6
  • Latest
Tremors when it rains This school building is not even fit for a care center!

ಮಳೆ ಬಂದರೆ ನಡುಕ: ಈ ಶಾಲಾ ಕಟ್ಟಡ ಕಾಳಜಿ ಕೇಂದ್ರಕ್ಕೂ ಯೋಗ್ಯವಲ್ಲ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಳೆ ಬಂದರೆ ನಡುಕ: ಈ ಶಾಲಾ ಕಟ್ಟಡ ಕಾಳಜಿ ಕೇಂದ್ರಕ್ಕೂ ಯೋಗ್ಯವಲ್ಲ!

AchyutKumar by AchyutKumar
in ಸ್ಥಳೀಯ
Tremors when it rains This school building is not even fit for a care center!

ನೆರೆ ಪ್ರವಾಹ, ಗುಡ್ಡ ಕುಸಿತ ಸೇರಿ ಪ್ರಕೃತಿ ವಿಕೋಪ ನಡೆದಾಗ ಸರ್ಕಾರಿ ಶಾಲೆಯನ್ನು ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತದೆ. ಆದರೆ, ಕುಮಟಾದ ಮೂಡಂಗಿಯಲ್ಲಿ ಸರ್ಕಾರಿ ಶಾಲೆಯೇ ಶಿಥಿಲಾವ್ಯವಸ್ಥೆಯಲ್ಲಿದೆ. ಜೀವಭಯದಿಂದ ನಲುಗಿದ ಶಿಕ್ಷಕರು ಮಕ್ಕಳನ್ನು ಬೇರೆಯವರ ಮನೆಗೆ ಕರೆದೊಯ್ದು ಪಾಠ ಮಾಡುತ್ತಿದ್ದಾರೆ.

ADVERTISEMENT

ಮೂಡಂಗಿಯ ಸರ್ಕಾರಿ ಶಾಲೆಗೆ ಶತಮಾನ ತುಂಬಿದೆ. ಆದರೂ, ಅಲ್ಲಿ ಹೊಸ ಕಟ್ಟಡ ನಿರ್ಮಾಣದ ಕೆಲಸ ನಡೆದಿಲ್ಲ. ಕಳೆದ ವರ್ಷ ಗುಡ್ಡ ಕುಸಿತವಾಗಿದ್ದರಿಂದ ಶಾಲಾ ಕಟ್ಟಡವೂ ನಲುಗಿದೆ. ಕಳೆದ ವರ್ಷದ ಗುಡ್ಡ ಕುಸಿತದ ಮಣ್ಣನ್ನು ಈವರೆಗೂ ತೆರವು ಮಾಡಿಲ್ಲ. ಮತ್ತೆ ಗುಡ್ಡ ಕುಸಿಯುವ ಆತಂಕವೂ ದೂರವಾಗಿಲ್ಲ.

ಕಳೆದ ಮಳೆಗಾಲದಲ್ಲಿ ಶಾಲಾ ಆವರಣಕ್ಕೆ ಗುಡ್ಡ ಕುಸಿತದ ಮಣ್ಣು ಬಂದಿದ್ದು, ಆ ವೇಳೆ ಶಾಲೆಗೆ ರಜೆ ನೀಡಿದ್ದ ಕಾರಣ ಮಕ್ಕಳು ಬಚಾವಾಗಿದ್ದರು. ಅದಾದ ನಂತರ ಅನಿವಾರ್ಯವಾಗಿ ಅದೇ ಶಾಲೆಯಲ್ಲಿ ಶಿಕ್ಷಣ ಮುಂದುವರೆದಿದ್ದು, ಇದೀಗ ಸಮೀಪದ ಮನೆಯೊಂದರಲ್ಲಿ ಮಕ್ಕಳಿಗೆ ಪಾಠ ನಡೆಯುತ್ತಿದೆ. ಶಾಲೆ ಅಂಗಳಕ್ಕೆ ಕಲ್ಬಂಡೆ ಬಂದು ಬಿದ್ದಿರುವುದನ್ನು ಗಣಿ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು. ಶಿಕ್ಷಣ ಇಲಾಖೆಯವರು ಆಗಮಿಸಿ ಅದನ್ನು ವೀಕ್ಷಿಸಿದ್ದರು. ಆದರೆ, ಅದರಿಂದ ಶಾಲೆಗೆ ಕಿಂಚಿತ್ತು ಪ್ರಯೋಜನ ಆಗಲಿಲ್ಲ. `ಅಂಗಳದಲ್ಲಿ ಬಿದ್ದ ಬಂಡೆ ತೆಗೆಯುತ್ತೇವೆ. ಮಣ್ಣನ್ನು ಬದಿಗೆ ಸರಿಸುತ್ತೇವೆ’ ಎಂದು ಅಧಿಕಾರಿಗಳು ನೀಡಿದ ಭರವಸೆಯೂ ಈಡೇರಿಲ್ಲ.

Advertisement. Scroll to continue reading.

ಮೂಡಂಗಿ ಭಾಗದ ನದಿ ತೀರದ ಮನೆಗಳಿಗೆ ನೀರು ನುಗ್ಗಿದಾಗ ಈ ಶಾಲೆಗೆ ಅಲ್ಲಿನವರನ್ನು ಸ್ಥಳಾಂತರಿಸಲಾಗುತ್ತದೆ. ಆದರೆ, ಶಾಲೆಯ ಮೇಲೆ ಮಣ್ಣು ಬಿದ್ದರೆ ಎಲ್ಲಿ ಹೋಗುವುದು? ಎಂಬುದು ಇಲ್ಲಿನವರ ಪ್ರಶ್ನೆ. ಸದ್ಯ ಅದೇ ಆತಂಕದಲ್ಲಿ ಶಾಲಾ ಮಕ್ಕಳ ಸ್ಥಳಾಂತರ ನಡೆದಿದ್ದು, ಸುರಕ್ಷತೆ ಒದಗಿಸಿ ಎಂದು ಮನವಿ ಮಾಡಿದರೂ ಕೇಳುವವರಿಲ್ಲ ಎಂದು ಗ್ರಾ ಪಂ ಸದಸ್ಯ ಮೋಹನ ಮೂಡಂಗಿ ಅಸಮಧಾನವ್ಯಕ್ತಪಡಿಸಿದರು.

Advertisement. Scroll to continue reading.
Previous Post

ಕೈಗಾ: ಸಂಸದ ಕಾಗೇರಿಗೆ ಇಲ್ಲಿ ಕಿಂಚಿತ್ತು ಕಿಮ್ಮತ್ತಿಲ್ಲ!

Next Post

ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ KSRTC ಡೀಸಿ

Next Post
KSRTC DC visits bus stand

ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ KSRTC ಡೀಸಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ