6
  • Latest
Didn't get a loan.. didn't put up collateral... Farmer loses land rights after going to betel nut plantation!

ಸಾಲವನ್ನು ಪಡೆದಿಲ್ಲ.. ಜಾಮೀನು ಹಾಕಲಿಲ್ಲ… ಅಡಿಕೆ ವಕಾರಿ ಮಾಡಲು ಹೋಗಿ ಭೂಮಿ ಹಕ್ಕು ಕಳೆದುಕೊಂಡ ಕೃಷಿಕ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಾಲವನ್ನು ಪಡೆದಿಲ್ಲ.. ಜಾಮೀನು ಹಾಕಲಿಲ್ಲ… ಅಡಿಕೆ ವಕಾರಿ ಮಾಡಲು ಹೋಗಿ ಭೂಮಿ ಹಕ್ಕು ಕಳೆದುಕೊಂಡ ಕೃಷಿಕ!

AchyutKumar by AchyutKumar
June 16, 2025
in ಸ್ಥಳೀಯ
Didn't get a loan.. didn't put up collateral... Farmer loses land rights after going to betel nut plantation!
advt advt advt
ADVERTISEMENT

ಈಗಾಗಲೇ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಿರಸಿಯ ಪತ್ರಕರ್ತ ರವೀಶ ಹೆಗಡೆ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದೆ. ವಂಚನೆಗೆ ಒಳಗಾದ ಚಿಪಗಿಯ ದಿನೇಶ ಚಿಂಚ್ರೇಕರ್ ಪೊಲೀಸ್ ದೂರು ನೀಡಿದ್ದಾರೆ.

ಚಿಪಗಿಯ ಮಹಾಬಲೇಶ್ವರ ಹೆಗಡೆ ಅವರ ಜೊತೆ ಚಿಪಗಿ ಲಂಡಕನಳ್ಳಿಯ ದಿನೇಶ ಚಿಂಚ್ರೆಕರ್ ಅವರು ಅಡಿಕೆ ವಕಾರಿ ನಡೆಸುವ ಮಾತುಕಥೆ ಮಾಡಿದ್ದರು. ಇದಕ್ಕಾಗಿ ದಿನೇಶ ಚಿಂಚ್ರೇಕರ್ ಅವರ ಭೂಮಿ ಮೇಲೆ ಯಲ್ಲಾಪುರದ ಉಮ್ಮಚ್ಗಿಯ ಶ್ರೀಮಾತಾ ಸೊಸೈಟಿಯಲ್ಲಿ ಸಾಲಪಡೆಯಲಾಗಿದ್ದು, ಮಹಾಬಲೇಶ್ವರ ಹೆಗಡೆ ಸಾಲ ಪಡೆದಿದ್ದು, ಅದನ್ನು ಮರು ಪಾವತಿ ಮಾಡಿರಲಿಲ್ಲ.

ADVERTISEMENT
ADVERTISEMENT

ಸಾಕಷ್ಟು ಸಲ ಕೇಳಿಕೊಂಡರೂ ಮಹಾಬಲೇಶ್ವರ ಹೆಗಡೆ ಹಣವನ್ನು ಸೊಸೈಟಿಗೆ ಹಣ ನೀಡಿರಲಿಲ್ಲ. ಆಗ ಚಿಪಗಿಯ ಮಹಾಬಲೇಶ್ವರ ಹೆಗಡೆ ಅವರ ಸಂಬoಧಿ ಎಂದು ಪರಿಚಯಿಸಿಕೊಂಡ ಪತ್ರಕರ್ತ ರವೀಶ ಹೆಗಡೆ `ಆ ಸಾಲದ ಸಂಪೂರ್ಣ ಜವಾಬ್ದಾರಿ ನನ್ನದು’ ಎಂಬ ಭರವಸೆ ನೀಡಿದ್ದರು. ಶಿರಸಿ ಯಲ್ಲಾಪುರ ನಾಕಾದ ಜರಾಕ್ಸ್ ಅಂಗಡಿ ಬಳಿ ದಿನೇಶ ಚಿಂಚ್ರೆಕರ್ ಅವರನ್ನು ಕರೆಯಿಸಿಕೊಂಡು `ಸಾಲ ತೀರಿಸುವುದಕ್ಕಾಗಿ’ ಎಂದು ನಂಬಿಸಿ ಕೆಲ ಪತ್ರಿಕೆಗಳ ಮೇಲೆ ಸಹಿಪಡೆದಿದ್ದರು.

Advertisement. Scroll to continue reading.
Advertisement. Scroll to continue reading.

ಅದಾದ ನಂತರ ಶಿರಸಿ ಉಪನೋಂದಣಿ ಕಚೇರಿಗೂ ಕರೆದೊಯ್ದು ಅಧಿಕಾರ ಪತ್ರಪಡೆದಿದ್ದರು. ಕಾನಸೂರು, ಮಂಚಿಕೇರಿ ಕೆಡಿಸಿಸಿ ಬ್ಯಾಂಕಿಗೆ ಕರೆದೊಯ್ದು ಅಲ್ಲಿ ಸಹ ಸಹಿ ಹಾಕಿಸಿಕೊಂಡಿದ್ದರು. ಅದಾದ ನಂತರ 2024ರಲ್ಲಿ ನಕಲಿ ದಾಖಲೆ ನೀಡಿ ಜಾಮೀನು ನೀಡಿದ ಬಗ್ಗೆ ದಿನೇಶ ಚಿಂಚ್ರೇಕರ್ ಅವರ ವಿರುದ್ಧ ಪ್ರಕರಣ ದಾಖಲಾಯಿತು. ವಿಚಾರಿಸಿದಾಗ ಈ ಹಿಂದೆ ತಾವು ಮೋಸ ಹೋಗಿ ವಿವಿಧ ಕಾಗದ ಪತ್ರಗಳಿಗೆ ಸಹಿ ಹಾಕಿದ್ದು ಗೊತ್ತಾಯಿತು. `ತಾನೂ ಸಾಲವನ್ನು ಪಡೆದಿಲ್ಲ. ಯಾರಿಗೂ ಜಾಮೀನು ಹಾಕಿಲ್ಲ’ ಎಂದು ದಿನೇಶ ಚಿಂಚ್ರೇಕರ್ ಹೇಳಿದರು. ಆದರೆ, ಕಾಗದ ಪತ್ರಗಳಲ್ಲಿ ಅವರದ್ಧೇ ಸಹಿಯಿದ್ದ ಕಾರಣ ಇದನ್ನು ಯಾರೂ ನಂಬಲಿಲ್ಲ.

ತನ್ನಿoದ ಉಪಾಯವಾಗಿ ಸಹಿಪಡೆದು ಬ್ಯಾಂಕಿಗೆ ಒದಗಿಸಿ ಸಾಲಪಡೆದಿರುವುದು ಹಾಗೂ ಜಾಮೀನು ಹಾಕಿಸಿರುವ ರವೀಶ ಹೆಗಡೆ ಕಿತಾಪತಿ ಬಗ್ಗೆ ಅರಿತು ದಿನೇಶ ಚಿಂಚ್ರೇಕರ್ ಪೊಲೀಸರ ಮೊರೆ ಹೋದರು. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ರವೀಶ ಹೆಗಡೆ ವಿರುದ್ಧ ಪ್ರಕರಣ ದಾಖಲಿಸಿದರು.

ShareSendTweetShare
ADVERTISEMENT
Previous Post

ಆನ್‌ಲೈನ್ ಷೇರು: ಜಾಪರ್ ತಲೆಗೆ ಮಕ್ಮಲ್ ಟೋಪಿ – ದುಬೈ ಗಣಪತಿಗೆ ಕೋಟಿ ರೂ ನಷ್ಟ!

Next Post

ವಿದೇಶಿ ಯೋಧನಿಗೆ ಗೋಕರ್ಣದಲ್ಲಿ ಮುಕ್ತಿ!

Next Post
ವಿದೇಶಿ ಯೋಧನಿಗೆ ಗೋಕರ್ಣದಲ್ಲಿ ಮುಕ್ತಿ!

ವಿದೇಶಿ ಯೋಧನಿಗೆ ಗೋಕರ್ಣದಲ್ಲಿ ಮುಕ್ತಿ!

Thieves bypass tight security: Headmaster faces money laundering charges!

ಜೂನ್ 17: ಕರಾವಳಿ ಜೊತೆ ಮಲೆನಾಡಿನ ಶಾಲೆಗೂ ಮಳೆ ರಜೆ!

Wind-rain-landfall Tahsildar rushes to neighboring area!

ಗಾಳಿ-ಮಳೆ-ಭೂ ಕುಸಿತ: ನೆರೆ ಪ್ರದೇಶಕ್ಕೆ ತಹಶೀಲ್ದಾರ್ ದೌಡು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.