6
  • Latest
ಕಾರವಾರ: ಪತ್ನಿಯನ್ನು ಪೊಲೀಸರಿಗೊಪ್ಪಿಸಿದ ಪತಿ ಪರಾರಿ!

ಕಾರವಾರ: ಪತ್ನಿಯನ್ನು ಪೊಲೀಸರಿಗೊಪ್ಪಿಸಿದ ಪತಿ ಪರಾರಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾರವಾರ: ಪತ್ನಿಯನ್ನು ಪೊಲೀಸರಿಗೊಪ್ಪಿಸಿದ ಪತಿ ಪರಾರಿ!

AchyutKumar by AchyutKumar
in ಸ್ಥಳೀಯ
ಕಾರವಾರ: ಪತ್ನಿಯನ್ನು ಪೊಲೀಸರಿಗೊಪ್ಪಿಸಿದ ಪತಿ ಪರಾರಿ!

ಗೋವಾದಿಂದ ಅಗ್ಗದ ಸರಾಯಿ ತಂದು ಮಾರಾಟ ಮಾಡುವ ಮೂಲಕ ಕಾರವಾರದಲ್ಲಿ ಬದುಕು ಕಟ್ಟಿಕೊಂಡಿದ್ದ ದಂಪತಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಸುರೇಶ ಕಲ್ಗುಟ್ಕರ್ ತಮ್ಮ ಪತ್ನಿ ಪಲ್ಲವಿ ಕಲ್ಗುಟ್ಕರ್ ಅವರನ್ನು ಪೊಲೀಸರಿಗೆ ಒಪ್ಪಿಸಿ ತಾವು ಪರಾರಿಯಾಗಿದ್ದಾರೆ!

ADVERTISEMENT

ಕಾರವಾರದ ಕಡವಾಡ ಹಳೆಕೋಟದಲ್ಲಿ ಸುರೇಶ ಕಲ್ಗುಟ್ಕರ್ ಹಾಗೂ ಪಲ್ಲವಿ ಕಲ್ಗುಟ್ಕರ್ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದರು. ಆ ಅಂಗಡಿಯಲ್ಲಿ ಅಕ್ರಮ ಸರಾಯಿಯನ್ನು ಸಹ ಅವರು ಮಾರುತ್ತಿದ್ದರು. ಗೋವಾದಿಂದ ಕಡಿಮೆ ಬೆಲೆಗೆ ಬಗೆ ಬಗೆಯ ಬಾಟಲಿಗಳನ್ನು ತಂದು ಅದನ್ನು ಇಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಗೋವಾ ಸರಾಯಿ ಮಾರಾಟದಿಂದ ರಾಜ್ಯ ಸರ್ಕಾರದ ತೆರಿಗೆ ವಂಚನೆ ಆಗುತ್ತಿರುವುದನ್ನು ಅರಿತ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಅವರ ಅಂಗಡಿ ಮೇಲೆ ದಾಳಿ ಮಾಡಿದರು. ಜೂನ್ 17ರಂದು ಗ್ರಾಮೀಣ ಠಾಣೆ ಪಿಎಸ್‌ಐ ನೇಹಾಲ್ ಖಾನ್ ಅವರ ಅಂಗಡಿಗೆ ಭೇಟಿ ನೀಡಿದಾಗ 4050ರೂ ಮೌಲ್ಯದ ಗೋವಾ ಸರಾಯಿ ಸಿಕ್ಕಿತು. ಪೊಲೀಸರನ್ನು ಕಂಡ ಸುರೇಶ ಕಲ್ಗುಟ್ಕರ್ ತಮ್ಮ ಪತ್ನಿ ಪಲ್ಲವಿ ಕಲ್ಗುಟ್ಕರ್ ಅವರನ್ನು ಅಂಗಡಿಯಲ್ಲಿಯೇ ಬಿಟ್ಟು ಅಲ್ಲಿಂದ ಓಡಿದರು.

Advertisement. Scroll to continue reading.

ಪಲ್ಲವಿ ಕಲ್ಗುಟ್ಕರ್ ಅವರ ಜೊತೆ ಗೋವಾ ಸರಾಯಿಯನ್ನು ಸಹ ಪೊಲೀಸರು ವಶಕ್ಕೆಪಡೆದಿದ್ದು, ದಂಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪತ್ನಿ ಬಿಟ್ಟು ಪರಾರಿಯಾದ ಸುರೇಶ ಕಲ್ಗುಟ್ಕರ್ ಹುಡುಕಾಟ ಮುಂದುವರೆದಿದೆ.

Advertisement. Scroll to continue reading.
Previous Post

ಜನಸಾಮಾನ್ಯರ ದೂರು: ಸರ್ಕಾರಿ ಆಸ್ಪತ್ರೆಗೆ ವೈದ್ಯರಿಲ್ಲದಿರುವುದೇ ರೋಗ!

Next Post

ಭಟ್ಕಳ: ಕಾರ್ಪರೆಂಟರ್ ಮನೆಯಲ್ಲಿ ಲಕ್ಷ ಲಕ್ಷ ದರೋಡೆ

Next Post
Kaiga's employee went home: The gold jewelry at home was stolen!

ಭಟ್ಕಳ: ಕಾರ್ಪರೆಂಟರ್ ಮನೆಯಲ್ಲಿ ಲಕ್ಷ ಲಕ್ಷ ದರೋಡೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ