6
  • Latest
Kumta-Yellapur Government bus.. free ticket.. MLAs benefited from the journey!

ಕುಮಟಾ-ಯಲ್ಲಾಪುರ: ಸರ್ಕಾರಿ ಬಸ್ಸು.. ಉಚಿತ ಟಿಕೇಟು.. ಪ್ರಯಾಣದ ಪ್ರಯೋಜನಪಡೆದ ಶಾಸಕರು!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಕುಮಟಾ-ಯಲ್ಲಾಪುರ: ಸರ್ಕಾರಿ ಬಸ್ಸು.. ಉಚಿತ ಟಿಕೇಟು.. ಪ್ರಯಾಣದ ಪ್ರಯೋಜನಪಡೆದ ಶಾಸಕರು!

AchyutKumar by AchyutKumar
June 16, 2025
in ರಾಜಕೀಯ
Kumta-Yellapur Government bus.. free ticket.. MLAs benefited from the journey!

ಅಶೋಕೆಯಿಂದ ಗೋಕರ್ಣಕ್ಕೆ ಸರ್ಕಾರಿ ಬಸ್ಸಿನಲ್ಲಿ ಬಂದ ಕುಮಟಾ ಶಾಸಕ ದಿನಕರ ಶೆಟ್ಟಿ (ಎಡಚಿತ್ರ). ಕರಡೊಳ್ಳಿಯಿಂದ ಯಲ್ಲಾಪುರಕ್ಕೆ ಸರ್ಕಾರಿ ಬಸ್ಸಿನಲ್ಲಿ ಬಂದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ (ಬಲಚಿತ್ರ)

advt advt advt
ADVERTISEMENT

ರಾಜ್ಯದ ಎಲ್ಲಾ ಶಾಸಕರಿಗೂ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದೆ. ಶಾಸಕರಿಗಾಗಿಯೇ ಪ್ರತ್ಯೇಕ ಆಸನವನ್ನು ಮೀಸಲಿರಿಸಿದೆ. ಆದರೆ, ಐಷಾರಾಮಿ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುವ ಈ ಜನಪ್ರತಿನಿಧಿಗಳು ಸರ್ಕಾರಿ ಬಸ್ಸುಗಳಲ್ಲಿ ಸಂಚರಿಸುವುದು ತೀರಾ ಅಪರೂಪ. ಈ ನಡುವೆ ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸರ್ಕಾರಿ ಬಸ್ಸುಗಳಲ್ಲಿ ಸಂಚರಿಸಿ ಸರ್ಕಾರ ನೀಡಿದ ಸೌಲಭ್ಯದ ಪ್ರಯೋಜನಪಡೆದಿದ್ದಾರೆ.

ಕುಮಟಾ ತಾಲೂಕಿನ ಗೋಕರ್ಣ ಬಳಿಯ ಅಶೋಕೆ ಗ್ರಾಮಕ್ಕೆ ಈವರೆಗೂ ಬಸ್ ಸೌಕರ್ಯ ಇಲ್ಲ. ವಾರದ ಹಿಂದೆ ಈ ಬಗ್ಗೆ ಅಶೋಕೆಯ ಜನ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದು, ಮನವಿ ಆಳಿಸಿದ ದಿನಕರ ಶೆಟ್ಟಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜೊತೆ ಬಸ್ಸು ಏರಿದರು. ಗೋಕರ್ಣದಿಂದ ಅಶೋಕೆಯವರೆಗೂ ಬಸ್ಸಿನಲ್ಲಿ ಚಲಿಸಿ, ಅದೇ ಬಸ್ಸಿನಲ್ಲಿ ಮರಳಿದರು. ಈ ವೇಳೆ ಜನರ ಸಮಸ್ಯೆಗಳನ್ನು ಆಲಿಸಿದ ದಿನಕರ ಶೆಟ್ಟಿ `ಶೀಘ್ರದಲ್ಲಿಯೇ ಈ ಮಾರ್ಗದಲ್ಲಿ ಬಸ್ ಬಿಡುವ ವ್ಯವಸ್ಥೆ ಮಾಡುವೆ’ ಎಂಬ ಭರವಸೆ ನೀಡಿದರು. ನಿಗದಮ ಅಧಿಕಾರಿಗಳ ಜೊತೆಯೂ ಬಸ್ಸಿನ ವೇಳಾಪಟ್ಟಿ ಹಾಗೂ ಬಸ್ಸು ಬಿಡುವ ತಯಾರಿ ಬಗ್ಗೆ ಚರ್ಚಿಸಿದರು. ದಿನಕರ ಶೆಟ್ಟಿ ಅವರು ಬೆಂಗಳೂರಿಗೆ ಹೋಗುವಾಗ ಸಹ ಹೆಚ್ಚಿನದಾಗಿ ಕಾರವಾರ-ಬೆಂಗಳೂರು ಮಾರ್ಗದ ಬಸ್ಸು ಬಳಸುತ್ತಾರೆ ಎಂಬುದು ವಿಶೇಷ.

Advertisement. Scroll to continue reading.
ADVERTISEMENT
ADVERTISEMENT

ಇನ್ನೂ ಯಲ್ಲಾಪುರದ ಕರಡೊಳ್ಳಿ ಭಾಗಕ್ಕೆ ಸಹ ಬಸ್ ಸಂಪರ್ಕ ಸರಿಯಾಗಿರಲಿಲ್ಲ. ಕರಡೊಳ್ಳಿಯಲ್ಲಿ ಕರಡಿ ಸಂಚಾರದ ಆತಂಕವಿರುವ ಕಾರಣ ಮಕ್ಕಳು ಮನೆಯಿಂದ ಹೊರಬರಲು ಹೆದರುತ್ತಿದ್ದರು. ಶಾಲೆಗೆ ಹೋಗಲು ಸಹ ಬಸ್ ವ್ಯವಸ್ಥೆ ಇಲ್ಲದ ಬಗ್ಗೆ ಅಲ್ಲಿನವರು ಶಾಸಕ ಶಿವರಾಮ ಹೆಬ್ಬಾರ್ ಗಮನಕ್ಕೆ ತಂದಿದ್ದರು. ಆ ಭಾಗದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿರುವುದನ್ನು ಅರಿತ ಶಿವರಾಮ ಹೆಬ್ಬಾರ್ ಸಾರಿಗೆ ನಿಗಮದ ಅಧಿಕಾರಿಗಳ ಜೊತೆ ಮಾತನಾಡಿದರು. ಬೇಡಿಕೆಗೆ ಅನುಗುಣವಾಗಿ ನಿತ್ಯ ಯಲ್ಲಾಪುರ ಪಟ್ಟಣಕ್ಕೆ ಬಿಸ್ ಬಿಡಿಸಿದರು. ಬಸ್ ಉದ್ಘಾಟನೆಗಾಗಿ ಸೋಮವಾರ ಕರಡೊಳ್ಳಿಗೆ ಹೋಗಿದ್ದ ಅವರು ವಿದ್ಯಾರ್ಥಿಗಳ ಜೊತೆ ಅದೇ ಬಸ್ಸಿನಲ್ಲಿ ಯಲ್ಲಾಪುರಕ್ಕೆ ಬಂದರು. 17ಕಿಮೀ ದೂರದವರೆಗೆ ಅವರು ಬಸ್ಸಿನಲ್ಲಿ ಸಾಗಿದರು. ಈ ಹಿಂದೆ ಮಳೆ ಪ್ರವಾಹದ ವೇಳೆಯಲ್ಲಿಯೂ ಶಿವರಾಮ ಹೆಬ್ಬಾರ್ ಸರ್ಕಾರಿ ಬಸ್ಸು ಏರಿ ಚಾಲಕರ ಪಕ್ಕ ಕುಳಿತು ಬಸ್ ಓಡಿಸಲು ಚಾಲಕರಿಗೆ ಧೈರ್ಯ ಹೇಳಿದ್ದರು.

Advertisement. Scroll to continue reading.

ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಬಸ್ ಇಲ್ಲದ ಗ್ರಾಮಕ್ಕೆ ಬಸ್ಸು ಕೊಂಡೊಯ್ದ ಕಾರಣ ಗೋಕರ್ಣದಿಂದ ಅಶೋಕೆ ಭಾಗಕ್ಕೆ ಬಸ್ ಓಡಾಟ ಶುರುವಾಗುವ ನಿರೀಕ್ಷೆಯಿದ್ದು, ಇದು ಆ ಭಾಗದ ಜನರಿಗೆ ನೆರವಾಗಲಿದೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸರ್ಕಾರಿ ಬಸ್ಸು ಏರಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದರಿಂದ ಆ ಭಾಗದ ಇನ್ನಷ್ಟು ಸಮಸ್ಯೆಗಳು ಬಗೆಹರಿಯುವ ನಿರೀಕ್ಷೆಯಿದೆ.

ShareSendTweetShare
ADVERTISEMENT
Previous Post

ಹೊನ್ನಾವರದ ಕಾರ್ಮಿಕನೇ ಕುಮಟಾದ ಗಾಂಜಾ ಮಾರಾಟಗಾರ!

Next Post

ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದ ಅಪರಿಚಿತ ಕರೆ!

Next Post
An unknown call shocked the authorities!

ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದ ಅಪರಿಚಿತ ಕರೆ!

Haliyala Sweet for the mouths of sugarcane growers!

ಹಳಿಯಾಳ: ಕಬ್ಬು ಬೆಳೆಗಾರರ ಬಾಯಿಗೆ ಸಿಹಿ!

Vijay Mallya Airlines scam: Naval Commandant's account also affected!

ಆನ್‌ಲೈನ್ ಷೇರು: ಜಾಪರ್ ತಲೆಗೆ ಮಕ್ಮಲ್ ಟೋಪಿ - ದುಬೈ ಗಣಪತಿಗೆ ಕೋಟಿ ರೂ ನಷ್ಟ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.