6
  • Latest
Vijay Mallya Airlines scam: Naval Commandant's account also affected!

ಆನ್‌ಲೈನ್ ಷೇರು: ಜಾಪರ್ ತಲೆಗೆ ಮಕ್ಮಲ್ ಟೋಪಿ – ದುಬೈ ಗಣಪತಿಗೆ ಕೋಟಿ ರೂ ನಷ್ಟ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆನ್‌ಲೈನ್ ಷೇರು: ಜಾಪರ್ ತಲೆಗೆ ಮಕ್ಮಲ್ ಟೋಪಿ – ದುಬೈ ಗಣಪತಿಗೆ ಕೋಟಿ ರೂ ನಷ್ಟ!

AchyutKumar by AchyutKumar
in ಸ್ಥಳೀಯ
Vijay Mallya Airlines scam: Naval Commandant's account also affected!

ದುಬೈನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿರುವ ಕುಮಟಾದ ಗಣಪತಿ ಹೆಗಡೆ ಆನ್‌ಲೈನ್ ಟ್ರೇಂಡಿಗ್ ಆಸೆಗೆ ಬಿದ್ದು 2 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಕಳೆದುಕೊಂಡಿದ್ದಾರೆ. ತಮ್ಮ ಪತ್ನಿ ಪ್ರಣಿತಾ ಹೆಗಡೆ ಅವರ ಖಾತೆಯಲ್ಲಿದ್ದ ಹಣವನ್ನು ಸಹ ಅವರು ಮೋಸದ ಜಾಲಕ್ಕೆ ಸುರಿದಿದ್ದಾರೆ!

ADVERTISEMENT

ಮೇ 1ರಂದು ಗಣಪತಿ ಹೆಗಡೆ ಅವರಿಗೆ ವಾಟ್ಸಪ್ ಮೂಲಕ ಆನ್‌ಲೈನ್ ಟ್ರೇಡಿಂಗ್ ವಿಷಯದ ಕುರಿತು ಗೊತ್ತಾಗಿದೆ. ಅಪರಿಚಿತ ಸಂಖ್ಯೆಯಿoದ ಬಂದ ಮೆಸೆಜ್ ನೋಡಿದ ಅವರು `ಮನೆಯಲ್ಲಿ ಕುಳಿತು ಸುಲಭವಾಗಿ ಹಣಗಳಿಸಬಹುದು’ ಎಂದು ನಂಬಿದ್ದಾರೆ. ಆ ನಂತರ ಮೆಸೆಜ್ ಮಾಡಿದವರಿಗೆ ಸಂಪರ್ಕಿಸಿ ಅವರು ಹೇಳಿದ ಗುಂಪು ಸೇರಿದ್ದಾರೆ. ಆ ಗುಂಪಿನಲ್ಲಿ 142 ಜನರಿದ್ದು, ಅವರೆಲ್ಲರೂ ಟ್ರೇಡಿಂಗ್ ಬಗ್ಗೆ ಮಾಹಿತಿಪಡೆಯುತ್ತಿರುವುದನ್ನು ಗಣಪತಿ ಹೆಗಡೆ ಗಮನಿಸಿದ್ದಾರೆ.

ಅದೆಲ್ಲವೂ ಸತ್ಯ ಎಂದು ಭಾವಿಸಿ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಜಮಾ ಮಾಡಿದ್ದಾರೆ. ಸಿಐಟಿಐ ಎಂಬ ಆಫ್ ಮೂಲಕ ಅವರು ಟ್ರೇಡಿಂಗ್ ಶುರು ಮಾಡಿದ್ದು, ಪತ್ನಿ ಖಾತೆಯಲ್ಲಿದ್ದ ಹಣವನ್ನು ಸೇರಿ ಒಟ್ಟು 22128500ರೂ ಹೂಡಿಕೆ ಮಾಡಿದ್ದಾರೆ. ಆದರೆ, ಆ ಹಣವನ್ನು ಹಿಂಪಡೆಯಲು ಮಾತ್ರ ಗಣಪತಿ ಹೆಗಡೆ ಅವರಿಂದ ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಗಣಪತಿ ಹೆಗಡೆ ಬ್ಲಾಕ್ ಆಗಿದ್ದಾರೆ. ಅವರನ್ನು ವಾಟ್ಸಪ್ ಗುಂಪಿನಿoದ ವಂಚಕರು ಹೊರದಬ್ಬಿದ್ದಾರೆ. ಗಣೇಶ ಹೆಗಡೆ ಅವರ ತಾಯಿ ಸುನಂದಾ ಹೆಗಡೆ ಅವರು ತಮ್ಮ ಮಗನಿಗಾದ ಅನ್ಯಾಯ-ವಂಚನೆಯ ಬಗ್ಗೆ ಆಕ್ರೋಶವ್ಯಕ್ತಪಡಿಸಿದರು. ಈ ಬಗ್ಗೆ ಕಾರವಾರದ ಸಿಎನ್‌ಇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

Advertisement. Scroll to continue reading.

ಜಾಪರ್ ತಲೆಗೂ ಟೋಪಿ!
ಭಟ್ಕಳದ ಕಿಡ್ವಾಯಿ ರಸ್ತೆಯಲ್ಲಿ ಮೊಬೈಲ್ ರಿಪೇರಿ ಮಾಡುವ ಶಮವಿಲ್ ಜಾಪರ್ ಅವರು ಷೇರು ಮಾರುಕಟ್ಟೆ ಹೆಸರಿನಲ್ಲಿ ಮೋಸ ಹೋಗಿದ್ದಾರೆ. ಅಪ್ಚಲ್ ಖಾನ್ ಹಾಗೂ ಶೇಖರ್ ಶಶಿಕಾಂತ ಎಂಬಾತರು ವಾಟ್ಸಪ್ ಫೋನ್ ಮಾಡಿ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಿದ್ದು, ಅದನ್ನು ನಂಬಿ ಶಮಿವಾಲ್ ಹಣ ಕೊಟ್ಟಿದ್ದಾರೆ. 9.23 ಲಕ್ಷ ರೂ ಹಣಪಡೆದ ಅವರಿಬ್ಬರು ಶಮವಿಲ್ ಜಾಪರ್ ಅವರಿಗೆ ಲಾಭಾಂಶ ನೀಡದೇ ಯಾಮಾರಿಸಿದ್ದಾರೆ. ನೀಡಿದ ಹಣ ಸಹ ಮರಳಿ ಪಾವತಿಸಿಲ್ಲ. ಪ್ರಕರಣ ದಾಖಲಿಸಿಕೊಂಡ ಭಟ್ಕಳ ಪೊಲೀಸರು ವಂಚಕರ ಶೋಧ ನಡೆಸಿದ್ದಾರೆ.

Advertisement. Scroll to continue reading.
Previous Post

ಹಳಿಯಾಳ: ಕಬ್ಬು ಬೆಳೆಗಾರರ ಬಾಯಿಗೆ ಸಿಹಿ!

Next Post

ಸಾಲವನ್ನು ಪಡೆದಿಲ್ಲ.. ಜಾಮೀನು ಹಾಕಲಿಲ್ಲ… ಅಡಿಕೆ ವಕಾರಿ ಮಾಡಲು ಹೋಗಿ ಭೂಮಿ ಹಕ್ಕು ಕಳೆದುಕೊಂಡ ಕೃಷಿಕ!

Next Post
Didn't get a loan.. didn't put up collateral... Farmer loses land rights after going to betel nut plantation!

ಸಾಲವನ್ನು ಪಡೆದಿಲ್ಲ.. ಜಾಮೀನು ಹಾಕಲಿಲ್ಲ... ಅಡಿಕೆ ವಕಾರಿ ಮಾಡಲು ಹೋಗಿ ಭೂಮಿ ಹಕ್ಕು ಕಳೆದುಕೊಂಡ ಕೃಷಿಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ