doctor couple transfer issue Special invitation from BJP to Congress-leaning MLAs!

ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಡಾ ದೀಪಕ ಭಟ್ಟ ಹಾಗೂ ಡಾ ಸೌಮ್ಯ ಕೆವಿ ದಂಪತಿ ವರ್ಗಾವಣೆ ವಿಚಾರವಾಗಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. `ಶಾಸಕ ಶಿವರಾಮ ಹೆಬ್ಬಾರ್ ಸಹ ನಮ್ಮೊಂದಿಗೆ ಬೀದಿಗೆ ಬಂದು ಪ್ರತಿಭಟಿಸಬೇಕು’ ಎಂದು ಬಿಜೆಪಿ ಮುಖಂಡರು ಮಾಧ್ಯಮದ ಮೂಲಕ ಆಮಂತ್ರಣ ನೀಡಿದ್ದಾರೆ.

ADVERTISEMENT

`ಜೂ 18ರಂದು ಬೆಳಗ್ಗೆ 10 ಗಂಟೆಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಆವರಣದಿಂದ ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಿ ಪ್ರತಿಭಟನೆ ಶುರು ಮಾಡಲಾಗುತ್ತದೆ. ಪ್ರತಿಭಟನಾ ಮೆರವಣಿಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಲಿದ್ದು, ವೈದ್ಯ ದಂಪತಿ ವರ್ಗಾವಣೆ ತಡೆಯಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಲಾಗುತ್ತದೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಯಲ್ಲಾಪುರ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಜಂಟಿಯಾಗಿ ತಿಳಿಸಿದರು. ಜೊತೆಗಿದ್ದ ಉಮೇಶ ಭಾಗ್ವತ ಹಾಗೂ ರಾಘು ಭಟ್ಟ ಇದಕ್ಕೆ ಧ್ವನಿಗೂಡಿಸಿದರು.

`ಯಲ್ಲಾಪುರದಲ್ಲಿ ಉತ್ತಮ ಆಸ್ಪತ್ರೆಯಿದೆ. ಡಾ ದೀಪಕ ಭಟ್ಟ ದಂಪತಿಯಿAದ ಈ ಆಸ್ಪತ್ರೆ ಜನಪ್ರಿಯಗೊಂಡಿದ್ದು, ಆ ವೈದ್ಯರನ್ನು ಇಲ್ಲಿ ಉಳಿಸಿಕೊಳ್ಳಬೇಕು. ಶಾಸಕರು ಈ ವಿಷಯದಲ್ಲಿ ಮೌನವಾಗಿರುವುದು ಬೇರೆ ಸಂದೇಶ ರವಾನೆಯಾಗುತ್ತಿದೆ. ವರ್ಗಾವಣೆ ಹಿಂದೆ ಅನೇಕ ಊಹಾಪೋಹಗಳು ಕೇಳಿ ಬಂದಿದೆ’ ಎಂದು ಪ್ರಸಾದ ಹೆಗಡೆ ಹೇಳಿದರು. `ಬೇರೆ ಬೇರೆ ಕಡೆ ವರ್ಗಾವಣೆ ಪಟ್ಟಿ ಬದಲಾಗಿದೆ. ಅದರ ಪ್ರಕಾರ ಯಲ್ಲಾಪುರದಲ್ಲಿಯೂ ವೈದ್ಯರಿಬ್ಬರ ವರ್ಗಾವಣೆ ವಿಚಾರ ಕೈ ಬಿಡಬೇಕು. ಇಲ್ಲವಾದರೆ ಶಾಸಕರ ಈ ವರ್ಗಾವಣೆಗೆ ಶಾಸಕರ ನಿರ್ಲಕ್ಷ ಕಾರಣ ಎಂಬುದು ಜನಾಭಿಪ್ರಾಯ’ ಎಂದರು.

Advertisement. Scroll to continue reading.

`ಬಿಜೆಪಿ ನಡೆಸುವ ಈ ಪ್ರತಿಭಟನೆಗೆ ತಾಲೂಕಿನ ಮೂಲೆ ಮೂಲೆಯಿಂದ ಜನ ಬರಲಿದ್ದಾರೆ. ಇದು ಮೊದಲ ಹಂತದ ಹೋರಾಟ ಮಾತ್ರವಾಗಿದ್ದು, ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಸಹ ಇದಕ್ಕೆ ಬೆಂಬಲ ನೀಡಬೇಕು. ಇದ್ದ ವ್ಯವಸ್ಥೆ ಹಾಳು ಮಾಡದೇ ಹಾಗೇ ಉಳಿಸಿಕೊಳ್ಳಬೇಕು’ ಎಂದು ಹರಿಪ್ರಕಾಶ ಕೋಣೆಮನೆ ಪುನರುಚ್ಚರಿಸಿದರು. `ಎಷ್ಟೇ ಬೆಲೆ ತೆತ್ತಾದರೂ ಶಾಸಕರು ಆ ಇಬ್ಬರು ವೈದ್ಯರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು. ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರಿ ಒತ್ತಡ ತರಬೇಕು’ ಎಂದರು. `ಸರ್ಕಾರದಿಂದ ಭರವಸೆ ಸಿಗುವುವರೆಗೂ ಧರಣಿ ಮುಂದುವರೆಯುತ್ತದೆ. ವರ್ಗಾವಣೆ ವಿಷಯದಲ್ಲಿ ಯಾವುದೇ ಭರವಸೆ ಸಿಗದೇ ಇದ್ದರೆ ಪ್ರತಿಭಟನೆ ನಿರಂತರವಾಗಿರುತ್ತದೆ’ ಎಂದು ಹರಿಪ್ರಕಾಶ ಕೋಣೆಮನೆ ಘೋಷಿಸಿದರು.

Advertisement. Scroll to continue reading.

`ದೀಪಕ ಭಟ್ಟ ಅವರು ಹೆರಿಗೆ ತಜ್ಞರಾಗಿ ಆಗಮಿಸಿದ ದಿನದಿಂದ ಆಸ್ಪತ್ರೆ ಚಿತ್ರಣವೇ ಬದಲಾಗಿದೆ. ಖಾಸಗಿ ಆಸ್ಪತ್ರೆಗಿಂತ ಉತ್ತಮ ಸೇವೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುತ್ತಿದೆ’ ಎಂದು ಜಿ ಪಂ ಮಾಜಿ ಸದಸ್ಯ ರಾಘು ಭಟ್ಟ ನೆನಪಿಸಿಕೊಂಡರು. `ಗ್ರಾಮೀಣ ಭಾಗದ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಹೀಗಾಗಿ ಜನ ತಾಲೂಕು ಆಸ್ಪತ್ರೆಗೆ ಆಗಮಿಸುತ್ತಿದ್ದು, ಇಲ್ಲಿನ ಉತ್ತಮ ವೈದ್ಯರ ವರ್ಗಾವಣೆ ನಡೆದರೆ ಸಮಸ್ಯೆ ಖಚಿತ’ ಎಂದು ಉಮೇಶ ಭಾಗ್ವತ್ ಹೇಳಿದರು. `ಶಿವರಾಮ ಹೆಬ್ಬಾರ್ ಅವರು ಪಕ್ಷೇತರ ಶಾಸಕರಾಗಿರುವುದರಿಂದ ಬಿಜೆಪಿ ಪ್ರತಿಭಟನೆಗೆ ಆಗಮಿಸಿದರೆ ಏನೂ ಸಮಸ್ಯೆ ಇಲ್ಲ’ ಎಂದು ಉಮೇಶ ಭಾಗ್ವತ್ ಅಭಿಪ್ರಾಯಪಟ್ಟರು. ಬಿಜೆಪಿ ತಾಲೂಕು ಮಾಧ್ಯಮ ಸಂಚಾಲಕ ಕೆ ಟಿ ಹೆಗಡೆ, ರೈತ ಮೋರ್ಚಾ ಜಿಲ್ಲಾ ಮುಖಂಡ ಶಿವಲಿಂಗಯ್ಯ ಅಲ್ಲಯ್ಯನವರಮಠ ಇದ್ದರು.

Previous Post

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

Next Post

ಅತಿಕ್ರಮಣದಾರರ ಸಂಕಲ್ಪ: ನಾಟಿಗೆ ಸಿದ್ದವಾದ 5 ಲಕ್ಷ ಗಿಡ

Next Post
Encroachment resolution 5 lakh trees ready for planting

ಅತಿಕ್ರಮಣದಾರರ ಸಂಕಲ್ಪ: ನಾಟಿಗೆ ಸಿದ್ದವಾದ 5 ಲಕ್ಷ ಗಿಡ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ